ಜನ ಮನದ ನಾಡಿ ಮಿಡಿತ

Advertisement

ಬೈಂದೂರು: ನಾಗೂರು ಶ್ರೀ ಲಲಿತ ಕೃಷ್ಣ ಸಭಾಭವನದಲ್ಲಿ `ಗುರುಪೂರ್ಣಿಮಾ ಸಂಭ್ರಮ 2025′

ಗುರುಪೂರ್ಣಿಮೆಯ ಪ್ರಯುಕ್ತ ನಾಗೂರು ಶ್ರೀ ಲಲಿತ ಕೃಷ್ಣ ಸಭಾಭವನದಲ್ಲಿ ಗುರುಪೂರ್ಣಿಮಾ ಸಂಭ್ರಮ 2025 ನಡೆಯಿತು.

ಯೋಗ ಶಿಕ್ಷಕರಾದ ಆಚಾರ್ಯ ಶ್ರೀ ಕೇಶವಜೀ ಕಾರ್ಯಕ್ರಮದ ನೇತೃತ್ವ ವಹಿಸಿದ್ರು. ಭಜನಾ ಕಾರ್ಯಕ್ರಮ, ಗುರುಪ್ರಾರ್ಥನೆ, ಸತ್ಸಂಗದ ನಂತರ ಅಕಾಲಿಕ ಮರಣ ಹೊಂದಿದ ನಿಸ್ವಾರ್ಥ ಮತ್ತು ಸೇವಾ ಮನೋಭಾವದ ಕ್ರಿಯಾಶೀಲಾ ಸ್ವಯಂ ಸೇವಕರಾದ ಗೀತಾ ಆಚಾರ್ಯ ನಾಯ್ಕನಕಟ್ಟೆ ಇವರ ಆತ್ಮ ಸದ್ಗತಿಗಾಗಿ ಮೌನ ಪ್ರಾರ್ಥನೆ ಅರ್ಪಿಸಲಾಯಿತು. ಗುರುಪೂರ್ಣಿಮೆ ವಿಶೇಷದ ಬಗ್ಗೆ ಆಚಾರ್ಯರು ಉಪನ್ಯಾಸ ನೀಡಿದ್ದಾರೆ. ನಂತರ ಗುರುಪೂಜೆ, ಶ್ರೀ ದತ್ತಾತ್ರೇಯ ಗುರುಗಳ ಬೆಳ್ಳಿ ಪಾದುಕೆಗೆ ಪಂಚಾಮೃತ ಅಭಿಷೇಕ ಸಹಿತ ಶೋಡಷೋಪಚಾರ ಮುಂತಾದ ಧಾರ್ಮಿಕ ವಿಧಿ ವಿಧಾನಗಳು ನಡೆದಿವೆ.

ಕೊನೆಯಲ್ಲಿ ಮಹಾಮಂಗಳಾರತಿ ಪ್ರಸಾದ ವಿತರಣೆ ನಡೆಯಿತು. ಪೂಜೆ ಮತ್ತು ಪ್ರಸಾದ ವೆಚ್ಚಗಳನ್ನು ಪಾಂಡುರಂಗ ಅಂಗಡಿಮನೆ ಗಿರಿಜಾ ನಾರಾಯಣ ತಾರಪತಿ ಭರಿಸಿದ್ದಾರೆ. ಮಾಲೀಕರಾದ ರತ್ನಾಕರ ಉಡುಪರು ಕಾರ್ಯಕ್ರಮ ನಡೆಸಲು ಉಚಿತವಾಗಿ ಸಭಾಂಗಣ ನೀಡಿದ್ದು, 200ಕ್ಕೂ ಅಧಿಕ ಮಂದಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ.

Leave a Reply

Your email address will not be published. Required fields are marked *

ಮಂಗಳೂರು: ಆಟವಾಡುತ್ತಾ 15 ಅಡಿ ಆಳದ ನೀರಿದ್ದ ಬಾವಿಗೆ ಬಿದ್ದ ಹೆಣ್ಣು ಮಗು….!

ಮಂಗಳೂರು: ಕಲ್ಲಡ್ಕ ಪ್ರಭಾಕರ್ ಭಟ್ ಅವರ ಭಾಷಣದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ..!

ಬಂಟ್ವಾಳ: ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ “ಶ್ರೀರಾಮನ ಚರಿತ್ರೆಯ” ಯಕ್ಷಗಾನ….!

ಮಂಗಳೂರು: ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ’ ಕೃತಿ ಬಿಡುಗಡೆ..!

ಬಂಟ್ವಾಳ: ಜೋರಾದ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿ..!

ಉಡುಪಿ: ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಮೋಸ ಮಾಡಿದ ಮಹಿಳೆ..!

ದುಬೈ: ಅಕ್ಟೋಬರ್ 25 ರಂದು ದುಬೈನಲ್ಲಿ ದುಬೈ ಗಡಿನಾಡ ಉತ್ಸವ

ಮಂಗಳೂರು: ಅಶೋಕ ಜನಮನ ಕಾರ್ಯಕ್ರಮ ಆಯೋಜನೆ; ನೂಕು ನುಗ್ಗಲು ಉಂಟಾಗಿ ಅಸ್ವಸ್ಥರಾದ 11ಕ್ಕೂ ಹೆಚ್ಚು ಜನ…!

ಬಂಟ್ವಾಳ: ದ.ಕ.ಜಿಲ್ಲಾ ತುಳು ನಾಟಕ ಕಲಾವಿದರ ಒಕ್ಕೂಟ ವಾರ್ಷಿಕ ಮಹಾಸಭೆ; ನೂತನ ಅಧ್ಯಕ್ಷರಾಗಿ ಕಿಶೋರ್ ಡಿ.ಶೆಟ್ಟಿ ಪುನರಾಯ್ಕೆ….!

error: Content is protected !!