ಸಾಲೆತ್ತೂರು ಶಿವಗಿರಿ ಸದಾಶಿವ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೆ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಚಾಲನೆ ನೀಡಿದ್ದಾರೆ. ಬಳಿಕ ಆಶೀವರ್ಚನ ನೀಡಿ, ನಮ್ಮ ಅಂತರಂಗದಲ್ಲಿ ದೇವರು ಇರುವುದನ್ನು ಅರಿತುಕೊಂಡರೆ ಎಲ್ಲ ಕಾರ್ಯಗಳನ್ನು ಯಶಸ್ವಿಯಾಗಿಸಲು ಸಾಧ್ಯ. ದೇಗುಲದ ಜೀಣೋದ್ಧಾರಕ್ಕೆ ಪ್ರತಿಯೊಬ್ಬರು ಕೈಜೋಡಿಸಬೇಕು. ಗ್ರಾಮದ ದೇವಳದ ಜೀಣೋದ್ಧಾರ ಕಾರ್ಯ ಭಕ್ತರಿಗೆ ಲಭಿಸಿದ ಪುಣ್ಯವಕಾಶ.
ದೇವಸ್ಥಾನ ಜೀಣೋದ್ಧಾರ ಪ್ರಕ್ರಿಯೆಗೆ ದ್ವಾರ ಶಿಲಾನ್ಯಾಸ ನಡೆಸಿದ್ದು ಕೂಡಾ ಶುಭ ಸೂಚನೆಯೇ ಆಗಿದೆ ಎಂದಿದ್ದಾರೆ. ಪ್ರಧಾನ ಅರ್ಚಕರಾದ ಭಾರ್ಗವ ಉಡುಪರ ನೇತೃತ್ವದಲ್ಲಿ ಧಾರ್ಮಿಕ ಪೂಜಾ ಕೈಂಕರ್ಯಗಳು ನಡೆದಿದೆ. ಇನ್ನು ಸಂದರ್ಭದಲ್ಲಿ ಕ್ಷೇತ್ರ ತಂತ್ರಸ್ಥಾನದ ಮುಖ್ಯಸ್ಥರಾದ ಶ್ರೀನಿವಾಸ ಆಚಾರ್ ಮಂಕುಡೆ, ಮಂಗಳೂರು ಮನಪಾದ ವಲಯ ಆಯುಕ್ತರಾದ ರೇಖಾ ಜೆ ಶೆಟ್ಟಿ, ಶೀನಪ್ಪ ಆಳ್ವ ಕೊಲ್ಲಾಡಿ, ಚಿತ್ತರಂಜನ್ ಕರೈ, ಕೃಷಿಕರಾದ ಗೋಪಣ್ಣ ರೈ ಅಗರಿ, ಶ್ರೀಧರ ಪೂಜಾರಿ ಮಾವೆ, ಸದಾಶಿವ ಸೇವಾ ಟ್ರಸ್ಟ್ ಅಧ್ಯಕ್ಷರಾದ ಎಸ್ ರವಿ ಕುಮಾರ್ ಬಳ್ಳಕ್ಕುರಾಯ, ಕೋಶಾಧಿಕಾರಿ ಮಂಜುನಾಥ ರೈ ಅಗರಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಗಿರೀಶ್ ಭಂಡಾರಿ ಕುಳಾಲು ಸೇರಿದಂತೆ ಅನೇಕರು ಉಪಸ್ಥಿತರಿದ್ರು. ಈ ಪುಣ್ಯಕಾರ್ಯಕ್ರಮದಲ್ಲಿ ಗ್ರಾಮಸ್ಥರು ಸೇರಿದಂತೆ ಊರ ಪರವೂರ ಭಕ್ತಾದಿಗಳು ಭಾಗಿಯಾಗಿದ್ದಾರೆ.
ಹೊಸದಿಲ್ಲಿ: ಪಟ್ಲ ಸತೀಶ್ ಶೆಟ್ಟಿ ಅವರಿಗೆ ಡಾ. ಶಿವರಾಮ ಕಾರಂತ ಪ್ರಶಸ್ತಿ..! ಪ್ರಖ್ಯಾತ ಭಾಗವತ, ಸಂಘಟಕ ಪಟ್ಲ ಸತೀಶ್ ಶೆಟ್ಟಿ…
ಮಣಿಪಾಲ: ಸರಳೆಬೆಟ್ಟು ನಗರಸಭಾ ಸದಸ್ಯೆಯ ಸಹೋದರ ಆತ್ಮಹತ್ಯೆ ವೈಯಕ್ತಿಕ ಕಾರಣದಿಂದ ಮನನೊಂದ ವ್ಯಕ್ತಿಯೊಬ್ಬರು ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ…
ಮಲೆಯಾಳ ಕಡ್ಡಾಯ ಮಸೂದೆ ವಿರೋಧಿ ಸಮಿತಿ ವತಿಯಿಂದ ಕೇರಳದ ವಿರೋಧ ಪಕ್ಷದ ನಾಯಕ ಸನ್ಮಾನ್ಯ ವಿ ಡಿ ಸತೀಶನ್ ಅವರನ್ನು…
ಉಡುಪಿ : ಜಿಲ್ಲೆಯ ಹಿರಿಯ ರಾಜಕಾರಣಿ, ಬೈಂದೂರಿನ ಮಾಜಿ ಶಾಸಕ ಬಸ್ರೂರು ಅಪ್ಪಣ್ಣ ಹೆಗ್ಡೆ ಅವರು ಅಲ್ಪಕಾಲದ ಅಸೌಖ್ಯದಿಂದ…
ಮೂಲತಃ ಪುತ್ತೂರು ಬೆಂದ್ರುತೀರ್ಥ ನಿವಾಸಿ, ಪ್ರಸಕ್ತ ರಾಯಿ ಸಮೀಪದ ಮಾಬೆಟ್ಟು ಎಂಬಲ್ಲಿ ವಾಸವಾಗಿದ್ದ ನಿವೃತ್ತ ಕೃಷಿ ಅಧಿಕಾರಿ ನಾರಾಯಣ ನಾಯ್ಕ್…
ದೆಹಲಿ ಕರ್ನಾಟಕ ಸಂಘದಿಂದ ಖ್ಯಾತ ಯಕ್ಷಗಾನ ಭಾಗವತರಾದ ಪಟ್ಲ ಸತೀಶ್ ಶೆಟ್ಟಿಯವರಿಗೆ ಅತ್ಯುನ್ನತ ಡಾ. ಶಿವರಾಮ ಕಾರಂತ ಪ್ರಶಸ್ತಿ ಘೋಷಣೆ…