ಮಂಗಳೂರು; ಶ್ರೀಮAತರು ಮತ್ತು ಉದ್ಯಮಿಗಳನ್ನು ಗುರಿಯಾಗಿರಿಸಿಕೊಂಡು ದೇಶಾದ್ಯಂತ ವಂಚನಾ ಜಾಲವನ್ನು ಹೊಂದಿದ್ದ ಮಂಗಳೂರಿನ ವಂಚಕನನ್ನು ಮಂಗಳೂರು ನಗರ ಪೊಲೀಸರು ಬಂಧಿಸಿದ್ದಾರೆ. ಹತ್ತು ವರ್ಷಗಳಲ್ಲಿ ಈ ಆರೋಪಿ ರೋಹನ್ ಸಲ್ಡಾನಾ ಇನ್ನೂರು ಕೋಟಿ ರೂಪಾಯಿಗೂ ಅಧಿಕ ಮೊತ್ತದ ವಂಚನೆ ಎಸಗಿದ್ದಾನೆ ಎನ್ನಲಾಗುತ್ತಿದೆ.
ಮಂಗಳೂರಿನ ಸೆನ್ ಠಾಣೆಯಲ್ಲಿ ಇತ್ತೀಚೆಗೆ ಎರಡು ವಂಚನಾ ಪ್ರಕರಣಗಳು ದಾಖಲಾಗಿದ್ದವು. ಇದಕ್ಕೆ ಸಂಬAಧಿಸಿದAತೆ ತನಿಖೆ ನಡೆಸುತ್ತಿದ್ದ ಪೊಲೀಸರು ಗುರುವಾರ ರಾತ್ರಿ ಮಹತ್ವದ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಜಪ್ಪಿನ ಮೊಗರು ಬಳಿಯ ತಂದೊಳಿಗೆ ಎಂಬಲ್ಲಿರುವ ತನ್ನ ಐಶಾರಾಮಿ ಮನೆಯಲ್ಲಿ ಇದ್ದಾಗಲೇ ಆರೋಪಿಯನ್ನು ಬಂಧಿಸಲಾಗಿದೆ.ಬAಧಿತ ದುಬಾಯ್ಸ್ ರೋಹನ್ ಸಲ್ಡಾನಾ ದೇಶದ ಪ್ರಮುಖ ನಗರಗಳಲ್ಲಿ ಏಜೆಂಟರನ್ನು ನೇಮಿಸಿಕೊಂಡು ವ್ಯಾಪಾರೋದ್ಯಮಿಗಳಿಗೆ ಕಡಿಮೆ ಬಡ್ಡಿಯಲ್ಲಿ ಸಾಲ ಕೊಡುವ ಆಮಿಷ ಒಡ್ಡುತ್ತಿದ್ದ. ಸುಮಾರು ನೂರು ಕೋಟಿ ಸಾಲವನ್ನು ಮೂರರಿಂದ ನಾಲ್ಕು ಶೇಕಡಾ ಬಡ್ಡಿಗೆ ಕೊಡುವ ಭರವಸೆ ಕೊಡುತ್ತಿದ್ದ. ಜಪ್ಪಿನ ಮೊಗರುನಲ್ಲಿರುವ ವೈಭವೋಪೇತ ಬಂಗಲೆಯಲ್ಲಿ ಆದರಾತಿಥ್ಯ ಕೊಡುತ್ತಿದ್ದ. ಇದಕ್ಕಾಗಿ ಮನೆಯಲ್ಲೇ ಬಾರ್ ಮಾದರಿಯ ಕೋಣೆಯನ್ನೂ ರೂಪಿಸಿದ್ದ. ತಾನೊಬ್ಬ ಆಗರ್ಭ ಶ್ರೀಮಂತ ಎಂಬ ರೀತಿಯಲ್ಲಿ ಫೋಸು ಕೊಡುತ್ತಿದ್ದ.ಸಾಲ ಕೇಳಲು ಬರುವ ಉದ್ಯಮಿಗಳಿಂದ ಎಗ್ರಿಮೆಂಟಿಗೆAದು ಮುಂಗಡ ಹಣ ಕೇಳುತ್ತಿದ್ದ. ಅದು ಕೈಗೆ ಬಂದೊಡನೆ ಮೊಬೈಲ್ ಸ್ವಿಚ್ ಆಫ್ ಮಾಡಿ ನಾಪತ್ತೆಯಾಗುತ್ತಿದ್ದ. ಉದ್ಯಮಿಗಳು ನಗದಾಗಿ ಹಣ ಕೊಡುತ್ತಿದ್ದುದರಿಂದ ಪೊಲೀಸರಿಗೆ ದೂರು ನೀಡಲು ಹೋಗುತ್ತಿರಲಿಲ್ಲ. ಇದು ಆತನಿಗೆ ವರದಾನವಾಗಿತ್ತು.ಗುರುವಾರ ರಾತ್ರಿ ಪೊಲೀಸರು ಈತನ ಮನೆಗೆ ದಾಳಿ ಮಾಡಿದಾಗ ಅಲ್ಲಿಯ ವೈಭವ ನೋಡಿಯೇ ದಂಗಾದರು. ಆವರಣ ಪ್ರವೇಶಿಸುವ ಗೇಟ್ ಕೂಡ ರಿಮೋಟ್ ಕಂಟ್ರೋಲ್ ವ್ಯವಸ್ಥೆಯನ್ನು ಹೊಂದಿತ್ತು. ಇದರಿಂದಾಗಿ ಪೊಲೀಸರು ಗೇಟ್ ಹಾರಿಯೇ ಒಳಗೆ ನುಗ್ಗಿದರು. ಮನೆಯೊಳಗಡೆಯೇ ಅಡಗುದಾಣದಂತಹ ಕೋಣೆಗಳನ್ನು ಮಾಡಿಕೊಂಡಿದ್ದರಿAದ ಈತ ಮನೆಯಲ್ಲಿದ್ದರೂ ಯಾರ ಕೈಗೂ ಸಿಗುತ್ತಿರಲಿಲ್ಲ. ನಗರ ಪೊಲೀಸ್ ಕಮಿಶನರ್ ಸುಧೀರ್ ಕುಮಾರ್ ರೆಡ್ಡಿ ತಾವೇ ಕಾರ್ಯಾಚರಣೆ ನಿರ್ದೇಶಿಸಿದ್ದರಿಂದ ಕೋಟಿ ಕೋಟಿ ವಂಚಿಸಿದ ಈ ಆರೋಪಿಯ ಬಂಧನವಾಗಿದೆ ಎಂಬ ಮಾತು ಕೇಳಿ ಬರುತ್ತಿದೆ
72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಅತ್ಯುತ್ತಮ ಪೋಷಕ ನಟಿ ರಾಷ್ಟ್ರೀಯ ಪ್ರಶಸ್ತಿ ಪಡೆದ ಕಾಸರಗೋಡು ವರ್ಕಾಡಿ ಮೂಲದ ರೂಪಶ್ರೀ ವರ್ಕಾಡಿ…
ಬಿಜೆಪಿಯ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನಾವಾಲಾ ಅವರು ತಮ್ಮ ಹುದ್ದೆ ಹಾಗೂ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ ಎನ್ನುವ…
ದೇಶದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಏರಿಳಿತ ಮುಂದುವರಿದಿದೆ. ಶುಕ್ರವಾರ ಚಿನ್ನದ ಬೆಲೆ ಪ್ರತಿ ಗ್ರಾಂಗೆ 25 ರೂಪಾಯಿ ಏರಿಕೆಯಾದರೂ,…
ತುಮಕೂರಿನಲ್ಲಿ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ಮಾದಕ ವಸ್ತುಗಳ ವಿರುದ್ಧ ಜಾಗೃತಿ ಮೂಡಿಸುತ್ತಿದ್ದ ಪೊಲೀಸ್ ಸಿಬ್ಬಂದಿಯ ಪುತ್ರನೇ ಹೈಡ್ರೋ ಗಾಂಜಾ…
ಪಾಕಿಸ್ತಾನದ ಬಲೂಚಿಸ್ತಾನ್ ಪ್ರಾಂತ್ಯದ ಕ್ವೆಟ್ಟಾ ಸಮೀಪದ ಕಲ್ಲಿದ್ದಲು ಗಣಿಯಲ್ಲಿ ಸಂಭವಿಸಿದ ಭೀಕರ ಮೀಥೇನ್ ಅನಿಲ ಸ್ಫೋಟದಲ್ಲಿ ಕನಿಷ್ಠ 32 ಕಾರ್ಮಿಕರು…
ಬೀರತಮ್ಮನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೀರತಮ್ಮನಹಳ್ಳಿ ಕೆರೆಗೆ ಕಿಡಿಗೇಡಿಗಳು ಕ್ರಿಮಿನಾಶಕ ವಸ್ತು ಹಾಕಿದ ಪರಿಣಾಮ ಲಕ್ಷಾಂತರ ರೂಪಾಯಿ ಮೌಲ್ಯದ ಮೀನುಗಳ…