ಮಂಗಳೂರು ನಗರ ಕ್ಲೀನ್ ಸಿಟಿ ಎಂದು ಕರೆಸಿಕೊಳ್ಳುತ್ತದೆ. ಆದ್ರೆ ಸೆಂಟ್ರಲ್ ರೈಲು ನಿಲ್ದಾಣಕ್ಕೆ ಹೋಗುವ ದಾರಿಯ ಮಧ್ಯೆ ಸಿಗುವ ಯೂನಿವರ್ಸಿಟಿ ಕಾಲೇಜಿನ ಗ್ರಂಥಾಲಯದ ಕಪೌಂಡ್ ಸಮೀಪ ಇರುವ ಜಾಗ ಕಸದ ರಾಶಿಯಿಂದ ತುಂಬಿತುಳುಕುತ್ತವೆ.
ಅನಾಮಿಕರು ವಾಹನಗಳಲ್ಲಿ, ನಡೆದಾಡುವಾಗ ಕಸ ಎಸೆದು ಹೋಗ್ತಾರೆ. ಅವರಿಗೆ ಯಾರು ಹೇಳುವವರು ಇಲ್ಲ ಅವರನ್ನು ಕೇಳುವವರು ಇಲ್ಲ ಎಂಬ ಮನಸ್ಥಿತಿ ಅವರದ್ದು. ಪ್ಲಾಸ್ಟಿಕ್ಗಳು, ಎಂಚಲು ವಸ್ತುಗಳು ದಿನವು ಈ ಮಾರ್ಗವಾಗಿ ಬರುವ ಅತಿಥಿಗಳನ್ನು ಸ್ವಾಗತಿಸುತ್ತಿವೆ. ಮಳೆಗಾಲದ ಈ ಸಮಯದಲ್ಲಿ ಆ ಭಾಗದಿಂದ ಹರಿಯುವ ನೀರು ಕಲುಷಿತವಾಗಿ ಅಲ್ಲೇ ನಿಂತು ಸಾಂಕ್ರಾಮಿಕ ರೋಗಕ್ಕೆ ಕಾರಣವಾಗುವುದರಲ್ಲಿ ಯಾವುದೇ ಅನುಮಾನ ಇಲ್ಲ. ಸೊಳ್ಳೆಗಳ ಉತ್ಪಾದನೆಯ ಜಾಗವಾಗಿರುವ ಈ ಪ್ರದೇಶ ಡೆಂಗ್ಯೂ, ಮಲೇರಿಯಾ ರೋಗಕ್ಕೂ ಕಾರಣವಾಗಬಹುದು.
ಆರೋಗ್ಯ ಇಲಾಖೆಯವರು ಇತ್ತ ಕಡೆ ಗಮನಹರಿಸುವುದೇ ಇಲ್ವಾ ಎಂಬ ಸಂಶಯ ಸಾರ್ವಜನಿಕರದ್ದು. ಕೆಲವು ಸಾರಿ ಮೂಗು ಮುಚ್ಚಿ ಆ ಭಾಗದಿಂದ ಹೋಗಬೇಕಾಗುತ್ತೆ. ಸನಿಹವೇ ಪೊಲೀಸ್ ಲೈನ್ ಕೂಡ ಇದೆ. ಆದ್ರೆ ಅವರು ಈ ಬಗ್ಗೆ ಮೌನ ವಹಿಸಿದ್ದಾರೆ. ದಿನ ನಿತ್ಯವೂ ಈ ಭಾಗವಾಗಿ ಸಾವಿರಾರು ಸಂಖ್ಯೆಯಲ್ಲಿ ಪ್ರಯಾಣಿಕರು ಸಂಚರಿಸುತ್ತಾ ಇರ್ತಾರೆ. ಅಂಥವರಿಗೆ ಇದು ಕಿರಿ ಕಿರಿ ಮಾಡುವ ಜೊತೆಗೆ ರೋಗಕ್ಕೂ ಕಾರಣವಾಗಲಿದೆ. ಈ ಬಗ್ಗೆ ಸೂಕ್ತವಾದ ಕ್ರಮವನ್ನು ಸ್ಥಳೀಯ ಆಡಳಿತ ವ್ಯವಸ್ಥೆಗಳು ಕೈಗೊಳ್ಳಬೇಕೆಂಬುದು ಸಾರ್ವಜನಿಕರ ಆಗ್ರಹ.
ಮಂಗಳೂರು: ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಸಂಪೂರ್ಣವಾಗಿ ಡಿಜಿಟಲ್ ಮಾದರಿಯಲ್ಲಿ ಜನಗಣತಿ ನಡೆಯಲಿದ್ದು, ಅದರ ಭಾಗವಾಗಿ ಕರ್ನಾಟಕದಲ್ಲಿ 2027ರ ಜನಗಣತಿಯ…
ಮಂಗಳೂರು: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಇದರ ಮಂಗಳೂರು ನಗರ ಘಟಕದ ಅಷ್ಟಮ ಸಂಭ್ರಮ ಕಾರ್ಯಕ್ರಮವು ಮಂಗಳೂರು ನಗರ ಘಟಕದ…
ಬಂಟ್ವಾಳ: ತಾಲೂಕಿನ ವಗ್ಗದ ನಿವಾಸಿ ಅಟೋ ಚಾಲಕನೋರ್ವ ಕಾಣೆಯಾದ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. …
ಕಾಸರಗೋಡು: ಬಿಜೆಪಿ ರಾಷ್ಟ್ರೀಯ ಪ್ರಧಾನ ಕರ್ಯರ್ಶಿ ಹಾಗೂ ಕೇರಳದ ಚುನಾವಣಾ ಪ್ರಭಾರಿ ವಿನೋದ್ ಥಾವ್ಡೆ ಅವರು ನಿನ್ನೆ ಕಾಸರಗೋಡಿಗೆ…
ಮಾಣಿ ಸಮೀಪದ ಸೂರಿಕುಮೇರು ಜಂಕ್ಷನ್ನಲ್ಲಿ ಖಾಸಗಿ ಬಸ್ಗೆ ಹಿಂಬದಿಯಿಂದ ಪಿಕಪ್ ವಾಹನ ಡಿಕ್ಕಿ ಹೊಡೆದಿದ್ದು, ಪಿಕಪ್ ವಾಹನದ ಮುಂಭಾಗವು ಸಂಪೂರ್ಣ…
ಹೆಮ್ಮಾಡಿ ಕುಂದಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಯಾನಕ ವ್ಹೀಲಿಂಗ್ ಮಾಡಿದ ಯುವಕ ಕಳ್ಳತನ ಪ್ರಕರಣದಲ್ಲೂ ಭಾಗಿಯಾಗಿದ್ದು, ಈತನನ್ನು ಪೊಲೀಸರು ಬಂಧಿಸಿದ್ದಾರೆ. ಪೌಜಾನ್…