ಮಂಗಳೂರು ನಗರ ಕ್ಲೀನ್ ಸಿಟಿ ಎಂದು ಕರೆಸಿಕೊಳ್ಳುತ್ತದೆ. ಆದ್ರೆ ಸೆಂಟ್ರಲ್ ರೈಲು ನಿಲ್ದಾಣಕ್ಕೆ ಹೋಗುವ ದಾರಿಯ ಮಧ್ಯೆ ಸಿಗುವ ಯೂನಿವರ್ಸಿಟಿ ಕಾಲೇಜಿನ ಗ್ರಂಥಾಲಯದ ಕಪೌಂಡ್ ಸಮೀಪ ಇರುವ ಜಾಗ ಕಸದ ರಾಶಿಯಿಂದ ತುಂಬಿತುಳುಕುತ್ತವೆ.
ಅನಾಮಿಕರು ವಾಹನಗಳಲ್ಲಿ, ನಡೆದಾಡುವಾಗ ಕಸ ಎಸೆದು ಹೋಗ್ತಾರೆ. ಅವರಿಗೆ ಯಾರು ಹೇಳುವವರು ಇಲ್ಲ ಅವರನ್ನು ಕೇಳುವವರು ಇಲ್ಲ ಎಂಬ ಮನಸ್ಥಿತಿ ಅವರದ್ದು. ಪ್ಲಾಸ್ಟಿಕ್ಗಳು, ಎಂಚಲು ವಸ್ತುಗಳು ದಿನವು ಈ ಮಾರ್ಗವಾಗಿ ಬರುವ ಅತಿಥಿಗಳನ್ನು ಸ್ವಾಗತಿಸುತ್ತಿವೆ. ಮಳೆಗಾಲದ ಈ ಸಮಯದಲ್ಲಿ ಆ ಭಾಗದಿಂದ ಹರಿಯುವ ನೀರು ಕಲುಷಿತವಾಗಿ ಅಲ್ಲೇ ನಿಂತು ಸಾಂಕ್ರಾಮಿಕ ರೋಗಕ್ಕೆ ಕಾರಣವಾಗುವುದರಲ್ಲಿ ಯಾವುದೇ ಅನುಮಾನ ಇಲ್ಲ. ಸೊಳ್ಳೆಗಳ ಉತ್ಪಾದನೆಯ ಜಾಗವಾಗಿರುವ ಈ ಪ್ರದೇಶ ಡೆಂಗ್ಯೂ, ಮಲೇರಿಯಾ ರೋಗಕ್ಕೂ ಕಾರಣವಾಗಬಹುದು.
ಆರೋಗ್ಯ ಇಲಾಖೆಯವರು ಇತ್ತ ಕಡೆ ಗಮನಹರಿಸುವುದೇ ಇಲ್ವಾ ಎಂಬ ಸಂಶಯ ಸಾರ್ವಜನಿಕರದ್ದು. ಕೆಲವು ಸಾರಿ ಮೂಗು ಮುಚ್ಚಿ ಆ ಭಾಗದಿಂದ ಹೋಗಬೇಕಾಗುತ್ತೆ. ಸನಿಹವೇ ಪೊಲೀಸ್ ಲೈನ್ ಕೂಡ ಇದೆ. ಆದ್ರೆ ಅವರು ಈ ಬಗ್ಗೆ ಮೌನ ವಹಿಸಿದ್ದಾರೆ. ದಿನ ನಿತ್ಯವೂ ಈ ಭಾಗವಾಗಿ ಸಾವಿರಾರು ಸಂಖ್ಯೆಯಲ್ಲಿ ಪ್ರಯಾಣಿಕರು ಸಂಚರಿಸುತ್ತಾ ಇರ್ತಾರೆ. ಅಂಥವರಿಗೆ ಇದು ಕಿರಿ ಕಿರಿ ಮಾಡುವ ಜೊತೆಗೆ ರೋಗಕ್ಕೂ ಕಾರಣವಾಗಲಿದೆ. ಈ ಬಗ್ಗೆ ಸೂಕ್ತವಾದ ಕ್ರಮವನ್ನು ಸ್ಥಳೀಯ ಆಡಳಿತ ವ್ಯವಸ್ಥೆಗಳು ಕೈಗೊಳ್ಳಬೇಕೆಂಬುದು ಸಾರ್ವಜನಿಕರ ಆಗ್ರಹ.
ಬಾವಿಗೆ ಬಿದ್ದ ಹೆಣ್ಣು ಮಗುವನ್ನು ಸ್ಥಳೀಯ ಯುವಕ ರಕ್ಷಿಸಿದ ಘಟನೆ ವರದಿಯಾಗಿದೆ. ಉಳ್ಳಾಲದಲ್ಲಿ ಆಟವಾಡುತ್ತಾ ಎರಡೂವರೆ ಹರೆಯದ ಮಗುವೊಂದು ದಂಡೆಯಿಲ್ಲದ…
ಸಮಾಜದಲ್ಲಿ ಒಡಕುಂಟು ಮಾಡಿ, ದ್ವೇಷವನ್ನು ಬಿತ್ತುವ ಹಾಗೂ ಶಾಂತಿಯನ್ನು ಕದಡಲು ಪ್ರಚೋದನಾತ್ಮಕ ಭಾಷಣವನ್ನು ಯಾರು ಮಾಡಿದರೂ, ಅವರ ಮೇಲೆ ಪ್ರಕರಣ…
ಕರಾವಳಿಯ ಗಂಡುಕಲೆ ಎಂದೇ ಪ್ರಸಿದ್ಧ ಪಡೆದಿರುವ ಯಕ್ಷಗಾನ ಉತ್ತರ ಪ್ರದೇಶದ ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ ಪ್ರಪ್ರಥಮ ಬಾರಿಗೆ ಪ್ರದರ್ಶನವಾಗಿದೆ.…
ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ' ಕೃತಿಯನ್ನು ಬಿಡುಗಡೆ ಮಾಡಲಾಯಿತು. ಅಮೃತ ಪ್ರಕಾಶನದ 45ನೇ ಸರಣಿ ಕೃತಿ ಕೊಡಗಿನ ಚಿತ್ರ…
ಕಳೆದ ವಾರಗಳಿಂದೀಚೆಗೆ ಸುರಿಯುತ್ತಿರುವ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿಯಾಗಿದೆ. ಇಡ್ಕಿದು ಗ್ರಾಮದ ಬಡಜ ಸುಧಾ ಎಂಬವರ…
ಕೇಂದ್ರ ಸರಕಾರದ ಪಿಎಂಇಜಿಪಿ ಯೋಜನೆ ಅಡಿಯಲ್ಲಿ ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಕೋಟ್ಯಂತರ ರೂ. ಹಣ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿ…