ಕೇರಳ ರಾಜ್ಯದಿಂದ ಅಕ್ರಮವಾಗಿ ಪರವಾನಿಗೆ ಇಲ್ಲದೆ ದ.ಕ.ಜಿಲ್ಲೆಗೆ ಕೆಂಪು ಕಲ್ಲು ಸಾಗಾಟ ಮಾಡುತ್ತಿದ್ದ ಎರಡು ಲಾರಿಗಳನ್ನು ವಿಟ್ಲ ಪೋಲೀಸರು ವಿಚಾರಿಸಿ ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿದ ಘಟನೆ ನಡೆದಿದೆ.

ಲಾರಿ ಚಾಲಕರಾದ ಸೋಮಶೇಖರ್ ಹಾಗೂ ಮನು ಎಂಬವರ ಮೇಲೆ ಮತ್ತು ಅಕ್ರಮವಾಗಿ ಕೆಂಪು ಕಲ್ಲು ನೀಡಿದ ಕೇರಳ ಮೂಲದ ಜಾಫರ್ ಹಾಗೂ ನಾಸೀರ್ ಎಂಬವರ ಮೇಲೆ ಕೂಡ ಪ್ರಕರಣ ದಾಖಲು ಮಾಡಲಾಗಿದೆ. ಕೇರಳ ರಾಜ್ಯದ ಪೆರ್ಲ ಎಂಬಲ್ಲಿಂದ ಮತ್ತು ಕೇರಳ ರಾಜ್ಯದ ಧರ್ಮತ್ತಡ್ಕ ಎಂಬಲ್ಲಿಂದ ಅಕ್ರಮವಾಗಿ ಉಕ್ಕುಡ ಗೇಟ್ ಮೂಲಕ ದ.ಕ.ಜಿಲ್ಲೆಯತ್ತ ಸಾಗಿಸುವ ವೇಳೆ ವಿಟ್ಲ ಪೋಲಿಸರ ಕೈಗೆ ಸಿಕ್ಕಿಹಾಕಿಕೊಂಡಿದ್ದಾರೆ. ಸುಮಾರು 30 ಸಾವಿರ ಬೆಲೆ ಬಾಳುವ 1000 ಕೆಂಪು ಕಲ್ಲು ಹಾಗೂ ಎರಡು ಲಾರಿಗಳನ್ನು ಪೋಲಿಸರು ವಶಕ್ಕೆ ಪಡೆದುಕೊಂಡಿದ್ದಾರೆ. ವಿಟ್ಲ ಠಾಣಾ ಪೋಲೀಸ್ ಇನ್ಸ್ ಪೆಕ್ಟರ್ ನಾಗರಾಜ್ ಅವರ ನಿರ್ದೇಶನದಂತೆ ಎಸ್.ಐ.ರಾಮಕೃಷ್ಣ ಮತ್ತು ಅವರ ತಂಡ ದಾಳಿ ನಡೆಸಿದ್ದಾರೆ.



