ದಕ್ಷ, ಧೈರ್ಯ, ಪ್ರಾಮಾಣಿಕ, ಪೊಲೀಸ್ ಅಧಿಕಾರಿಯಾಗಿರುವ ಬಂಟ್ವಾಳದ ವಗ್ಗ ನಿವಾಸಿ ಪೊಲೀಸ್ ಇನ್ಸ್ಪೆಕ್ಟರ್ ಶಾಂತಾರಾಮ್ ಕುಂದರ್ ಅವರಿಗೆ ರಾಷ್ಟ್ರಪತಿ ಪ್ರಶಸ್ತಿ ಲಭಿಸಿದೆ.

ವೃತ್ತಿ ಜೀವನದಲ್ಲಿ ಸಾರ್ವಜನಿಕ ಸೇವೆಯ ಕಡೆಗಿನ ಅವರ ಅಪಾರವಾದ ಸಮರ್ಪಣೆ, ಶಿಸ್ತು, ನಿಷ್ಠೆ ಹಾಗೂ ಸೇವಾ ಮನೋಭಾವಕ್ಕೆ ಅರ್ಹವಾಗಿಯೇ ರಾಷ್ಟ್ರಪತಿಯವರ ಮಿರಿಟೋರಿಯಸ್ ಸರ್ವಿಸ್ ಅವಾರ್ಡ್ ಗೌರವ ಪಡೆದಿರುವುದು ಕರ್ನಾಟಕಕ್ಕೆ ಸಂದ ಗೌರವ. ಶಾಂತಾರಾಮ್ ಕುಂದರ್ ಅವರು ತಮ್ಮ ವೃತ್ತಿ ಜೀವನದಲ್ಲಿ ನೈತಿಕತೆ, ವೃತ್ತಿಪರತೆ, ಪ್ರಾಮಾಣಿಕತೆ, ಧೈರ್ಯ ಮತ್ತು ಜನ ಸ್ನೇಹಿ ಕಾರ್ಯಶೈಲಿಗಾಗಿ ಈಗಾಗಲೇ ಹಲವು ಕಡೆ ಗೌರವಿಸಲ್ಪಟ್ಟಿದ್ದಾರೆ, ಕಾನೂನು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ, ಅಪರಾಧ ತಡೆಗಟ್ಟುವಲ್ಲಿ, ಸಮುದಾಯದೊಂದಿಗೆ ಸಕ್ರಿಯವಾಗಿ ಬೆರೆತು ಕಾರ್ಯ ನಿರ್ವಹಿಸುವಲ್ಲಿ ಅವರ ಪ್ರೋತ್ಸಾಹಕ ಮನೋಭಾವವು ಅವರನ್ನು ಕರ್ನಾಟಕದ ಪೊಲೀಸು ಇಲಾಖೆಯಲ್ಲಿ ಅತ್ಯಂತ ನಂಬಿಕಸ್ಥ, ಮತ್ತು ಪರಿಣಾಮಕಾರಿ ಅಧಿಕಾರಿಗಳಲ್ಲಿ ಒಬ್ಬರನ್ನಾಗಿ ಮಾಡಿದೆ. ಈ ಗೌರವವು ಅವರ ಸೇವೆಗೆ ದೊರೆತ ಮೊದಲ ಗೌರವವಲ್ಲ. 2016 ರಲ್ಲಿ ಅತ್ಯುತ್ತಮ ಸೇವೆಗಾಗಿ ಮುಖ್ಯಮಂತ್ರಿಗಳಿAದ ಚಿನ್ನದ ಪದಕವೂ ಅವರಿಗೆ ಲಭಿಸಿತ್ತು. ಇಂತಹ ನಿಸ್ವಾರ್ಥ ಸೇವಾ ಮನೋಭಾವದ ಶಾಂತಾರಾಮ್ ಕುಂದರ್ ರವರಿಗೆ ರಾಷ್ಟ್ರಪತಿಗಳಿಂದ ಅತ್ಯುನ್ನತ ಗೌರವ ಪ್ರಶಸ್ತಿ ಲಭಿಸಿರುವುದು ನಿಜಕ್ಕೂ ಹೆಮ್ಮೆಯ ವಿಚಾರ.



