11 ವರ್ಷ ಪ್ರಾಯದ ಸಿದ್ಧಾರ್ಥ್ ಶೆಟ್ಟಿ, ತಂದೆ -ದಿ. ಸಂಜು ಮತ್ತು ತಾಯಿ ರಂಜಿತ ಅವರ ಮುದ್ದಿನ ಮಗ. ಎಳವೆಯಲ್ಲೇ ತಂದೆಯನ್ನು ಕಳೆದುಕೊಂಡರೂ ತಾಯಿ ನೀಡಿದ ಪ್ರೋತ್ಸಾಹ ಕಲಾಕ್ಷೇತ್ರದಲ್ಲಿ ಮಿನುಗುವಂತೆ ಮಾಡಿತು.
ಶಿವಮೊಗ್ಗದ ಬೇಲೂರಿನಲ್ಲಿ ಜನಸಿದ ಈತ ಮಲ್ನಾಡ್ ಇಂಟರ್ ನ್ಯಾಷನಲ್ ಸ್ಕೂಲ್ ಶಿವಮೊಗ್ಗ ಇಲ್ಲಿ 6 ನೆ ತರಗತಿಯ ವಿಧ್ಯಾರ್ಥಿಯಾಗಿದ್ದಾನೆ. ನೃತ್ಯ, ನಟನೆ, ಕರಾಟೆ, ಸ್ಪೋರ್ಟ್ಸ್ ಇವೆಲ್ಲವೂ ಈತನಿಗೆ ಅಚ್ಚುಮೆಚ್ಚು. ಸಿದ್ಧಾರ್ಥ್ 6 ವರ್ಷದಿಂದ ನೃತ್ಯ ಕಲಿಯುವತ್ತ ಆಸಕ್ತಿ ಹೊಂದಿದ್ದಾನೆ. ಹಲವಾರು ನೃತ್ಯ ಸ್ಪರ್ದೆಯಲ್ಲಿ ಭಾಗವಹಿಸಿ ಬಹುಮಾನ ಗೆದ್ದು ಮಂಗಳೂರಿನ ಸ್ಪಂದನ ಟಿವಿ, ಜೂಮ್ ಟಿವಿ, ಸುವರ್ಣ ಚಾನಲ್ ನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.
ಈತನಿಗೆ ಕರ್ನಾಟಕ ಬಾಲ ರತ್ನ 2022, ಸಾಧಕ ರತ್ನ 2022,ಸುವರ್ಣ ಸಾಧನ ಶ್ರೀ ಪ್ರಶಸ್ತಿ, ಸೇವಾ ರತ್ನ 2023 ಈತನ ಕಲಾಸೇವೆಗೆ ಸಂದ ಗೌರವ. 2023- 24ರ ಅಚೀವ್ಮೆಂಟ್ ಅವಾರ್ಡ್, ಹಿಪ್ ಹಾಪ್ ಡ್ಯಾನ್ಸ್ ನ್ಯಾಷನಲ್ ಲೆವೆಲ್ ಮತ್ತು ಇಂಟರ್ನ್ಯಾಷನಲ್ ಲೆವೆಲ್ ಗೋಲ್ಡ್ ಮೆಡಲಿಸ್ಟ್, ನೇಪಾಳದಲ್ಲಿ ನಡೆದ ಹಿಪ್ ಹಾಪ್ ಚಾಂಪಿಯನ್ಶಿಪ್ ನಲ್ಲಿ ಭಾರತವನ್ನು ಪ್ರತಿನಿಧಿಸಿ 2 ವಿಭಾಗದಲ್ಲಿ ಭಾಗವಹಿಸಿ 2 ಗೋಲ್ಡ್ ಮೆಡಲ್ ಪಡೆದಿರುತ್ತಾನೆ.
ಅದಲ್ಲದೆ ಕರಾಟೆ ನ್ಯಾಷನಲ್ ಮತ್ತು ಇಂಟರ್ನ್ಯಾಷನಲ್ ಲೆವೆಲ್ ಅಲ್ಲಿ ಭಾಗವಹಿಸಿ ಮೊದಲ ಸ್ಥಾನ ಪಡೆದಿರುವುದು ಎಳವೆಯಲ್ಲೇ ಈತನ ಸಾಧನೆಯ ಶಿಖರಕ್ಕೆ ಮುನ್ನುಡಿಯಾಗಿದೆ.
ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ (ರಿ) ದುಬೈ ಘಟಕದ ನಾಲ್ಕನೇ ವರ್ಷದ ದುಬೈ "ಗಡಿನಾಡ ಉತ್ಸವ -2025" ಕಾರ್ಯಕ್ರಮವು ನಗರದ…
ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಿದ ಕಾರ್ಯಕ್ರಮದಲ್ಲಿ ನೂಕು ನುಗ್ಗಲು ಉಂಟಾಗಿ 11ಕ್ಕೂ ಹೆಚ್ಚು ಜನ ಅಸ್ವಸ್ಥರಾದ ಘಟನೆ ಪುತ್ತೂರಿನಲ್ಲಿ ನಡೆದಿದೆ. ಪುತ್ತೂರು…
ಪ್ರತೀ ಕಲಾವಿದರ ಕುಟುಂಬದೊಂದಿಗೆ ಅವರ ಕಷ್ಟ ಸುಖದಲ್ಲಿ ಇರುವಂತಹ ವಾತಾವರಣ ನಿರ್ಮಿಸಬೇಕು. ಕಲಾವಿದರ ಸಂಘಟನಾತ್ಮಕ ಬಲವನ್ನು ಹೆಚ್ಚಿಸುವ ಕೆಲಸವಾಗಲು ಎಲ್ಲರ…
ಸ್ವಾಮಿ ವಿವೇಕಾನಂದ ಯುವಕ ಸಂಘ ಹಾಗೂ ಅಯ್ಯಪ್ಪ ಮಂದಿರ ಮೊಡಂಕಾಪ್, 2025 - 26 ರ ಅಧ್ಯಕ್ಷರಾಗಿ ಸುನಿಲ್ ಎನ್…
ಬಂಟ್ವಾಳ ತಾಲೂಕಿನ ಬಿ.ಮೂಡ ಗ್ರಾಮದ ನಂದರಬೆಟ್ಟು ಎಂಬಲ್ಲಿ ಸುರಿದ ಮಳೆಗೆ ಅವರಣಗೋಡೆ ಕುಸಿದು ಬಿದ್ದು ಇಶಾಕ್ ಹಾಗೂ ಅಬ್ದುಲ್ಲಾ ಯಾನೆ…
ಪುತ್ತೂರಿನ ಪ್ರಕರಣ ಹಾಗೂ ಕಾರ್ಕಳದ ಅಭಿಷೇಕ್ ಆಚಾರ್ಯ ಅವರ ಆತ್ಮಹತ್ಯೆಗೆ ಸಂಬಂಧಿಸಿದ ವಿಷಯವಾಗಿ ಮಾನ್ಯ ಗ್ರಹಸಚಿವರಾದ ಶ್ರೀ ಜಿ ಪರಮೇಶ್ವರ್…