11 ವರ್ಷ ಪ್ರಾಯದ ಸಿದ್ಧಾರ್ಥ್ ಶೆಟ್ಟಿ, ತಂದೆ -ದಿ. ಸಂಜು ಮತ್ತು ತಾಯಿ ರಂಜಿತ ಅವರ ಮುದ್ದಿನ ಮಗ. ಎಳವೆಯಲ್ಲೇ ತಂದೆಯನ್ನು ಕಳೆದುಕೊಂಡರೂ ತಾಯಿ ನೀಡಿದ ಪ್ರೋತ್ಸಾಹ ಕಲಾಕ್ಷೇತ್ರದಲ್ಲಿ ಮಿನುಗುವಂತೆ ಮಾಡಿತು.
ಶಿವಮೊಗ್ಗದ ಬೇಲೂರಿನಲ್ಲಿ ಜನಸಿದ ಈತ ಮಲ್ನಾಡ್ ಇಂಟರ್ ನ್ಯಾಷನಲ್ ಸ್ಕೂಲ್ ಶಿವಮೊಗ್ಗ ಇಲ್ಲಿ 6 ನೆ ತರಗತಿಯ ವಿಧ್ಯಾರ್ಥಿಯಾಗಿದ್ದಾನೆ. ನೃತ್ಯ, ನಟನೆ, ಕರಾಟೆ, ಸ್ಪೋರ್ಟ್ಸ್ ಇವೆಲ್ಲವೂ ಈತನಿಗೆ ಅಚ್ಚುಮೆಚ್ಚು. ಸಿದ್ಧಾರ್ಥ್ 6 ವರ್ಷದಿಂದ ನೃತ್ಯ ಕಲಿಯುವತ್ತ ಆಸಕ್ತಿ ಹೊಂದಿದ್ದಾನೆ. ಹಲವಾರು ನೃತ್ಯ ಸ್ಪರ್ದೆಯಲ್ಲಿ ಭಾಗವಹಿಸಿ ಬಹುಮಾನ ಗೆದ್ದು ಮಂಗಳೂರಿನ ಸ್ಪಂದನ ಟಿವಿ, ಜೂಮ್ ಟಿವಿ, ಸುವರ್ಣ ಚಾನಲ್ ನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.
ಈತನಿಗೆ ಕರ್ನಾಟಕ ಬಾಲ ರತ್ನ 2022, ಸಾಧಕ ರತ್ನ 2022,ಸುವರ್ಣ ಸಾಧನ ಶ್ರೀ ಪ್ರಶಸ್ತಿ, ಸೇವಾ ರತ್ನ 2023 ಈತನ ಕಲಾಸೇವೆಗೆ ಸಂದ ಗೌರವ. 2023- 24ರ ಅಚೀವ್ಮೆಂಟ್ ಅವಾರ್ಡ್, ಹಿಪ್ ಹಾಪ್ ಡ್ಯಾನ್ಸ್ ನ್ಯಾಷನಲ್ ಲೆವೆಲ್ ಮತ್ತು ಇಂಟರ್ನ್ಯಾಷನಲ್ ಲೆವೆಲ್ ಗೋಲ್ಡ್ ಮೆಡಲಿಸ್ಟ್, ನೇಪಾಳದಲ್ಲಿ ನಡೆದ ಹಿಪ್ ಹಾಪ್ ಚಾಂಪಿಯನ್ಶಿಪ್ ನಲ್ಲಿ ಭಾರತವನ್ನು ಪ್ರತಿನಿಧಿಸಿ 2 ವಿಭಾಗದಲ್ಲಿ ಭಾಗವಹಿಸಿ 2 ಗೋಲ್ಡ್ ಮೆಡಲ್ ಪಡೆದಿರುತ್ತಾನೆ.
ಅದಲ್ಲದೆ ಕರಾಟೆ ನ್ಯಾಷನಲ್ ಮತ್ತು ಇಂಟರ್ನ್ಯಾಷನಲ್ ಲೆವೆಲ್ ಅಲ್ಲಿ ಭಾಗವಹಿಸಿ ಮೊದಲ ಸ್ಥಾನ ಪಡೆದಿರುವುದು ಎಳವೆಯಲ್ಲೇ ಈತನ ಸಾಧನೆಯ ಶಿಖರಕ್ಕೆ ಮುನ್ನುಡಿಯಾಗಿದೆ.
ಬಸ್ವೊಂದು ಸ್ಕೂಟಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟಿ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಕಾಪು…
ಮುಡಿಪು-ಬಿ. ಸಿ. ರೋಡ್ ರಸ್ತೆಯ ಸಜಿಪ ಎಂಬಲ್ಲಿ ಕಾರು ಮತ್ತು ಆಕ್ಟಿವಾ ಸ್ಕೂಟರ್ ನಡುವೆ ಸಂಭವಿಸಿದ ಭೀಕರ ರಸ್ತೆ…
ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಭೇಟಿ ನೀಡಿ ದೇವಿ ಮೂಕಾಂಬಿಕಾ…
ಮಳೆಗಾಲ ಆರಂಭವಾಗುತ್ತಿದ್ದಂತೆ ಸೇತುವೆಯೊಂದು ಕುಸಿದು ಬಿದ್ದ ಪರಿಣಾಮ ಹಲವು ಗ್ರಾಮಗಳ ಸಂಪರ್ಕದ ಕೊಂಡಿ ಕಳಚಿ ಬಿದ್ದು, ಜನರು ದ್ವೀಪದಂತೆ, ಹಳ್ಳಿಯೊಳಗೆ…
ಜ್ವರದಿಂದ ಬಳಲುತ್ತಿದ್ದ ಬಾಲಕಿಯೊರ್ವಳು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ಘಟನೆ ಬಂಟ್ವಾಳ ತಾಲೂಕಿನ ಅಲ್ಲಿಪಾದೆ ಎಂಬಲ್ಲಿ ನಡೆದಿದೆ. ಅಲ್ಲಿಪಾದೆ ಅನೇಜ…
ಬಿಸಿರೋಡಿನ ಪ್ರಸಿದ್ದ ಕ್ಯಾಂಟೀನ್ ಒಂದರಲ್ಲಿ ಅಡುಗೆ ಅನಿಲ ಸೋರಿಕೆಯಾಗಿ ಸ್ವಲ್ಪದರಲ್ಲಿ ದೊಡ್ಡ ದುರಂತವೊಂದು ತಪ್ಪಿದೆ. ಬಿಸಿರೋಡಿನ ಮಿನಿ ವಿಧಾನ ಸೌಧದ…