ವಿಟ್ಲ ಖಾಸಗಿ ಬಸ್ ನಿಲ್ದಾಣ ಬಳಿ ಇರುವ ಪಟ್ಟಣ ಪಂಚಾಯಿತಿಯ ಅಂಗಡಿ ಮಳಿಗೆ ಜಿ 3 ಯನ್ನು 2019 ನೇ ಸಾಲಿನಲ್ಲಿ ಹೀರಾ ರಾಮ್ ಎಂಬವರು ಏಲಂ ನಲ್ಲಿ ಮಾಸಿಕ ಬಾಡಿಗೆ ಆಧಾರದಲ್ಲಿ ಮಳಿಗೆ ಪಡೆದು ರೂ 8.87 ಲಕ್ಷ ಬಾಡಿಗೆ ಬಾಕಿ ಇಟ್ಟು ಪಾವತಿಸದೆ ಇರುವುದರಿಂದ ಬಾಡಿಗೆಯನ್ನು ಪಾವತಿಸಲು ಹಲವಾರು ಬಾರಿ ನೋಟಿಸ್ ನೀಡಿದ್ದರೂ ಕೂಡಾ ಬಾಡಿಗೆ ಪಾವತಿಸದೆ ಪಟ್ಟಣ ಪಂಚಾಯಿತಿಗೆ ವಂಚಿಸಿ ಅಂಗಡಿಗೆ ಬಾಗಿಲು ಹಾಕಿ ಹೋಗಿರುತ್ತಾರೆ.

ಈ ಬಗ್ಗೆ ಪಟ್ಟಣ ಪಂಚಾಯಿತಿಯ ಸಾಮಾನ್ಯ ಸಭೆಯ ತೀರ್ಮಾನದಂತೆ ಸದ್ರಿ ಅಂಗಡಿಯನ್ನು ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿ ಕರುಣಾಕರ ವಿ ಯವರ ಮಾರ್ಗದರ್ಶನದಲ್ಲಿ ಪೊಲೀಸ್ ಸಿಬ್ಬಂದಿಯ ಸಮ್ಮುಖದಲ್ಲಿ ಪಂಚಾಯಿತಿಯ ವಶಕ್ಕೆ ಪಡೆಯಲಾಯಿತು. ಕಾರ್ಯಾಚರಣೆಯಲ್ಲಿ ಸಮುದಾಯ ಸಂಘಟನಾಧಿಕಾರಿ ಶ್ರೀ ಶೈಲ ಸಂಕನಗೌಡ, ಚಂದ್ರಶೇಖರ ವರ್ಮ,ಲ್ಯಾನ್ಸಿ ಬ್ರಿಯಾನ್ ಹಾಗೂ ಸಹಾಯಕ ಸಿಬ್ಬಂದಿಗಳು ಉಪಸ್ಥಿತರಿದ್ದರು.



