ಕರಾವಳಿ

ಮೂಡಬಿದ್ರೆ: ಮೂಡಬಿದಿರೆಯ ಜೈನ ಮಠಕ್ಕೆ ಯಾಂತ್ರಿಕ ಆನೆ ಐರಾವತ ಕೊಡುಗೆ; ಮೂಡಬಿದ್ರೆಯಲ್ಲಿ ನಡೆದ ಅನಾವರಣ ಕಾರ್ಯಕ್ರಮ

ಪ್ರಾಣಿ ಪ್ರಿಯರ ಸಂಘಟನೆ ಪೇಟಾ ಮೂಲಕ ನಟಿ ರವೀನಾ ಟಂಡನ್ ಮತ್ತು ಆಕೆಯ ಪುತ್ರಿ ರಾಶಾ ಥಡಾನಿ ಅವರು ವಿಶ್ವವಿಖ್ಯಾತ ಸಾವಿರ ಕಂಭದ ಬಸದಿಯನ್ನು ಹೊಂದಿರುವ ಮೂಡಬಿದಿರೆಯ ಜೈನ ಮಠಕ್ಕೆ ಯಾಂತ್ರಿಕ ಆನೆ ಐರಾವತವನ್ನು ಕೊಡುಗೆಯಾಗಿ ನೀಡಿದ್ದಾರೆ.

ಅದರ ಅನಾವರಣ ಕಾರ್ಯಕ್ರಮ ಮೂಡಬಿದ್ರೆಯಲ್ಲಿ ನಡೆದಿದೆ. ಪ್ರಶಸ್ತಿ ಪುರಸ್ಕೃತ ನಟಿ ರವೀನಾ ಟಂಡನ್ ಮತ್ತು ಆಕೆಯ ಪುತ್ರಿ ರಾಶಾ ಥಡಾನಿ ಪ್ರಾಣಿ ಪ್ರಿಯರ ಸಂಘಟನೆ ಪೇಟಾ ಮೂಲಕ ನೀಡಿರುವ ಈ ಆನೆ ನೈಜ ಆನೆಯನ್ನು ಹೋಲುತ್ತದೆ. ಮೂಡಬಿದ್ರೆ ಜೈನ ಮಠವು ಜೀವಂತ ಆನೆಯನ್ನು ಬಳಸದಿರುವ ಬಗ್ಗೆ ಕೈಗೊಂಡ ತೀರ್ಮಾನವನ್ನು ಗೌರವಿಸಿ ಮೂಡಬಿದ್ರೆ ಜೈನ ಮಠದ ಪಟ್ಟಾಭಿಷೇಕದ ಬೆಳ್ಳಿ ಮಹೋತ್ಸವದಂದು ಈ ಆನೆಯನ್ನು ಮಠಕ್ಕೆ ಕೊಡಮಾಡಲಾಗಿದೆ. ಇದರಿಂದ ಈ ತಂತ್ರಜ್ಞಾನವನ್ನು ಹೊಂದಿದ ಜಗತ್ತಿನ ಮೊದಲ ಜೈನ ದೇವಾಲಯ ಇದಾಗಿದೆ. ದೇವಾಲಯದಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಯಾವುದೇ ಹಿಂಸೆ ಇಲ್ಲದೆ ಸುರಕ್ಷಿತವಾಗಿ ಈ ಐರಾವತವನ್ನು ಬಳಸಬಹುದಾಗಿದೆ.

ಇದು ಆನೆಗಳು ತಮ್ಮ ಕುಟುಂಬದೊ0ದಿಗೆ ಕಾಡುಗಳಲ್ಲಿ ಉಳಿಯಲು ಸಹಾಯ ಮಾಡುತ್ತದೆ ಎನ್ನುತ್ತದೆ ಪೇಟಾ. ಮೂಡಬಿದಿರೆ ಜೈನ ಮಠದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಐರಾವತವನ್ನು ಸಾಂಪ್ರದಾಯಿಕವಾಗಿ ಎದುರುಗೊಂಡು ಸ್ವಾಗತಿಸಲಾದಿದ್ದು, ಚಾತುರ್ಮಾಸ ನಿರತರಾಗಿರುವ 108 ಗುಲಾಬ್ ಭೂಷಣ್ ಮುನಿ ಮಹಾರಾಜ್ ಐರಾವತವನ್ನು ಅನಾವರಣಗೊಳಿಸಿದ್ದಾರೆ. ಈ ಸಂದರ್ಭ ಜೈನ ಮಠದ ಭಕ್ತರು, ಪೇಟಾದ ಕಾರ್ಯಕರ್ತರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀ ದಿಗಂಬರ ಜೈನ ಮಠದ ಡಾ. ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಪಂಡಿತಾಚಾರ್ಯ ಮಹಾ ಸ್ವಾಮೀಜಿ ಅವರು ಐರಾವತದ ಕೊಡುಗೆ ಅನುಕಂಪ ಮತ್ತು ಅನುಭೂತಿಯ ನಮ್ಮ ಸಂಪ್ರದಾಯದ ಪ್ರತೀಕವಾಗಿದೆ, ಐರಾವತವು ದಯೆಯತ್ತ ನಮ್ಮ ಯಾನಕ್ಕೆ ಉತ್ತೇಜನ ನೀಡುತ್ತದೆ ಎಂದರು. ಆನೆಗಳಿಗೆ ನನ್ನ ಹೃದಯದಲ್ಲಿ ವಿಶೇಷ ಸ್ಥಾನವಿದೆ, ಜೈನ ದೇವಾಲಯಕ್ಕೆ ಐರಾವತ ಕೊಡುಗೆ ಆನೆಗಳನ್ನು ಅವುಗಳ ಕುಟುಂಬದ ಜೊತೆ ಇರಿಸುವ ಕಾಲಾತೀತ ಪರಂಪರೆಯನ್ನು ಗೌರವಿಸುವ ನನ್ನ ಪ್ರಾಮಾಣಿಕೆ ಪ್ರಯತ್ನ ಎಂದಿದ್ದಾರೆ

ಅಭಿಮತ ಟಿವಿ

Abhimatha TV is a trusted channel renowned for its dedication to honest journalism and its unwavering commitment to showcasing the rich culture, heritage, and traditions of Tulunadu. With a focus on delivering unbiased news and promoting the region's vibrant art forms, rituals, and cultural events, Abhimatha TV has become a beacon of authenticity and pride for the community. Established in 2018, the channel was founded by Mamatha P. Shetty (Managing Partner) and Kanyana Sadhashiva Shetty (Chief Promoter) with a mission to provide truthful reporting and celebrate the essence of our heritage.

Recent Posts

ಬೆಂಗಳೂರು: ಗ್ರಾಮ ಪಂಚಾಯತ್‌ನಿಂದ ವಿಧಾನಸಭೆಯವರೆಗೆ AI ಕಡ್ಡಾಯ- ಯು.ಟಿ. ಖಾದರ್

ಗ್ರಾಮ ಪಂಚಾಯತ್ ಸೇರಿದಂತೆ ಸರ್ಕಾರದ ಎಲ್ಲಾ ಸ್ಥಳೀಯ ಸಂಸ್ಥೆಗಳಲ್ಲಿ ಕೃತಕ ಬುದ್ಧಿಮತ್ತೆ (AI) ವ್ಯವಸ್ಥೆ ಅಳವಡಿಕೆ ಅನಿವಾರ್ಯವಾಗಲಿದೆ ಎಂದು ರಾಜ್ಯ…

39 mins ago

ಬೆಂಗಳೂರು: ಸೇಫ್ ಫುಟ್‌ಪಾತ್ ಅಭಿಯಾನ ಯಶಸ್ಸು; ಪೀಣ್ಯದಲ್ಲಿ ರಾತ್ರಿ ಟ್ರಾಫಿಕ್ ಡೈವರ್ಷನ್…!

ಬೆಂಗಳೂರಿನಲ್ಲಿ 'ಸೇಫ್ ಫುಟ್‌ಪಾತ್' ಅಭಿಯಾನಕ್ಕೆ ಭರ್ಜರಿ ಸ್ಪಂದನೆ ಸಿಕ್ಕಿದೆ. ಕಳೆದ ಒಂದು ತಿಂಗಳಲ್ಲಿ 750 ಕಿಲೋಮೀಟರ್‌ಗೂ ಹೆಚ್ಚು ಪಾದಚಾರಿ ಮಾರ್ಗಗಳ…

45 mins ago

18 ಸೈನಿಕರ ಸಾವಿನ ಬಳಿಕ ಇರಾನ್ ವಿರುದ್ಧ ಹೊಸ ಯುದ್ಧ ತಂತ್ರಕ್ಕೆ ಮೊರೆ ಹೋದ ಟ್ರಂಪ್ ಆಡಳಿತ

ಮಧ್ಯಪ್ರಾಚ್ಯದಲ್ಲಿ ಇರಾನ್ ಬಿಕ್ಕಟ್ಟು ದಿನೇದಿನೇ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ, ಅಮೆರಿಕ ತನ್ನ ಯುದ್ಧ ತಂತ್ರಗಳನ್ನು ಮರುಪರಿಶೀಲಿಸಲು ಮುಂದಾಗಿದೆ. ಇರಾನ್‌ನ ಭೂಗತ ಬಂಕರ್‌ಗಳು…

47 mins ago

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ವತಿಯಿಂದ ಮಂಜುನಾಥ್ ಶೆಟ್ಟಿ ದಂಪತಿಗೆ ಸನ್ಮಾನ

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಪೋಷಕ ಸದಸ್ಯರೂ, ಬಂಟ್ಸ್ ಅಸೋಸಿಯೇಷನ್ ನಾರ್ತ್ ಅಮೆರಿಕಾ (BANA) ಅಧ್ಯಕ್ಷರೂ ಆದ ಶ್ರೀ ಮಂಜುನಾಥ್…

21 hours ago

ಉಡುಪಿ: ಕರಾವಳಿ ನಿವಾಸಿಗಳ ಸಂಕಷ್ಟಕ್ಕೆ ಸ್ಪಂದಿಸಿದ ಜಿಲ್ಲಾಡಳಿತ…!

ಉಡುಪಿ ತಾಲೂಕಿನಲ್ಲಿ ಕಡಲ್ಕೊರೆತದಿಂದ ಹಾನಿಗೊಳಗಾಗಿರುವ ಹೆಜಮಾಡಿ, ಪಡುಬಿದ್ರಿ, ಎರ್ಮಾಳು, ಕಾಪು, ಪೊಲಿಪು ಹಾಗೂ ಕಟಪಾಡಿ-ಮಟ್ಟು ಪ್ರದೇಶಗಳಿಗೆ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ.…

22 hours ago

ಬಂಟ್ವಾಳ: ಮಾಣಿ ಸಮೀಪ ಜೋಗಿಬೆಟ್ಟು ರಸ್ತೆ ಕೆರೆಯಂತಾದ ದೃಶ್ಯ….!

ಮಳೆ ಸುರಿದರೆ ಸಾಕು, ಬಂಟ್ವಾಳ ತಾಲೂಕಿನ ಮಾಣಿ ಸಮೀಪದ ಪೆರಾಜೆ ಗ್ರಾಮದ ಜೋಗಿಬೆಟ್ಟು ರಸ್ತೆಯಲ್ಲಿ ಸಂಚಾರ ದುಸ್ತರವಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿಗೆ…

22 hours ago