ವಿಶ್ವವಿದ್ಯಾಲಯ ಕಾಲೇಜಿನ ಹಿಂಬದಿಯಲ್ಲಿ ಚರಂಡಿಗೆಂದು ತೆಗೆದ ಗುಂಡಿಗೆ ತಿಂಗಳುಗಳೇ ಕಳೆದರೂ ಅದನ್ನು ಮುಚ್ಚಲು ಮೀನ-ಮೇಷ ಎಣಿಸುತ್ತಾ ಇದ್ದಾರೆ ಅಧಿಕಾರಿಗಳು.

ಹಲವು ದಿನಗಳಿಂದ ತೆರೆದುಕೊಂಡೇ ಇರುವ ಗುಂಡಿಗೆ ಹೊಂದಿಕೊಂಡು ಯಾವುದೇ ಕಾಮಗಾರಿಗಳು ನಡೆಯುತ್ತಿಲ್ಲ. ಆದರೂ ಈ ಗುಂಡಿಯನ್ನು ಮುಚ್ಚದೇ ಹಾಗೇ ಬಿಟ್ಟಿದ್ದಾರೆ. ಈ ಮಾರ್ಗವಾಗಿ ದಿನನಿತ್ಯ ರೈಲ್ವೇ ನಿಲ್ದಾಣಕ್ಕೆ ಸಂಚರಿಸುವ ಪ್ರಯಾಣಿಕರು, ಸಮೀಪದ ವೆನ್ಲಾಕ್ ಆಸ್ಪತ್ರೆಗೆ ಚಿಕಿತ್ಸೆಗೆ ತೆರಳುವವರು ಈ ಮಾರ್ಗದ ಮೂಲಕ ಸಂಚರಿಸಬೇಕಾಗುತ್ತದೆ. ಕಣ್ಣಿರುವ ಅಧಿಕಾರಿಗಳು ಇದನ್ನು ಮುಚ್ಚಬಹುದೇ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.



