ಜನ ಮನದ ನಾಡಿ ಮಿಡಿತ

Advertisement

ಉಳ್ಳಾಲ: ತೊಕ್ಕೊಟ್ಟು ಫೈನಾನ್ಸ್ ನಲ್ಲಿ ನಕಲಿ ಚಿನ್ನ ಅಡಮಾನವಿರಿಸಿ ಸಾಲ ಪಡೆಯಲೆತ್ನಿಸಿದ ತಂಡದ ಬಂಧನ..!

ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಕಲಿ ಚಿನ್ನಾಭರಣವನ್ನು 22 ಕ್ಯಾರೇಟಿನ ಚಿನ್ನವೆಂದು ನಂಬಿಸಿ ಅಡಮಾನ ಇಡುವ ಮೂಲಕ ಸಾಲ ಪಡೆದು ವಂಚನೆ ಮಾಡುತ್ತಿದ್ದ ಆರು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಇವರಿಂದ ಒಟ್ಟು 9 ಕ್ಯಾರೇಟಿನ 141 ಗ್ರಾಂ ನಕಲಿ ಚಿನ್ನಾಭರಣಗಳು, 6 ಮೊಬೈಲ್ ಫೋನ್‌ಗಳು ಹಾಗೂ 47,000 ನಗದು ವಶಪಡಿಸಿಕೊಳ್ಳಲಾಗಿದೆ. ನ.22 ರಂದು ಆರೋಪಿ ನೌಫಾಲ್ ಮತ್ತು ಝಹೀಮ್ ಅಹ್ಮದ್ ಎಂಬವರು ತೊಕ್ಕೊಟ್ಟು ದ್ವಾರಕ ಕಾಂಪ್ಲೆಕ್ಸ್ನ ಗುರು ರಾಘವೇಂದ್ರ ಫೈನಾನ್ಸ್ & ಇನ್ವೆಸ್ಟ್ಮೆಂಟ್ ಸಂಸ್ಥೆಯಲ್ಲಿ 9 ಕ್ಯಾರೇಟಿನ 41 ಗ್ರಾಂ ಚಿನ್ನಾಭರಣವನ್ನು 22 ಕ್ಯಾರೇಟಿನಂತೆ ತೋರಿಸಿ ಝಹೀಮ್ ಅಹ್ಮದ್ ಹೆಸರಿನಲ್ಲಿ 3,55,000 ಸಾಲ ಪಡೆದಿದ್ದರು. ಬಳಿಕ ನ. 24 ರಂದು ಆರೋಪಿ ಇಮ್ತಿಯಾಜ್ ಕೂಡ ಇದೇ ರೀತಿಯ ನಕಲಿ ಚಿನ್ನಾಭರಣವನ್ನು ಅಡಮಾನ ಇರಿಸಲು ಬಂದಾಗ ಸಂಸ್ಥೆಗೆ ಅನುಮಾನ ಉಂಟಾಗಿ ಚಿನ್ನಾಭರಣವನ್ನು ಪರಿಶೀಲಿಸಿದ್ದು ಅದು ನಕಲಿ ಚಿನ್ನ ಎನ್ನುವುದು ಬಹಿರಂಗವಾಗಿದೆ. ಪ್ರಕರಣದ ತನಿಖೆಯಲ್ಲಿ ನ.25 ರಂದು ರಾತ್ರಿ 9 ಗಂಟೆಗೆ ತೊಕ್ಕೊಟ್ಟು ಜಂಕ್ಷನ್ ಬಳಿ ಆರೋಪಿ ಇಮ್ತಿಯಾಜ್ ಮತ್ತು ಝಹೀಮ್ ಅಹ್ಮದ್ ಅವರನ್ನು ವಶಕ್ಕೆ ಪಡೆಯಲಾಗಿದೆ. ನಂತರ ನ.26ರಂದು ಬೆಳಿಗ್ಗೆ ಪಂಪ್‌ವೆಲ್ ಬಳಿಯಲ್ಲಿ ವಿಕ್ರಮ್ ಅಮೃತ್‌ಲಾಲ್ ಬಾಘಾ ಮತ್ತು ಮೊಹಮ್ಮದ್ ಇಸ್ಮಾಯಿಲ್ ಅವರನ್ನು, ಮಂಗಳೂರಿನ ಕೆಪಿಟಿ ಬಳಿ ಮೊಹಮ್ಮದ್ ಬಿಸ್ಟಾ ಹಾಗೂ ಉಮ್ಮರ್ ಫಾರೂಕ್ ಅವರನ್ನು ಬಂಧಿಸಲಾಗಿದೆ. ಬಂಧಿತ ವಿಕ್ರಮ್ ಅಮೃತ್‌ಲಾಲ್ ಬಾಘಾ ಅವರ ಬಳಿಯಿಂದ 47,000 ನಗದು, ಉಮ್ಮರ್ ಫಾರೂಕ್ ಅವರಿಂದ 9 ಕ್ಯಾರೇಟಿನ 20 ಗ್ರಾಂ ತೂಕದ ಚಿನ್ನದಂತೆ ಕಾಣುವ ಚೈನ್, ಮೊಹಮ್ಮದ್ ಬಿಸ್ಟಾ ಅವರಿಂದ 25 ಗ್ರಾಂ ತೂಕದ 6 ಉಂಗುರಗಳು, ಝಹೀಮ್ ಅಹ್ಮದ್ ಅಡಮಾನ ಇಟ್ಟಿದ್ದ 41 ಗ್ರಾಂ ಚೈನ್, ಇಮ್ಮಿಯಾಜ್ ನೀಡಿದ್ದ 55 ಗ್ರಾಂ ಚೈನ್ ಮತ್ತು ಒಂದು ಬ್ರಾಸ್ ಲೈಟ್ ವಶಪಡಿಸಿಕೊಳ್ಳಲಾಗಿದೆ. ಘಟನೆಯಲ್ಲಿ ಬಳಸಲಾಗಿದ್ದ 9 ಕ್ಯಾರೇಟಿನ ನಕಲಿ ಚಿನ್ನಾಭರಣಗಳನ್ನು ಪೂರೈಕೆ ಮಾಡುವ ಪ್ರಮುಖ ಆರೋಪಿ ವಿಕ್ರಮ್ ಅಮೃತ್‌ಲಾಲ್ ಬಾಘಾ ಎಂಬಾತನ ಪಾತ್ರವೂ ತನಿಖೆಯಿಂದ ಬಹಿರಂಗವಾಗಿದ್ದು, ಆರೋಪಿಗಳ ಮೇಲಿನ ಮುಂದಿನ ತನಿಖೆ ಪ್ರಗತಿಯಲ್ಲಿದೆ.

Leave a Reply

Your email address will not be published. Required fields are marked *

ಪಟ್ಲ ಸತೀಶ್ ಶೆಟ್ಟಿ ಅವರಿಗೆ ಡಾ. ಶಿವರಾಮ ಕಾರಂತ ಪ್ರಶಸ್ತಿ..!

ವ್ಯಕ್ತಿಯೊಬ್ಬ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ…!

ವಿ ಡಿ ಸತೀಶನ್ ಅವರನ್ನು ಕಾಸರಗೋಡಿನಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು…!

ಜಿಲ್ಲೆಯ ಹಿರಿಯ ರಾಜಕಾರಣಿ, ಬೈಂದೂರಿನ ಮಾಜಿ ಶಾಸಕ ಬಸ್ರೂರು ಅಪ್ಪಣ್ಣ ಹೆಗ್ಡೆ ನಿಧನ…!

ಬಂಟ್ವಾಳ: ನಿವೃತ್ತ ಕೃಷಿ ಅಧಿಕಾರಿ ನಾರಾಯಣ ನಾಯ್ಕ್ (65) ಹೃದಯಾಘಾತದಿಂದ ನಿಧನ!

ಮಂಗಳೂರು: ಪಟ್ಲ ಸತೀಶ್ ಶೆಟ್ಟಿಯವರಿಗೆ ಅತ್ಯುನ್ನತ ಡಾ. ಶಿವರಾಮ ಕಾರಂತ ಪ್ರಶಸ್ತಿ ಘೋಷಣೆ!

ಮಂಗಳೂರು: ಪಚ್ಚನಾಡಿ ರೈಲ್ವೇ ಹಳಿಯಲ್ಲಿ ಯುವಕನ ಮೃ*ತದೇಹ ಪತ್ತೆ; ಸಂಶಯಾಸ್ಪದ ಸಾ*ವು..!

ಬಂಟ್ವಾಳ: ಪಾಣೆಮಂಗಳೂರು ಸಮೀಪ ನೇತ್ರಾವತಿ ನದಿಯಲ್ಲಿ ಮೃ*ತದೇಹ ಪ*ತ್ತೆ….!

ಮಂಗಳೂರು: ಸಂಹಿತೆಗಳ ಜಾರಿಯಿಂದ ಯೂನಿಯನ್ ಮುಕ್ತ ಭಾರತವಾಗುವ ಅಪಾಯವಿದೆ- ಫಣೀಂದ್ರ ಕೆ ಎಚ್ಚರ!

error: Content is protected !!