ಪುತ್ತೂರು ಬೈಪಾಸ್ ಅಶ್ಮಿ ಕಂಫರ್ಟ್ನ ಬಳಿ ಅಪರಿಚಿತ ವಾಹನವೊಂದು ಹೋರಿ ಮತ್ತು ಕರುವಿಗೆ ಡಿಕ್ಕಿ ಹೊಡೆದು ಪರಾರಿಯಾಗಿರುವ ಘಟನೆ ಪುತ್ತೂರಿನ ಬೈಪಾಸ್ ನಲ್ಲಿ ನಡೆದಿದೆ.

ಬೆಳಗ್ಗಿನ ಜಾವ ಹೋರಿ ಮತ್ತು ಕರುವಿಗೆ ಡಿಕ್ಕಿ ಹೊಡೆದ ಘಟನೆ ತಿಳಿದ ವಿಶ್ವ ಹಿಂದೂ ಪರಿಷದ್ ಬಜರಂಗದಳ ಕಾರ್ಯಕರ್ತರು ತಕ್ಷಣ ಧಾವಿಸಿ ತುರ್ತು ಚಿಕಿತ್ಸೆಗೆ ಸರಕಾರಿ ಪಶು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಪಶು ಆಸ್ಪತ್ರೆಯಲ್ಲಿ ಕರುವಿಗೆ ಚಿಕಿತ್ಸೆ ಕೊಡಿಸಿ ಬಳಿಕ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಕಾಮಧೇನು ಗೋಶಾಲೆಗೆ ಸೇರಿಸಲಾಗಿದೆ. ಈ ಸಮಯದಲ್ಲಿ ಬಜರಂಗದಳ ಪುತ್ತೂರು ಗೋರಕ್ಷಾ ಪ್ರಮುಖ್ ಧನರಾಜ್ ಬೆಳ್ಳಿಪ್ಪಾಡಿ, ಬಜರಂಗದಳ ಸುರಕ್ಷಾ ಪ್ರಮುಖ್ ಜೀವನ್ ಆಚಾರ್ಯ, ಚಾಲಕ ಚಾಮಯ್ಯ ಬಲ್ನಾಡ್, ಹಾಗೂ ಅಜಯ್, ಮತ್ತಿತರರ ಕಾರ್ಯಕರ್ತರು ಉಪಸ್ಥಿತರಿದ್ದರು.



