ಮೂಲ್ಕಿ ತಾಲೂಕಿನ ಹಳೆಯಂಗಡಿ ಮತ್ತು ಚೆಳ್ಳಾರು ಗ್ರಾ. ಪಂ.ಗಳ ಗಡಿ ಭಾಗದ ಕರಿತೋಟ ಬಳಿ ನಂದಿನಿ ನದಿಯ ಕಿಂಡಿ ಅಣೆಕಟ್ಟಿನಲ್ಲಿ ಮರಳು ತೆಗೆಯಲು ಬಳಸುವ ದೋಣಿಯೊಂದು ಸಿಲುಕಿದ್ದು, ಇದನ್ನು ಮೇಲೆತ್ತಲು ಯಾರೂ ಇನ್ನೂ ಮುಂದಾಗಿಲ್ಲ. ಸ್ಥಳೀಯರು ನೀಡಿದ ಮಾಹಿತಿಯಂತೆ ನಾಲ್ಕು ದಿನಗಳಿಂದ ದೋಣಿ ಸೇತುವೆಯ ಪಿಲ್ಲರ್ನಲ್ಲಿ ಸಿಲುಕಿಕೊಂಡಿದೆ. ನಂದಿನಿ ನದಿಯು ಉಕ್ಕಿ ಹರಿಯುತ್ತಿರುವ ಕಾರಣ ಮರಳು ತೆಗೆಯುವ ಈ ದೋಣಿಯನ್ನು ಮೇಲೆತ್ತಲು ಸಾಧ್ಯವಾಗಿಲ್ಲ ಎನ್ನಲಾಗಿದೆ. ದೋಣಿ ಯಾರದೆಂದು ಸೂಕ್ತ ಮಾಹಿತಿ ಇಲ್ಲ. ಅನಾಥ ಸ್ಥಿತಿಯಲ್ಲಿ ಕಂಡು ಬಂದಿದೆ. ಸ್ಥಳೀಯರು ಗ್ರಾಮ ಪಂಚಾಯತ್ಗೆ ಮಾಹಿತಿ ನೀಡಿದ್ದೇವೆ ಎಂದು ಹೇಳಿದ್ದಾರೆ. ದೋಣಿಯನ್ನು ತೆಗೆಯದಿದ್ದ ಅಣೆಕಟ್ಟಿನ ಹಲಗೆಗೂ ಹಾನಿಯಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.




