ಜನವರಿ 26ರಂದು ರಾತ್ರಿ ಉಡುಪಿಯ ಕಲ್ಸಂಕದಲ್ಲಿ ಸಂಭವಿಸಿದ ಅಪಘಾತದಲ್ಲಿ ವಿದ್ಯಾರ್ಥಿ ಅವಿನಾಶ್ ರಾವ್ ಮೃತಪಟ್ಟಿದ್ದಾರೆ.

ಅವಿನಾಶ್ ರಾವ್ ಪಣಿಯೂರು ಮೂಲದವರಾಗಿದ್ದು ಬಿ.ಬಿ.ಎಂ. ವ್ಯಾಸಂಗ ಮಾಡುತ್ತಿದ್ದರು. ಇನ್ನು ಅವರು ನಿನ್ನೆ ಬೀಚಿಗೆ ತೆರಳಿ ಸ್ಕೂಟರಿನಲ್ಲಿ ಮರಳಿ ಮಣಿಪಾಲಕ್ಕೆ ಬರುವಾಗ ಈ ಅಪಘಾತ ಸಂಭವಿಸಿದ್ದು, ಸ್ಕೂಟರ್ ನಿಯಂತ್ರಣ ತಪ್ಪಿ ಪಕ್ಕದಲ್ಲಿ ಹೋಗುತ್ತಿದ್ದ ಕಂಟೈನರ್ ಚಕ್ರದ ಅಡಿಗೆ ಸಿಲುಕಿದ್ದರಿಂದ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಕೆಲ ಕಾಲ ಸಂಚಾರ ದಟ್ಟಣೆ ಉಂಟಾಯಿತು. ಅಪಘಾತದಲ್ಲಿ ಸ್ಕೂಟರ್ ಸವಾರನ ದೇಹ ಛಿದ್ರಗೊಂಡಿತ್ತು. ಇನ್ನು ಸಮಾಜ ಸೇವಕ ನಿತ್ಯಾನಂದ ಒಳಕಾಡು ಅವರು ಪೊಲೀಸರ ಸಮಕ್ಷಮ ಮೃತ ದೇಹವನ್ನು ಅಜ್ಜರಕಾಡು ಆಸ್ಪತ್ರೆಯ ಮರಣೋತ್ತರ ವಿಭಾಗಕ್ಕೆ ಸಾಗಿಸಿದ್ದಾರೆ. ಮೃತರು ತಂದೆ, ತಾಯಿ, ಸಹೋದರನನ್ನು ಅಗಲಿದ್ದಾರೆ.



