ಕರಾವಳಿ

ವಿಟ್ಲ: ಡಾ. ಕನ್ಯಾನ ಅವರ ಕಠಿಣ ನಿರ್ಧಾರದಿಂದ ಹಿಂದೆ ಸರಿದು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು; ರಾಜೀವ್ ಭಂಡಾರಿ ಕುಂಡಕೋಳಿ ಮನವಿ.

ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಕನ್ಯಾನ ಸದಾಶಿವ ಶೆಟ್ಟಿಯವರು ನೋವಿನಿಂದ ಮಾತನಾಡಿರುವ ವಿಡಿಯೋ ಹಿನ್ನೆಲೆ ವಿಟ್ಲ ವಲಯ ಬಂಟರ ಸಂಘದಿಂದ ಅವರಿಗೆ ಬೆಂಬಲ ವ್ಯಕ್ತಪಡಿಸಲಾಗಿದೆ.

ಸದಾಶಿವ ಶೆಟ್ಟಿ ಅವರು ಅಶಕ್ತರು, ಬಡವರು, ವಿದ್ಯಾರ್ಥಿಗಳು ಮತ್ತು ಧಾರ್ಮಿಕ ಕ್ಷೇತ್ರಗಳಿಗೆ ನೀಡಿರುವ ಸೇವೆ ಅಪಾರವಾಗಿದೆ. ಅವರ ಮನಸ್ಸಿಗೆ ನೋವುಂಟು ಮಾಡಿದವರನ್ನು ಸಮಾಜ ಖಂಡಿಸುತ್ತಿದ್ದು, ಅವರು ತೆಗೆದುಕೊಂಡ ಕಠಿಣ ನಿರ್ಧಾರದಿಂದ ಹಿಂದೆ ಸರಿದು ಹಿಂದಿನಂತೆ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಂಘದ ಅಧ್ಯಕ್ಷ ರಾಜೀವ್ ಭಂಡಾರಿ ಕುಂಡಕೋಳಿ ಅವರು ವಿಟ್ಲ ವಲಯ ಬಂಟರ ಸಂಘದ ಪರವಾಗಿ ವಿಟ್ಲ ಪ್ರೆಸ್ ಕ್ಲಬ್ ನಲ್ಲಿ ಮನವಿ ಮಾಡಿದ್ದಾರೆ. ಕೊಡುಗೈದಾನಿ, ಅಶಕ್ತರ ಬಾಳಿನ ಆಶಾಕಿರಣ ಅದೆಷ್ಟೋ ನೊಂದವರ ಕಣ್ಣೀರು ಒರೆಸಿದ ಸದಾಶಿವಣ್ಣನವರು ಬಹಳಷ್ಟು ನೊಂದು ಆಡಿದ ಮಾತುಗಳನ್ನು ಕೇಳಿ ನನಗೆ ಮಾತ್ರವಲ್ಲ ಜಾತ್ಯಾತೀತವಾಗಿ ಇಡೀ ಸಮಾಜಕ್ಕೆ ಖೇದ ವಾಗಿದೆ. ದಾನದ ಮೂಲಕ ನಮ್ಮ ಜಿಲ್ಲೆ ಮಾತ್ರವಲ್ಲ, ಇಡೀ ರಾಜ್ಯವೇ ತಿರುಗಿ ನೋಡುವಂತಹ ಉದಾತ್ತ ಗುಣದವರಾದ ತಮ್ಮ ಹಾಲಿನಂತಹ ಮನಸ್ಸಿಗೆ ಘಾಸಿ ಆಗುವುದನ್ನು ಯಾರು ಸಹಿಸುವುದಿಲ್ಲ. ತಮ್ಮ ಮನಸ್ಸಿಗೆ ನೋವು ಉಂಟು ಮಾಡಿದವರು ಯಾರೇ ಆಗಲಿ ಅದನ್ನು ನಮ್ಮ ವಿಟ್ಲ ಬಂಟರ ಸಮಾಜ ಮಾತ್ರವಲ್ಲ ಸಮಾಜದ ಪ್ರತಿಯೊಬ್ಬರು ಖಂಡಿಸುತ್ತಾರೆ.

ಸದಾಶಿವಣ್ಣ, ತಾವು ನೊಂದು ತೆಗೆದುಕೊಂಡ ನಿರ್ಧಾರದಿಂದ ಇಡೀ ಅಶಕ್ತ ಸಮಾಜ ಬಡವಾಗುತ್ತದೆ. ಅದು ಏನೇ ಇರಲಿ ಸದಾಶಿವಣ್ಣನ ಜೊತೆ ನಾವು ವಿಟ್ಲ ವಲಯದ ಬಂಟರಿದ್ದೇವೆ, ತಾವು ನಮ್ಮ ಸಮಾಜಕ್ಕೆ ಒಂದು ದಿವ್ಯ ಶಕ್ತಿಯಾಗಿದ್ದೀರಿ, ಆ ಶಕ್ತಿ ಕುಂದುವುದನ್ನು ಯಾರು ಸಹಿಸುವುದಿಲ್ಲ ಇಡೀ ಸಮಾಜವೇ ತಮ್ಮೊಂದಿಗಿರುವಾಗ ತಾವು ನೊಂದುಕೊಳ್ಳುವ ಅವಶ್ಯಕತೆ ಇರುವುದಿಲ್ಲ, ಯಾರೋ ಬೆರಳೆಣಿಕೆಯ ಪಟ್ಟಭದ್ರ ಹಿತಾ ಶಕ್ತಿಯ ಮಾತುಗಳಿಗೆ ಅಥವಾ ಕುಕೃತ್ಯಕ್ಕೆ ತಾವು ಧೃತಿಕೆಡಬೇಕಾಗಿಲ್ಲ, ತಾವು ತಮ್ಮ ಜನಹಿತ ಕಾರ್ಯದಿಂದ ಹಿಂದೆ ಸರಿದರೆ ಎಲ್ಲಾ ವರ್ಗದ ಸಮಾಜ ಬಹಳ ಬೆಲೆ ತೆರಬೇಕಾಗಿದೆ, ತಾವು ಇಷ್ಟು ಸಮಯ ಮಾಡಿದ ಸಮಾಜ ಹಿತ ಕಾರ್ಯವನ್ನು ನಮ್ಮ ಜನ ಯಾವತ್ತು ಮರೆಯಲು ಸಾಧ್ಯವಿಲ್ಲ. ತಾವು ಮಾಡಿಕೊಂಡು ಬಂದ ಸೇವಾ ಕಾರ್ಯದಿಂದ ತಮ್ಮ ವಿದ್ಯಾಭ್ಯಾಸವನ್ನು ಅರ್ಧದಲ್ಲಿ ಮೊಟಕುಗೊಳಿಸುವ ಅದೆಷ್ಟೋ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸವನ್ನು ಮುಂದುವರಿಸಿ ಉತ್ತಮ ಭವಿಷ್ಯವನ್ನು ರೂಪಿಸಿಕೊಂಡಿದ್ದಾರೆ, ಅದೆಷ್ಟೋ ದೇವಸ್ಥಾನಗಳು ಜೀಣೋದ್ಧಾರವನ್ನು ಕಂಡಿವೆ. ಅದೆಷ್ಟೋ ರೋಗಿಗಳು ಸಾವಿನ ದವಡೆಯಿಂದ ಪಾರಾಗಿ ಜೀವನವನ್ನು ಮುಂದುವರಿಸಿದ್ದಾರೆ, ಅದೆಷ್ಟೋ ವಸತಿಹೀನರು ವಸತಿ ನಿರ್ಮಿಸಿಕೊಂಡು ನೆಮ್ಮದಿಯ ಬದುಕು ನಡೆಸುತ್ತಿದ್ದಾರೆ, ಇಂತಹ ಒಬ್ಬ ದೇವಸಮಾನ ಮಹಾನ್ ವ್ಯಕ್ತಿಯನ್ನು ನಮ್ಮ ಸಮಾಜ ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ. ಆದ್ದರಿಂದ ಸದಾಶಿವಶೆಟ್ಟರಲ್ಲಿ ನಮ್ಮೆಲ್ಲರ ಬೇಡಿಕೆ ತಾವು ತೆಗೆದುಕೊಂಡ ಕಠಿಣ ನಿರ್ಧಾರದಿಂದ ಹಿಂದೆ ಸರಿದು ಈ ಮೊದಲಿನಂತೆಯೇ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡು ಸಮಾಜಕ್ಕೆ ಆಧಾರವಾಗಬೇಕಾಗಿ ನಮ್ಮೆಲ್ಲರ ಕೋರಿಕೆ ಆಗಿದೆ. ಸದಾಶಿವಣ್ಣ ಈ ರೀತಿಯ ಅಪಪ್ರಚಾರಗಳು ಸಮಾಜಮುಖಿಯಾಗಿ ಕೆಲಸ ಮಾಡುವವರಿಗೆ ಸರ್ವೇ ಸಾಮಾನ್ಯವಾಗಿದೆ ಎಂದು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಬಂಟರ ಸಂಘ ವಿಟ್ಲ ವಲಯದ ಗೌರವ ಅಧ್ಯಕ್ಷರಾದ ರಾಧಾಕೃಷ್ಣ ಚೆಲ್ಲಡ್ಕ, ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಶೆಟ್ಟಿ ಮರುವಾಳ, ಗೌರವ ಸಲಹೆಗಾರರಾದ ಪ್ರಭಾಕರ್ ಶೆಟ್ಟಿ ದಂಬೆಕಾನ, ತಾಂತ್ರಿಕ ಸಲಹೆಗಾರರಾದ ಭಾಸ್ಕರ ರೈ ಮೂಡ0ಬೈಲು ಪ್ರೆಸ್ ಮೀಟ್ ನಲ್ಲಿ ಉಪಸ್ಥಿತರಿದ್ದರು.

ಅಭಿಮತ ಟಿವಿ

Abhimatha TV is a trusted channel renowned for its dedication to honest journalism and its unwavering commitment to showcasing the rich culture, heritage, and traditions of Tulunadu. With a focus on delivering unbiased news and promoting the region's vibrant art forms, rituals, and cultural events, Abhimatha TV has become a beacon of authenticity and pride for the community. Established in 2018, the channel was founded by Mamatha P. Shetty (Managing Partner) and Kanyana Sadhashiva Shetty (Chief Promoter) with a mission to provide truthful reporting and celebrate the essence of our heritage.

Recent Posts

ಮಂಗಳೂರು: ಮಂತ್ರಾಲಯದ ಬಳಿ ಭೀಕರ ಅಪಘಾತ; ಯಕ್ಷಧ್ರುವ ಪಟ್ಲ ಫೌಂಡೇಷನ್ ಕಾರ್ಯದರ್ಶಿ ರವಿ ಶೆಟ್ಟಿ ನಿಧನ…!

ಯಕ್ಷಧ್ರುವ ಪಟ್ಲ ಫೌಂಡೇಷನ್ ಮಂಗಳೂರು ಇದರ ಜೊತೆ ಕಾರ್ಯದರ್ಶಿ ರವಿ ಶೆಟ್ಟಿ ಅಶೋಕ್ ನಗರ ಅಪಘಾತದಿಂದ ಮಂಗಳವಾರ (ಜು.21) ಮುಂಜಾನೆ…

23 hours ago

ಬಂಟ್ವಾಳ: ಬಂಟ್ವಾಳ ತಾಲೂಕಿನ ಕುರಿಯಾಳ ಗ್ರಾಮದಲ್ಲಿ ಅಗ್ನಿ ಅವಘಡ…..!

ಬಂಟ್ವಾಳ ತಾಲೂಕಿನ ಕುರಿಯಾಳ ಗ್ರಾಮದ ದಾಸೋಟ್ಟು-ಕುಕ್ಕಾಜೆ ನಿವಾಸಿ ರಮೇಶ್ ಪೂಜಾರಿ ಅವರ ಮನೆಯ ಹಿಂಭಾಗಕ್ಕೆ ಹೊಂದಿಕೊಂಡಿದ್ದ ಬಚ್ಚಲು ಮನೆ ಹಾಗೂ…

2 days ago

ಬಂಟ್ವಾಳ: ಸೂರಿಕುಮೇರ್ ಪೆಟ್ರೋಲ್ ಬಂಕ್ ಸಮೀಪ ಅಪ*ಘಾತ; ಮಾನವೀಯತೆ ಮೆರೆದ ಎಸ್‌ಐ ರಾಮಕೃಷ್ಣ..!

ಪೊಲೀಸ್ ಇಲಾಖೆಯ ನಿಜವಾದ ಕರ್ತವ್ಯನಿಷ್ಠೆ, ಸಮಯಪ್ರಜ್ಞೆ ಮತ್ತು ಮಾನವೀಯತೆಯ ಅಪರೂಪದ ಉದಾಹರಣೆಯೊಂದು ಸೂರಿಕುಮೇರ್ ಪೆಟ್ರೋಲ್ ಬಂಕ್ ಸಮೀಪದಲ್ಲಿ ನಡೆದ ಅಪಘಾತದ…

2 days ago

ಮಂಗಳೂರು: ವಿವಾಹಿತ ಮಹಿಳೆಯೊಬ್ಬರು ಮನೆಯಲ್ಲಿಯೇ ನೇಣು ಬಿಗಿದು ಆತ್ಮಹ*ತ್ಯೆ..!

ವಿವಾಹಿತ ಮಹಿಳೆಯೊಬ್ಬರು ಮನೆಯಲ್ಲಿಯೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೂಡಬಿದರೆಯ ಮಿಜಾರು ಕೊಪ್ಪದಕುಮೇರಿಯಲ್ಲಿ ಸಂಜೆ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ…

4 days ago

ವಿಟ್ಲ: ರಸ್ತೆ ಬದಿಯ ಮರಕ್ಕೆ ಡಿಕ್ಕಿಹೊಡೆದ ಟಿಪ್ಪರ್ ಲಾರಿ – ಇಬ್ಬರಿಗೆ ಗಾಯ..!

ನಿಯಂತ್ರಣ ತಪ್ಪಿದ ಟಿಪ್ಪರ್ ಲಾರಿಯೊಂದು ರಸ್ತೆ ಬದಿಯ ಮರವೊಂದಕ್ಕೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಗಂಭೀರ ಗಾಯಗೊಂಡ ಘಟನೆ ವಿಟ್ಲ…

4 days ago

ಮಾಣಿ: ಮರ ಬಿದ್ದು ಟ್ರಾನ್ಸ್ ಫಾರ್ಮರ್‌ಗೆ ಹಾನಿ; ರಸ್ತೆ ಮೇಲೆ ಮರ ಸಹಿತ ಮುರಿದುಬಿದ್ದು ಸಂಚಾರ ಬಂದ್…!

ಶುಕ್ರವಾರ ಸಂಜೆ ಬೀಸಿದ ಬಿರುಗಾಳಿ ಮಳೆಗೆ ರಾಷ್ಟ್ರೀಯ ಹೆದ್ದಾರಿ ಮಾಣಿ ಬೊಳ್ಳುಕಲ್ಲಿನಿಂದ ಪೆರಾಜೆ ಶ್ರೀ ರಾಮಚಂದ್ರಾಪುರ ಮಠಕ್ಕೆ ಹೋಗುವ ಕಮಲ…

4 days ago