ಸಹಕಾರಿ ಕ್ಷೇತ್ರದ ಸಂಘಟನೆ ಸಹಕಾರ ಭಾರತಿಯಡಿಯಲ್ಲಿ ಮಾರ್ಚ್ 1 ರಂದು ಸಹಕಾರಿ ಕ್ರೀಡೋತ್ಸವ 2026 ಅಡ್ಯಾರ್ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜು ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಸಹಕಾರ ಭಾರತಿಯ ಜಿ. ಆರ್. ಪ್ರಸಾದ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಜಿಲ್ಲೆಯಾದ್ಯಂತದ ಕಾರ್ಯಾಚರಣೆ ನಡೆಸುತ್ತಿರುವ ಸಹಕಾರಿ ಸಂಘಗಳಾದ ಸಹಕಾರಿ ಸಂಘಗಳು, ಹಾಲು ಉತ್ಪಾದಕರ ಸಹಕಾರಿ ಸಂಘ, ರಬ್ಬರ್, ಪ್ರಾಥಮಿಕ ವ್ಯವಸಾಯ ಸೇವಾ ಸಹಕಾರಿ ಸಂಘ ಸಹಿತ ಇತರೇ ಸಹಕಾರಿ ಕ್ಷೇತ್ರದ ಹೆಚ್ಚಿನ ಸಂಸ್ಥೆಗಳು ಈ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲಿವೆ ಎಂದರು. ಈ ಸಂದರ್ಭ ಸಹಕಾರ ಭಾರತಿ ಸಂಘದ ಸದಸ್ಯರಾದ ಬಿ. ಸುಧಾಕರ್ ರೈ ಬೋಳಂತೂರು, ಚರಣ್ ರಾಜ್, ಗಣೇಶ್ ಶಣೈ ಉಪಸ್ಥಿತರಿದ್ದರು.



