ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಮಧ್ಯೆ ಬಿಸಿರೋಡು ರೈಲ್ವೆ ಮೇಲ್ಸೇತುವೆಯ ಪಕ್ಕ ಹಾಕಲಾಗಿದ್ದ ಪ್ಲೆಕ್ಸ್ ಹೆದ್ದಾರಿಯ ಮಧ್ಯ ಭಾಗಕ್ಕೆ ಬಿದ್ದಿದೆ.
ಕಳೆದ ವಾರ ಇದೇ ರೀತಿ ಸರ್ಕಲ್ ಬಳಿಯಲ್ಲಿ ಹಾಕಲಾಗಿದ್ದ ಪ್ಲೆಕ್ಸ್ಗಳು ಹೆದ್ದಾರಿ ಮೇಲೆ ಬಿದ್ದ ಬಗ್ಗೆ ವರದಿ ಮಾಡಲಾಗಿತ್ತು. ಸೆಕೆಂಡ್ಗೆ ಹತ್ತಾರು ವಾಹನಗಳು ಸಂಚಾರ ಮಾಡುವ ಹೆದ್ದಾರಿಯ ಬದಿಯಲ್ಲಿ ಬೀಳುವ ರೀತಿಯಲ್ಲಿ ಪ್ಲೆಕ್ಸ್ ಅಳವಡಿಕೆಗೆ ಪುರಸಭೆ ಅನಧಿಕೃತವಾಗಿ ಅವಕಾಶ ನೀಡಿರುವುದು ಮುಂದೊಂದು ದಿನ ಅನಾಹುತಗಳು ನಡೆಯುವುದಕ್ಕೆ ಕಾರಣವಾಗಬಹುದು. ಅನಧಿಕೃತ ಪ್ಲೆಕ್ಸ್ ಅಳವಡಿಕೆಗೆ ಅವಕಾಶ ನೀಡಬಾರದು ಮತ್ತು ಪ್ಲೆಕ್ಸ್ ಬಿದ್ದು ಅನಾಹುತಗಳು ಸಂಭವಿಸುವ ಸಾಧ್ಯತೆಗಳಿವೆ ಎಂದು ಎಚ್ಚರಿಸಿದರು ಕೂಡ ಯಾವುದೇ ಸ್ಪಂದನೆ ಪುರಸಭೆಯಿಂದ ಸಿಕ್ಕಿದಂತೆ ಕಂಡು ಬಂದಿಲ್ಲ. ರಸ್ತೆ ಬದಿಯಲ್ಲಿ ರಾಜರೋಷವಾಗಿ ಬ್ಯಾನರ್ಗಳು, ಪ್ಲೆಕ್ಸ್ಗಳು ತಲೆಎತ್ತಿ ನಿಂತಿವೆ. ಜೊತೆಗೆ ದಿನವೊಂದಕ್ಕೆ ಪ್ಲೆಕ್ಸ್ಗಳು ಕೆಳಗೆ ಬೀಳುತ್ತಲೇ ಇವೆ. ಆದರೆ ಕಣ್ಣಿದ್ದು ಕುರುಡನಂತೆ ಆಗಿರುವ ಪುರಸಭೆಯ ಕಿವಿ ಹಿಂಡುವವರು ಯಾರು ಎಂಬ ಪ್ರಶ್ನೆ ಇದೀಗ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.
ಮಂಗಳೂರು: ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಸಂಪೂರ್ಣವಾಗಿ ಡಿಜಿಟಲ್ ಮಾದರಿಯಲ್ಲಿ ಜನಗಣತಿ ನಡೆಯಲಿದ್ದು, ಅದರ ಭಾಗವಾಗಿ ಕರ್ನಾಟಕದಲ್ಲಿ 2027ರ ಜನಗಣತಿಯ…
ಮಂಗಳೂರು: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಇದರ ಮಂಗಳೂರು ನಗರ ಘಟಕದ ಅಷ್ಟಮ ಸಂಭ್ರಮ ಕಾರ್ಯಕ್ರಮವು ಮಂಗಳೂರು ನಗರ ಘಟಕದ…
ಬಂಟ್ವಾಳ: ತಾಲೂಕಿನ ವಗ್ಗದ ನಿವಾಸಿ ಅಟೋ ಚಾಲಕನೋರ್ವ ಕಾಣೆಯಾದ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. …
ಕಾಸರಗೋಡು: ಬಿಜೆಪಿ ರಾಷ್ಟ್ರೀಯ ಪ್ರಧಾನ ಕರ್ಯರ್ಶಿ ಹಾಗೂ ಕೇರಳದ ಚುನಾವಣಾ ಪ್ರಭಾರಿ ವಿನೋದ್ ಥಾವ್ಡೆ ಅವರು ನಿನ್ನೆ ಕಾಸರಗೋಡಿಗೆ…
ಮಾಣಿ ಸಮೀಪದ ಸೂರಿಕುಮೇರು ಜಂಕ್ಷನ್ನಲ್ಲಿ ಖಾಸಗಿ ಬಸ್ಗೆ ಹಿಂಬದಿಯಿಂದ ಪಿಕಪ್ ವಾಹನ ಡಿಕ್ಕಿ ಹೊಡೆದಿದ್ದು, ಪಿಕಪ್ ವಾಹನದ ಮುಂಭಾಗವು ಸಂಪೂರ್ಣ…
ಹೆಮ್ಮಾಡಿ ಕುಂದಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಯಾನಕ ವ್ಹೀಲಿಂಗ್ ಮಾಡಿದ ಯುವಕ ಕಳ್ಳತನ ಪ್ರಕರಣದಲ್ಲೂ ಭಾಗಿಯಾಗಿದ್ದು, ಈತನನ್ನು ಪೊಲೀಸರು ಬಂಧಿಸಿದ್ದಾರೆ. ಪೌಜಾನ್…