ಹುಣಸೂರು: ನಾಗರಹೊಳೆ ಉದ್ಯಾನದಲ್ಲಿ ಜಿಂಕೆಯನ್ನು ಬೇಟೆಯಾಡುತ್ತಿದ್ದ ಇಬ್ಬರು ಅರೋಪಿಗಳನ್ನು ಬಂಧಿಸಿರುವ ಘಟನೆ ಏಪ್ರಿಲ್ 28 ರ ಮಂಗಳವಾರ ನಡೆದಿದ್ದು, ಅರಣ್ಯಾಧಿಕಾರಿಗಳು ಕೃತ್ಯಕ್ಕೆ ಬಳಸಿದ್ದ ಪರಿಕರಗಳನ್ನು ವಶಪಡಿಸಿಕೊಂಡಿರುವ ಘಟನೆ ವೀರನಹೊಸಳ್ಳಿ ವಲಯದಲ್ಲಿ ನಡೆದಿದೆ.
ತಾಲೂಕಿನ ಹನಗೋಡು ಹೋಬಳಿಯ ಶಿಂಡೇನಹಳ್ಳಿ ರವಿಕುಮಾರ್ ಆಲಿಯಾಸ್ ಅಮಾಸೆ ರವಿ ಹಾಗೂ ಬೋವಿ ಕಾಲೋನಿಯ ರಾಜು ಆಲಿಯಾಸ್ ಗುಂಡ ಬಂಧಿತ ಆರೋಪಿಗಳು.
ಶಿಂಡೇನಹಳ್ಳಿಯ ಸೀನೇಗೌಡರ ಪುತ್ರ ಸುನಿಲ್, ಮುದಗನೂರಿನ ಬಸವೇಗೌಡರ ಪುತ್ರ ಎಂ.ಬಿ.ಗಣೇಶ ಕತ್ತಲಿನಲ್ಲಿ ಪರಾರಿಯಾಗಿರುವ ಆರೋಪಿಗಳು.
ಹೆಣ್ಣು ಜಿಂಕೆಯ ಶವ, ಬೇಟೆಗೆ ಬಳಸಿದ್ದ ಸಿಂಗಲ್ ಬ್ಯಾರಲ್ ಬಂದೂಕು, ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನ, ಮಚ್ಚು, 5 ಜೀವಂತ ಕಾಡತೂಸುಗಳು, ಬಳಕೆ ಮಾಡಿದ್ದ 1 ಕಾಡುತೂಸುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಘಟನೆಯ ವಿವರ: ಆರೋಪಿಗಳು ನಾಗರಹೊಳೆ ಉದ್ಯಾನದ ವೀರನಹೊಸಹಳ್ಳಿ ವನ್ಯಜೀವಿ ವಲಯಕ್ಕೆ ವನ್ಯಜೀವಿ ಭೇಟೆಯಾಡಲು ಬರುತ್ತಿರುವ ಬಗ್ಗೆ ಮಂಗಳವಾರ ಬೆಳಗಿನ ಜಾವ ಬಂದ ಖಚಿತ ಮಾಹಿತಿ ಮೇರೆಗೆ ನಾಗರಹೊಳೆ ಹುಲಿಯೋಜನೆ ನಿರ್ದೇಶಕಿ ಪಿ.ಎ.ಸೀಮಾರವರ ಮಾರ್ಗದರ್ಶನದಲ್ಲಿ ಆರ್.ಎಫ್.ಓ ವಿನೋದ್ಗೌಡ ನೇತೃತ್ವದ ತಂಡ ಕಣ್ಣಾವಲಿದ್ದ ವೇಳೆ ಬೆಳಗಿನ ಜಾವ 4ರ ವೇಳೆಗೆ ಚಾಮಳ್ಳಿ ಶಾಖೆಯ ಎರೆಕಟ್ಟೆ ಗಸ್ತಿನ ಹೊಸಕಟ್ಟೆ ಕೆರೆ-ಎರಕಟ್ಟೆ ಬಳಿಯ ಜೀಪ್ ರಸ್ತೆಯ ತಿರುವಿನ ಬಳಿ ಗುಂಡಿನ ಶಬ್ದ ಕೇಳಿ ಬಂದ ಕಡೆ ಸಿಬ್ಬಂದಿಗಳು ದೌಡಾಯಿಸಿ ಸುತ್ತುವರಿಯುತ್ತಿದ್ದಂತೆ ಇಬ್ಬರು ಆರೋಪಿಗಳು ಸಿಕ್ಕಿ ಬಿದ್ದಿದ್ದಾರೆ. ಕತ್ತಲಿನಲ್ಲಿ ಮತ್ತಿಬ್ಬರು ಪರಾರಿಯಾಗಿದ್ದಾರೆ.
ಆರೋಪಿಗಳಿಂದ ಪರಿಕರಗಳನ್ನು ವಶಪಡಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಮಾಹಿತಿ ನೀಡಲು ಎಸಿಎಫ್ ಮನವಿ: ಅರಣ್ಯದಂಚಿನ
ಗ್ರಾಮಸ್ಥರು ಉದ್ಯಾನದೊಳಗೆ ಅಕ್ರಮ ಪ್ರವೇಶ, ಇಂತಹ ಅಪರಾಧ ಕೃತ್ಯಗಳು ಕಂಡು ಬಂದಲ್ಲಿ ಇಲಾಖೆಗೆ ಮಾಹಿತಿ ನೀಡುವಂತೆ ಎಸಿಎಫ್ ಲಕ್ಷ್ಮೀಕಾಂತ್ ಮನವಿ ಮಾಡಿದ್ದಾರೆ. ಸೋಮವಾರ ಓರ್ವನನ್ನು ಬಂಧಿಸಿದ್ದರು. ವಾರದ ಹಿಂದಷ್ಟೆ ಮತ್ತೊಂದು ಪ್ರಕರಣದಲ್ಲಿ ಭೇಟೆಯಾಡಲು ಹೊಂಚು ಹಾಕಿದ್ದ ಇಬ್ಬರನ್ನು ಬಂದಿಸಿರುವುದನ್ನು ಸ್ಮರಿಸಬಹುದು.
ಕಾರ್ಯಾಚರಣೆಯಲ್ಲಿ ಆರ್.ಎಫ್.ಓ. ವಿನೋದ್ಗೌಡ, ಡಿಆರ್ಎಫ್ಓ ನವೀನ್ಕುಮಾರ್, ಸಹನಾ ವಿ.ಪಾಟೀಲ್, ಕೆ.ಶಿಲ್ಪ, ಗಸ್ತು ಅರಣ್ಯಪಾಲಕರಾದ ವೆಂಕಟೇಶ್, ಶಮಂತ, ನಾರಾಯಣ, ಅವಿನಾಶ್, ಅರಣ್ಯ ವೀಕ್ಷಕರಾದ ಶಾಂತಕುಮಾರ್, ಶಿವಕುಮಾರ್, ಗಾಯಿತ್ರಿ ಭಾಗವಹಿಸಿದ್ದರು.
ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಭೇಟಿ ನೀಡಿ ದೇವಿ ಮೂಕಾಂಬಿಕಾ…
ಮಳೆಗಾಲ ಆರಂಭವಾಗುತ್ತಿದ್ದಂತೆ ಸೇತುವೆಯೊಂದು ಕುಸಿದು ಬಿದ್ದ ಪರಿಣಾಮ ಹಲವು ಗ್ರಾಮಗಳ ಸಂಪರ್ಕದ ಕೊಂಡಿ ಕಳಚಿ ಬಿದ್ದು, ಜನರು ದ್ವೀಪದಂತೆ, ಹಳ್ಳಿಯೊಳಗೆ…
ಜ್ವರದಿಂದ ಬಳಲುತ್ತಿದ್ದ ಬಾಲಕಿಯೊರ್ವಳು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ಘಟನೆ ಬಂಟ್ವಾಳ ತಾಲೂಕಿನ ಅಲ್ಲಿಪಾದೆ ಎಂಬಲ್ಲಿ ನಡೆದಿದೆ. ಅಲ್ಲಿಪಾದೆ ಅನೇಜ…
ಬಿಸಿರೋಡಿನ ಪ್ರಸಿದ್ದ ಕ್ಯಾಂಟೀನ್ ಒಂದರಲ್ಲಿ ಅಡುಗೆ ಅನಿಲ ಸೋರಿಕೆಯಾಗಿ ಸ್ವಲ್ಪದರಲ್ಲಿ ದೊಡ್ಡ ದುರಂತವೊಂದು ತಪ್ಪಿದೆ. ಬಿಸಿರೋಡಿನ ಮಿನಿ ವಿಧಾನ ಸೌಧದ…
ಬೇಕಲ ಕೋಟೆ ಸಮೀಪದ ಪಳ್ಳಿಕರೆ ಕಡಲತೀರದಲ್ಲಿ ಭಾನುವಾರ ಸಂಜೆ ಸಂಭವಿಸಿದ ದುರ್ಘಟನೆಯಲ್ಲಿ ಇಬ್ಬರು ಕಾಲೇಜು ವಿದ್ಯಾರ್ಥಿಗಳು ಸಮುದ್ರದಲ್ಲಿ ಕೊಚ್ಚಿಹೋಗಿದ್ದು, ಅವರಿಗಾಗಿ…
ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಪಿಕಪ್ ಪಲ್ಟಿ ಹೊಡೆದ ಘಟನೆ ಸುಬ್ರಹ್ಮಣ್ಯ ಸಮೀಪದ ಕುಲ್ಕುಂದ ಎಂಬಲ್ಲಿ ನಡೆದಿದೆ. ರಾತ್ರಿ ವೇಳೆ…