ಬಂಟ್ವಾಳ ತಾಲೂಕಿನ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಒಡಿಯೂರು ಶ್ರೀಗಳವರ ಜನ್ಮದಿನೋತ್ಸವ ಸಮಿತಿ ವತಿಯಿಂದ ಪೂಜ್ಯ ಶ್ರೀಗಳವರ ಜನ್ಮದಿನೋತ್ಸವ ಗ್ರಾಮೋತ್ಸವ -2023 ಸೇವಾ ಸಂಭ್ರಮ ಹಾಗೂ ಗುರುವಂದನ ಕಾರ್ಯಕ್ರಮ ಇಂದು ಯಶಸ್ವಿಯಾಗಿ ನಡೆಯಿತು.
ಬೆಳಗ್ಗೆ ಶ್ರೀ ಗಣಪತಿ ಹವನ, ಶ್ರೀ ಅರವಿಂದ ಆಚಾರ್ಯ ಮಾಣಿಲ ಮತ್ತು ಬಳಗದವರಿಂದ ದಾಸವಾಣಿ, ಬಳಿಕ ಶ್ರೀಗಳ ಪಾದಪೂಜೆ, ತುಲಾಭಾರ, ಉಯ್ಯಾಲೆ ಸೇವೆ, ಗುರುವಂದನಾ ಕಾರ್ಯಕ್ರಮ ನೆರವೇರಿತು.
ಬಳಿಕ ಸಭಾಕಾರ್ಯಕ್ರಮ ನಡೆದಿದ್ದು, ಕಾರ್ಯಕ್ರಮದಲ್ಲಿ ಒಡಿಯೂರು ಕ್ಷೇತ್ರದ ಶ್ರೀ ಗುರುದೇವಾನಂದ ಸ್ವಾಮೀಜಿಗಳು ಆಶೀರ್ವಾಚನ ನೀಡಿ, ಸಂತನ ಬದುಕು ಸಂತಗಲ್ಲದು ಸಮಾಜ ಹಿತಕ್ಕೆ, ಹಾಗಾಗಿ ನಾವು ಸಮಾಜಕ್ಕಾಗಿ ಬದುಕಬೇಕು. ನಮ್ಮ ಒಳಗೆ ನಾವು ಹುಡುಕಾಟ ಮಾಡುವಂತಹ ಕಾರ್ಯವನ್ನು ಮಾಡಬೇಕು. ಆಗ ಅದು ಆಧ್ಯಾತ್ಮದ ಬದುಕು ಎಂದೆನಿಕೊಳ್ಳುತ್ತದೆ ಎಂದರು.
ಇನ್ನೂ ಈ ಕಾರ್ಯಕ್ರಮದಲ್ಲಿ ನಾಲ್ವರು ಸಾಧಕರಿಗೆ ಬಿರುದು ನೀಡಿ ಸನ್ಮಾನದ ಗೌರವಾರ್ಪಣೆ ನಡೆಯಿತು. ಆಶಕ್ತಿಗೆ ನೆರವಾಗುವ ಮಾಹಾದಾನಿ, ಮುಂಬಯಿ ಹೇರಂಬ ಕೆಮಿಕಲ್ ಇಂಡಸ್ಟ್ರೀಸ್ ಅಧ್ಯಕ್ಷ ಸದಾಶಿವ ಶೆಟ್ಟಿ, ಕೂಳೂರು ಕನ್ಮಾನ, ಇವರು ‘ದಾನಸಿರಿ’ ಬಿರುದನ್ನು ಮುಡಿಗೇರಿಸಿಕೊಂಡರು. ಸಾಂಸ್ಕೃತಿಕ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಸಾಧನೆಗೈದ ಡಾ. ಎಂ. ಮೋಹನ್ ಆಳ್ವ ಅವರು ‘ವಿದ್ಯಾಸಿರಿ’ ಬಿರುದನ್ನು ತಮ್ಮದಾಗಿಸಿಕೊಂಡಿದ್ದಾರೆ.
ಸಂಗೀತ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿದ ಶಂಕರ್ ಶಾನುಭೋಗ್ ಅವರು ಮುಕುಟಕ್ಕೆ ‘ಗಾನಸಿರಿ’ ಬಿರುದು ಮತ್ತೊಂದು ಗರಿಮೆಯಾಗಿದೆ. ಇನ್ನೂ ಹದಿನಾರು ಸಾವಿರಕ್ಕೂ ಹೆಚ್ಚಿನ ಜನರಿಗೆ ಉದ್ಯೋಗವನ್ನು ನೀಡಿರುವ ಶಶಿಧರ್ ಶೆಟ್ಟಿ ಬರೋಡ ಅವರಿಗೆ ‘ಸೇವಾ ಸಿರಿ’ ಬಿರುದನ್ನು ನೀಡಿ ಗೌರವಿಸಲಾಯಿತು.
ಬಳಿಕ ಮುಂಬಯಿ ಹೇರಂಬ ಕೆಮಿಕಲ್ ಇಂಡಸ್ಟ್ರೀಸ್ ಅಧ್ಯಕ್ಷ, ಕೊಡುಗೈದಾನಿ ಸದಾಶಿವ ಶೆಟ್ಟಿ ಕನ್ಯಾನ ಅವರು ಮಾತಾನಾಡಿ, ತುಳುನಾಡಿನ ಪುಣ್ಯ ಮಣ್ಣಿನಲ್ಲಿ ನಾನು ಹುಟ್ಟಿದ್ದು ಪೂರ್ವಜನ್ಮದ ಪುಣ್ಯವಾಗಿದೆ. ಆದರೆ ಸಮಾಜದಲ್ಲಿ ಹಿಂಸಾಚಾರ ಅನಾಗರಿಕ ತತ್ವಗಳು ಮನಸ್ಸಿಗೆ ವೇದನೆ ಕೊಡುವಂತಹ ವಿಚಾರವಾಗಿದೆ. ಬೇರೆ ಧರ್ಮದಲ್ಲಿ ಅವರ ಮಕ್ಕಳಿಗೆ ಚಿಕ್ಕನಿಂದಲೇ ದೇವರ ಬಗ್ಗೆ ಭಯ ಹುಟ್ಟಿಸುವ ಕೆಲಸವನ್ನು ಅವರ ಶಿಕ್ಷಣಗಳು ಮಾಡುತ್ತದೆ. ಆದರೆ ನಮ್ಮ ಧರ್ಮದಲ್ಲಿ ಯಾವುದೇ ಭಯವಿಲ್ಲ, ಹಾಗಾಗಿ ಅತ್ಯಾಚಾರದಂತಹ ಕೃತ್ಯಗಳು ನಡೆಯುತ್ತಿದೆ ಇದಕ್ಕೇಲ್ಲ ಕಾರಣ ಕಾನೂನಿನ ಭಯವಿಲ್ಲದೇ ಇರುವುದು ಎಂದರು.
ಕಾರ್ಯಕ್ರಮದಲ್ಲಿ ಬಂಟ್ವಾಳ ಶಾಸಕ ರಾಜೇಶ್ ನ್ಯಾಕ್ ಉಳಿಪಾಡಿಗುತ್ತು ಮಾತಾನಾಡಿ, 11 ವರ್ಷದಿಂದ ನಾನು ಈ ಕಾರ್ಯಕ್ರಮಕ್ಕೆ ಬರುತ್ತಿದ್ದೇನೆ. ಎಂದು ಸಂತಸ ವ್ಯಕ್ತಪಡಿಸಿದರು.
ಮೂಡಬಿದ್ರೆ ಆಳ್ವಾಸ್ಎಜುಕೇಶನ್ ಫೌಂಡೇಶನ್ ಅಧ್ಯಕ್ಷ ಡಾ. ಮೋಹನ್ ಆಳ್ವ ಮಾತಾನಾಡಿ, ಹಿಂದು ಆಗಿ ಹುಟ್ಟುವ ಭಾಗ್ಯವನ್ನು ದೇವರು ಕಲ್ಪಿಸಿಕೊಟ್ಟಿದ್ದಾರೆ. ವಿದೇಶಗಳಲ್ಲಿ ನೆಲೆಸುವ ಅವಕಾಶವನ್ನು ದೇವರು ಕೊಟ್ಟರು ಈ ತುಳುನಾಡನ್ನು ಬಿಟ್ಟು ಹೋಗುವ ಮನಸ್ಸು ನನಗಿರಲ್ಲಿಲ್ಲ, ಹಲವಾರು ಸಾಮಾಜ ಮುಖಿ ಕಾರ್ಯಗಳನ್ನು ಮಾಡುವ ಅವಕಾಶವನ್ನು ಗುರುಹಿರಿಯರು ಕಲ್ಪಿಸಿಕೊಟ್ಟಿದ್ದಾರೆ ಎಂದರು.
ಸಂಗೀತ ನಿರ್ದೇಶಕರಾದ ಶಂಕರ್ ಶಾನುಬೋಗ ಮಾತಾನಾಡಿ, ಹಿಂದುಗಳ ಮೇಲೆ ತುಂಬಾನೆ ಕೆಟ್ಟ ದೃಷ್ಠಿ ಬೀಳುತ್ತಿದೆ. ಪ್ರತಿ ಕಟ್ಟ ಶಕ್ತಿಗಳ ವಿರುದ್ದ ದತ್ತಾತ್ರೇಯ ಸ್ವಾಮಿ ನಿಂತು, ಹಿಂದು ಧರ್ಮವನ್ನು ಉಳಿಸಲಿ ಎಂದರು.
ಶಶಿಕ್ಯಾಟರಿಂಗ್ ಸರ್ವಿಸಸ್ ಆಡಳಿತ ನಿರ್ದೇಶಕ ಶಶಿಧರ ಬಿ. ಶೆಟ್ಟಿ ಬರೋಡ ಮಾತಾನಾಡಿ, ಸ್ವಾಮೀಜಿಯವರ ಪ್ರತಿ ಮಾತಿನಲ್ಲೂ ಒಂದು ಅರ್ಥವಿರುತ್ತದೆ ಈ ಬಗ್ಗೆ ನನಗೆ ಅನುಭವವಾಗಿದೆ ಎಂದು ಹೇಳಿದರು.
ಇನ್ನೂ ಈ ಕಾರ್ಯಕ್ರಮದಲ್ಲಿ, ಸಾಧ್ಯ ಮಾತಾನಂದಮಯಿ, ಮುಂಬಯಿ ಹೈಟೆಕ್ ಇಲೆಕ್ಟಿಫಿಕೇಶನ್ ಇಂಜಿನಿಯರಿAಗ್ ಆಡಳಿತನಿರ್ದೇಶಕ ರವಿನಾಥ್ ವಿ. ಶೆಟ್ಟಿ ಅಂಕೇಶ್ವರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಭೇಟಿ ನೀಡಿ ದೇವಿ ಮೂಕಾಂಬಿಕಾ…
ಮಳೆಗಾಲ ಆರಂಭವಾಗುತ್ತಿದ್ದಂತೆ ಸೇತುವೆಯೊಂದು ಕುಸಿದು ಬಿದ್ದ ಪರಿಣಾಮ ಹಲವು ಗ್ರಾಮಗಳ ಸಂಪರ್ಕದ ಕೊಂಡಿ ಕಳಚಿ ಬಿದ್ದು, ಜನರು ದ್ವೀಪದಂತೆ, ಹಳ್ಳಿಯೊಳಗೆ…
ಜ್ವರದಿಂದ ಬಳಲುತ್ತಿದ್ದ ಬಾಲಕಿಯೊರ್ವಳು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ಘಟನೆ ಬಂಟ್ವಾಳ ತಾಲೂಕಿನ ಅಲ್ಲಿಪಾದೆ ಎಂಬಲ್ಲಿ ನಡೆದಿದೆ. ಅಲ್ಲಿಪಾದೆ ಅನೇಜ…
ಬಿಸಿರೋಡಿನ ಪ್ರಸಿದ್ದ ಕ್ಯಾಂಟೀನ್ ಒಂದರಲ್ಲಿ ಅಡುಗೆ ಅನಿಲ ಸೋರಿಕೆಯಾಗಿ ಸ್ವಲ್ಪದರಲ್ಲಿ ದೊಡ್ಡ ದುರಂತವೊಂದು ತಪ್ಪಿದೆ. ಬಿಸಿರೋಡಿನ ಮಿನಿ ವಿಧಾನ ಸೌಧದ…
ಬೇಕಲ ಕೋಟೆ ಸಮೀಪದ ಪಳ್ಳಿಕರೆ ಕಡಲತೀರದಲ್ಲಿ ಭಾನುವಾರ ಸಂಜೆ ಸಂಭವಿಸಿದ ದುರ್ಘಟನೆಯಲ್ಲಿ ಇಬ್ಬರು ಕಾಲೇಜು ವಿದ್ಯಾರ್ಥಿಗಳು ಸಮುದ್ರದಲ್ಲಿ ಕೊಚ್ಚಿಹೋಗಿದ್ದು, ಅವರಿಗಾಗಿ…
ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಪಿಕಪ್ ಪಲ್ಟಿ ಹೊಡೆದ ಘಟನೆ ಸುಬ್ರಹ್ಮಣ್ಯ ಸಮೀಪದ ಕುಲ್ಕುಂದ ಎಂಬಲ್ಲಿ ನಡೆದಿದೆ. ರಾತ್ರಿ ವೇಳೆ…