ದಕ್ಷಿಣ ಕನ್ನಡ : ಮಂಗಳೂರಿನಲ್ಲಿ 2019ರ ಆಗಸ್ಟ್ 6ರಂದು ದೇಶ ಕಂಡು ಕೇಳದೆ ಭೀಕರ ತ್ಯಾಜ್ಯ ದುರಂತದಲ್ಲಿ ಸರ್ವಸ್ವವನ್ನು ಕಳೆದುಕೊಂಡ ಸಂತ್ರಸ್ತರಿಗೆ ಪೂರ್ಣ ಪ್ರಮಾಣದ ಪರಿಹಾರ ಇನ್ನೂ ಕೂಡ ಮರೀಚಿಕೆಯಾಗಿ ಉಳಿದಿದೆ.

ಘಟನೆ ಸಂಭವಿಸಿ 48 ತಿಂಗಳುಗಳ ಕಳೆದಿದ್ದು ಅಂದು ಜನಪ್ರತಿನಿಧಿಗಳು ಅಧಿಕಾರಿಗಳು ಬಂದು ಮೂರು ತಿಂಗಳ ಒಳಗಾಗಿ ಪೂರ್ಣಕಾಲಿಕ ಪರಿಹಾರ ನೀಡುವ ಭರವಸೆಯನ್ನು ನೀಡಿದ್ದರು ಆದರೆ ಅದು ಇಂದಿಗೂ ಈಡೇರದೆ ಇರುವುದು ವಿಪರ್ಯಾಸ.
ಅಂದು ಭರವಸೆ ನೀಡಿದ ಜನಪ್ರತಿನಿಧಿಗಳು ಕೈ ಚೆಲ್ಲಿ ಕುಳಿತಿದ್ದಾರೆ ಅಥವಾ ಪ್ರಕರಣವನ್ನು ಮರೆತಿದ್ದಾರೆ ಅಂದು ಅಧಿಕಾರದಲ್ಲಿದ್ದ ಅಧಿಕಾರಿಗಳು ಬೇರೆಡೆ ವರ್ಗಾವಣೆ ಹೊಂದಿದ್ದಾರೆ ಅಥವಾ ನಿವೃತ್ತರಾಗಿರಬಹುದು ಅಥವಾ ಕೆಲಸ ತೊರೆದಿರುವ ಸಾಧ್ಯತೆಯೂ ಇದೆ.
ಆದರೆ ಅಂದಿನ ಭರವಸೆಯನ್ನ ನಂಬಿದ ಸಂತ್ರಸ್ತರು ತನ್ನ ಸರ್ವಸ್ವನ್ನು ಕಳಕೊಂಡು ಸಂತ್ರಸ್ತರು ಮಂಕಾಗಿದ್ದಾರೆ ಕೆಲವರು ಇಹಲೋಕವನ್ನು ತ್ಯಜಿಸಿದ್ದಾರೆ ಇನ್ನು ಕೆಲವರು ಮಾನಸಿಕ ಖಿನ್ನತೆ ಒಳಗಾಗಿದ್ದಾರೆ.



ಅಂದು ಆಡಳಿತದಲ್ಲಿದ್ದ ಜನಪ್ರತಿನಿಧಿಗಳು ಇಂದು ಪ್ರತಿಪಕ್ಷದಲ್ಲಿ ಕುಳಿತಿದ್ದಾರೆ, ಅಂದು ಪ್ರತಿಪಕ್ಷದಲ್ಲಿ ಇದ್ದವರು ಇಂದು ಆಡಳಿತ ನಡೆಸುತ್ತಿದ್ದಾರೆ. ಆದರೂ ಸಂತ್ರಸ್ತರ ಸಮಸ್ಯೆ ಬಗೆ ಹರಿದಿಲ್ಲ. ಅಂದು ಮಂದಾರ ತ್ಯಾಜ್ಯ ದುರಂತ ಸ್ಥಳಕ್ಕೆ ಭೇಟಿ ನೀಡಿದ್ದ ಮತ್ತು ಸಂತ್ರಸ್ತರಿಗೆ ಪರಿಹಾರಕ್ಕೆ ಒತ್ತಾಯಿಸಿದ್ದ ಸಿದ್ದರಾಮಯ್ಯ ಅವರು ಇಂದು ರಾಜ್ಯದ ಮುಖ್ಯಮಂತ್ರಿ ಆಗಿದ್ದಾರೆ, ಮಾನ್ಯ ಉಚ್ಚ ನ್ಯಾಯಾಲಯದ ಆದೇಶದಂತೆ ಸಂತ್ರಸ್ತರಿಗೆ ಮಧ್ಯಂತರ ಪರಿಹಾರ ಮತ್ತು ಕೃಷಿ ಪರಿಹಾರ ದೊರಕಿರುತ್ತದೆ. ಪೂರ್ಣ ಪ್ರಮಾಣದ ಪರಿಹಾರಕ್ಕಾಗಿ ಸಂತ್ರಸ್ತರು ಕಾಯುತ್ತಿದ್ದಾರೆ.
ಧಾರ್ಮಿಕ ನಂಬಿಕೆಗಳು ತ್ಯಾಜ್ಯದ ಒಳಗೆ ಹುದುಗಿ ಹೋಗಿವೆ, ದೈವಸ್ಥಾನ ನಾಗಬನ ಕಣ್ಮರೆಯಾಗಿದೆ, ಅದು ಮರು ಸ್ಥಾಪಿಸಿಕೊಡುತ್ತೇವೆ ಎಂದು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಭರವಸೆ ನೀಡಿದ್ದರು, ಅದಕ್ಕೆ ಸಂಬಂಧಪಟ್ಟವರು ಪರಿಹಾರವನ್ನು ಪಡೆದುಕೊಂಡಿಲ್ಲ, ಈಗ ಎಷ್ಟು ಬಾರಿ ಕಚೇರಿಗೆ ಅಲೆದಾಡಿದರು, ಮನವಿ ನೀಡಿದ್ರು ಸ್ಪಂದಿಸುತ್ತಿಲ್ಲ.
ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಂಪರ್ಕಕ್ಕಾಗಿ ಅಲೆದು ಅಲೆದು ಆರೋಗ್ಯವೇ ಹಾಳಾಗಿದ್ದೇ ವಿನಹ ಯಾವುದೇ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಸಂತ್ರಸ್ತ ಡಾಕ್ಟರ್ ಮಂದಾರ ರಾಜೇಶ್ ಭಟ್.





