ಯಗಟಿ ಕೆರೆ ಬಳಿ ಮೃತದೇಹ ಪತ್ತೆ ಪ್ರಕರಣಕ್ಕೆ ಸಂಬAಧಿಸಿದ0ತೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು ಪ್ರಿಯಕರನ ಜೊತೆ ಸೇರಲು ಪತ್ನಿಯೇ ತನ್ನ ಗಂಡನನ್ನು ಹತ್ಯೆ ಮಾಡಿರುವ ಸತ್ಯ ಪೊಲೀಸರ ತನಿಖೆಯಿಂದ ಹೊರಬಿದ್ದಿದೆ.

ಈ ಘಟನೆಯು ಕಡೂರು ತಾಲೂಕಿನ ಹನುಮನಹಳ್ಳಿಯಲ್ಲಿ ನಡೆದಿದ್ದು, ಪತ್ನಿಯ ನೀಚತನದಿಂದಾಗಿ ಪತಿ ನವೀನ್ ಕೊಲೆಯಾಗಿದೆ.
ನವೀನ್ ಪತ್ನಿ ಪಾವನ ಸಂಜಯ್ ಎಂಬಾತನನ್ನು ಪದೇ ಪದೇ ಭೇಟಿಯಾಗುತ್ತಿದ್ದಳು. ಆದರೆ ಇವರ ಮೋಜಿನಾಟಕ್ಕೆ ನವೀನ್ ಅಡ್ಡವಾಗಿದ್ದನು. ಆದರಿಂದ ಈ ಖತರ್ನಾಕ್ ಲೇಡಿ, ಪತಿಗೆ ಊಟದಲ್ಲಿ ನಿದ್ದೆ ಮಾತ್ರೆಗಳನ್ನು ಹಾಕಿ ಜ್ಞಾನ ತಪ್ಪಿಸಿದ್ದಾಳೆ.
ಬಳಿಕ ಪ್ರಿಯಕರನ ಜೊತೆ ಸೇರಿ ಪ್ರಜ್ಞೆ ತಪ್ಪಿದ ಪತಿಯನ್ನು ಬೈಕ್ನಲ್ಲಿ ತಂದು ಯಗಟಿ ಕೆರೆ ಬಳಿ ಎಸೆದು ಹೋಗಿದ್ದಾಳೆ.
ಆಗಸ್ಟ್ 6 ರಂದು ಯಗಟಿ ಕೆರೆ ಬಳಿ ನವೀನ್ ಮೃತದೇಹ ಪತ್ತೆಯಾಗಿತ್ತು. ಈ ವೇಳೆ ಇದು ಸಹಜ ಸಾವಲ್ಲ, ಕೊಲೆ ಎಂದು ಪೋಷಕರು ಯಗಟಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಬಗ್ಗೆ ತನಿಖೆ ಕೈಗೊಂಡಿದ್ದ ಪೊಲೀಸರು ಕೊಲೆ ಮಾಡಿರುವುದು ಪತ್ನಿಯೇ ಅನ್ನೋದನ್ನ ಪತ್ತೆ ಹಚ್ಚಿದ್ದಾರೆ.
ಅಲ್ಲದೇ ಪೊಲೀಸರ ತನಿಖೆಯಲ್ಲಿ ಆರೋಪಿಗಳು ಸತ್ಯ ಬಾಯಿ ಬಿಟ್ಟಿದ್ದಾರೆ.



