ಬ0ಟರ ಸಂಘ ಪುತ್ತಿಗೆ ನೇತೃತ್ವದಲ್ಲಿ ‘ಆಟಿದಕೂಟ’ ಕಾರ್ಯಕ್ರಮವು ಪುತ್ತಿಗೆ ಎಜೆಬಿ ಶಾಲಾ ವಠಾರದಲ್ಲಿ ಅದ್ದೂರಿಯಾಗಿ ನಡೆದಿದೆ.

ಕಾರ್ಯಕ್ರಮದಲ್ಲಿ ಹೇರಂಬ ಇಂಡಸ್ಟ್ರೀಸ್ ಮುಂಬಯಿ ಇದರ ಅಧ್ಯಕ್ಷ ಸದಾಶಿವ ಶೆಟ್ಟಿ ಕನ್ಯಾನ ಅವರು ಮಾತಾನಾಡಿ, ತುಳುನಾಡಿನ ಸಾಂಸ್ಕೃತಿಕತೆಯನ್ನು ಈ ಆಟಿದ ಕೂಟದಲ್ಲಿ ಅನಾವರಣ ಮಾಡಿದ್ದು, ತುಂಬಾ ಸಂತಸದ ವಿಚಾರವಾಗಿದೆ. ಬಂಟ ಸಮಾಜವನ್ನು ಒಟ್ಟುಗೂಡಿಸುವ ನಿಟ್ಟಿನಲ್ಲಿ ಬಂಟರ ಸಂಘ ಬಹುಮುಖ್ಯವಾಗಿದೆ. ಎಂದರು. ಇದೇ ವೇಳೆ ಬಂಟ ಸಮುದಾಯದ ಸಾಧಕರನ್ನು ಸನ್ಮಾಸಿ ಗೌರವಿಸಲಾಯಿತು.

ಬಳಿಕ ಗ್ರಾಮದ ಆಜಲು ದೈವನರ್ತಕರಿಂದ ‘ಆಟಿಕಳಂಜ’ ನಡೆದಿದ್ದು, ಇದು ಕಾರ್ಯಕ್ರಮದ ಸೊಗಡನ್ನು ಮತ್ತಷ್ಟು ಹೆಚ್ಚಿಸಿದೆ. ಇನ್ನೂ ಈ ಕಾರ್ಯಕ್ರಮದಲ್ಲಿ ಪುಟಾಣಿ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಮೇಳೈಸಿವೆ.



