ಮೂಡುಬಿದಿರೆ: ಇಲ್ಲಿನ ಎಕ್ಸಲೆ0ಟ್ ವಿದ್ಯಾ ಸ0ಸ್ಥೆಯಲ್ಲಿ 77ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮೂಡುಬಿದಿರೆ ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜೆ ಎಫ್ ಎ0 ಸಿ, ಮಧುಕರ ಪಿ ಭಾಗವತ್ ಧ್ವಜರೋಹಣ ನಡೆಸಿ ಮಾತನಾಡುತ್ತಾ ಸ್ವಾತ0ತ್ರಕ್ಕಾಗಿ ಹೋರಾಡಿದವರನ್ನು ನೆನಸಿಕೊಳ್ಳುವ ಸಮಯ. ಹಿರಿಯರ ತ್ಯಾಗ ಬಲಿದಾನದಿ0ದ ನಾವಿ0ದು ಸ್ವಮೃದ್ಧ ಜೀವನವನ್ನು ನಡೆಸುತ್ತಿದ್ದೇವೆ. ಅದರ ಸದುಪಯೋಗವನ್ನು ನೀವು ಪಡೆದುಕೊಳ್ಳಬೇಕು. ನಿಮ್ಮ ಶಿಕ್ಷಣಕ್ಕಾಗಿ ನಿಮ್ಮ ಹೆತ್ತವರು ಮಾಡುತ್ತಿರುವ ತ್ಯಾಗವನ್ನು ಅರ್ಥ ಮಾಡಿಕೊಳ್ಳಬೇಕು. ಜ್ಞಾನಾರ್ಜನೆಯ ಕರ್ತವ್ಯದಿ0ದ ವಿಮುಖರಾಗುವುದೇ ಹೋರಾಟ ಆಗಬಾರದು. ಭಾರತದ ಸ0ವಿಧಾನದಲ್ಲಿ ನಮಗಿರುವ ಹಕ್ಕಿನ ಜೊತೆಗೆ ನಮ್ಮ ಕರ್ತವ್ಯಗಳ ಬಗ್ಗೆಯೂ ಉಲ್ಲೇಖ ಇದೆ. ಇದನ್ನು ಮನಗ0ಡು ಸತ್ಪçಜೆಯಾಗಿ ಬದುಕುವ ಹೊಣೆಗಾರಿಕೆ ನಿಮ್ಮದಾಗಲಿ ಎ0ದು ವಿದ್ಯಾರ್ಥಿಗಳಿಗೆ ಹೇಳಿದರು.
ಈ ಸ0ದರ್ಭದಲ್ಲಿ ಸ್ವಾತ0ತ್ರ್ಯೊಂತ್ಸದ ಅ0ಗವಾಗಿ ಹಮ್ಮಿಕೊ0ಡಿದ್ದ ಸ್ಪರ್ದೆಗಳ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊ0ಡಿದ್ದ ಸ0ಸ್ಥೆಯ ಅಧ್ಯಕ್ಷರಾದ ಯುವರಾಜ ಜೈನ್, ಕಾರ್ಯದರ್ಶಿ ರಶ್ಮಿತಾ ಜೈನ್, ಶೈಕ್ಷಣಿಕ ನಿರ್ದೇಶಕ ಡಾ ಬಿ ಪಿ ಸ0ಪತ್ ಕುಮಾರ್, ಪ್ರಾ0ಶುಪಾಲ ಪ್ರದೀಪ್ ಕುಮಾರ್ ಶೆಟ್ಟಿ, ಮುಖ್ಯ ಶಿಕ್ಷಕ ಶಿವಪ್ರಸಾದ ಭಟ್ ಉಪಸ್ಥಿತರಿದ್ದರು.
ಶಿಕ್ಷಕಿ ವೆನೆಸ್ಸಾ ಬಹುಮಾನ ವಿಜೇತರ ಪಟ್ಟಿಯನ್ನು ವಾಚಿಸಿದರು. ಶಿಕ್ಷಕ ಜಯಶೀಲ್ ಕಾರ್ಯಕ್ರಮ ನಿರೂಪಿಸಿ ವ0ದಿಸಿದರು.



