ಕಿನ್ನಿಗೋಳಿ : ನವಜ್ಯೋತಿ ಮಹಿಳಾ ಮಂಡಲ ಪಂಜ ಕೊಯಿಕುಡೆ ಇದರ ಆಶ್ರಯದಲ್ಲಿ ನವಜ್ಯೋತಿ ಮಹಿಳಾ ಮಂಡಲದ ವೇದಿಕೆಯಲ್ಲಿ ಆಟಿಡೊಂಜಿ ದಿನ ಕಾರ್ಯಕ್ರಮ ನಡೆಯಿತು. ಮುಖ್ಯ ಅತಿಥಿಯಾಗಿ ಶುಭ ರೈ ಅವರು ಚೆನ್ನಮನಿ ಆಡುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಂಡಲದ ಗೌರವಧ್ಯಕ್ಷರಾದ ಶೈಲಾ ಎನ್ ಶೆಟ್ಟಿ ಕಾರ್ಯದರ್ಶಿಯಾದ ನಿಶ್ವಿತ ದೇವಾಡಿಗ ಕೋಶಾಧಿಕಾರಿಯಾದ ತಾರಾ ಶೆಟ್ಟಿ ಮಂಡಲ ಹಿರಿಯ ಸದಸ್ಯರಾದ ಶಂಕರಿ ಶೆಟ್ಟಿ ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷರಾದ ಅಮಿತಾ ದೇವಾಡಿಗ ಸ್ವಾಗತಿಸಿದರು. ಕುಶಲ ಶೇಖರ್ ಕಾರ್ಯಕ್ರಮ ನಿರೂಪಿಸಿದರು ನಿಶ್ವಿತಾ ದೇವಾಡಿಗ ಧನ್ಯವಾದ ಸಲ್ಲಿಸಿದರು.




