ಕನ್ನಡ ಕಿರುತೆರೆಯ ಅಗ್ನಿ ಪರೀಕ್ಷೆಯ ದಿನ ಅಂದ್ರೆ, ಗುರುವಾರ. ಈ ವಾರ ಜನ ಯಾರ ಕೈ ಹಿಡಿದ್ರು?ಯಾರ ಕೈನ ಬಿಟರು? ಯಾರು ರೇಸ್ನಿಂದ ಆಚೆ ಉಳಿದಿದ್ದಾರೆ? ಯಾರು ರೇಸ್ನಲ್ಲಿದ್ದಾರೆ ಇದ್ದೆಲ್ಲದಕ್ಕೂ ಉತ್ತರ ಇಲ್ಲಿದೆ.
ಮೊದಲ ಸ್ಥಾನದಲ್ಲಿ ಪುಟ್ಟಕ್ಕನ ಮಕ್ಕಳು ಎಂದಿನಂತೆ ಡಬಲ್ ಡಿನಿಟ್ 11.3 ಟಿವಿಆರ್ ಪಡೆದುಕೊಂಡು ರಾರಾಜಿಸುತ್ತಾ ಇದೆ. ಇನ್ನೂ ಅಚ್ಚರಿಯಂತೆ ಹಾಗೂ ಅಂದುಕೊಂಡತೆ, ಸೀತಾ ರಾಮ ಗಟ್ಟಿಮೇಳವನ್ನ ಹಿಂದಿಕ್ಕಿ ಎರಡನೇ ಸ್ಥಾನಕ್ಕೆ ಏರಿ ಬೀಗಿದೆ. ಹೌದು ಇಷ್ಟು ದಿನ ಗಟ್ಟಿಮೇಳ ಎರಡನೇ ಸ್ಥಾನವನ್ನ ಯಾರಿಗೂ ಬಿಟ್ಟುಕೊಡದೆ ತನ್ನ ಪ್ರಬುದ್ಧತೆ ಮೆರೆದಿತ್ತು. ಆದ್ರೆ ಸೀತಾರಾಮ ಅದನ್ನ ಬಂದ ನಾಲ್ಕೇ ವಾರಕ್ಕೆ ಧೂಳಿಪಟ ಮಾಡಿದೆ. ಸೀತಾ ರಾಮನಿಗೆ ವೀಕ್ಷಕರು 8.9ಟಿವಿಆರ್ ನೀಡಿದ್ರೆ, ಗಟ್ಟಿಮೇಳಾಗೆ 8.8ಕೊಟ್ಟಿದ್ದಾರೆ.
ಇನ್ನೂ ಶ್ರೀರಸ್ತು ಶುಭಮಸ್ತು ಮದುವೆಯ ಎಪಿಸೋಡ್ಸ್ಗಳಿಗೆ ವೀಕ್ಷಕರು ಶರಣಾಗಿದ್ದಾರೆ. ಈ ಬಾರಿ ನಾಲ್ಕನೆ ಸ್ಥಾನದಲ್ಲಿ 7.9 ಟಿವಿಆರ್ ಪಡೆದು ಮಾಧವ-ತುಳಸಿ ನಂಟು ಬಿಗಿಯಾಗಿದೆ. ಇನ್ನೂ ಐದನೇ ಸ್ಥಾನದಲ್ಲಿ 7.6 ಟಿವಿಆರ್ ಪಡೆದು ಗೌತಮ್ -ಭೂಮಿಕ ಎಲ್ಲರನ್ನ ರಂಜಿಸ್ತಾ ಇದ್ದಾರೆ.ಈ ಬಾರಿ ಟಾಪ್ ಐದು ಸ್ಥಾನವನ್ನ ಅಲಂಕರಿಸಿದ್ದು ಜೀವಾಹಿನಿಯ ಕತೆಗಳೇ.
ಕಲರ್ಸ್ ವಾಹಿನಿಯಲ್ಲಿ ಸದ್ಯ ಲಕ್ಷ್ಮೀ ಬಾರಮ್ಮ ಕತೆಗೆ ಜನ ಒತ್ತು ಕೊಡ್ತಿದ್ದಾರೆ. 6.8 ಟಿವಿಆರ್ ಪಡೆದುಕೊಂಡು ಎಲ್ಲರನ್ನ ರಂಜಿಸ್ತಾ ಬಂದಿದೆ. ಇನ್ನೂ ರಾಮಾಚಾರಿ ವಾರದಿಂದ ವಾರಕ್ಕೆ ಅಗ್ನಿಪರೀಕ್ಷೆ ಎದುರಿಸ್ತಾ ಇದೆ. ಇತ್ತ ಸೈಕಲ್ ಗ್ಯಾಪ್ನಲ್ಲಿ ಗೀತಾ 5.9 ಟಿವಿಆರ್ ಪಡೆದು ಭಾಗ್ಯಲಕ್ಷ್ಮೀಯನ್ನೆ ಹಿಂದಿಕ್ಕಿದೆ. ಒಟ್ಟಿನಲ್ಲಿ ಟಿಆರ್ಪಿ ಲಿಸ್ಟ್ ಹೊರ ಬಿದ್ದಿದ್ದು, ಈ ವಾರದ ಸೀರಿಯಲ್ಗಳ ಲೆಕ್ಕಾಚಾರಕ್ಕೆ ತೆರೆ ಬಿದ್ದಿದೆ.
ಕನ್ನಡ ಜಾನಪದ ಪರಿಷತ್ ಉಡುಪಿ ಜಿಲ್ಲಾಧ್ಯಕ್ಷ, ಜಾನಪದ ಕಲಾವಿದ ಡಾ.ಗಣೇಶ್ ಗಂಗೊಳ್ಳಿ ಅವರು ಇಂದು ನಿಧನರಾಗಿದ್ದಾರೆ. ಕಳೆದ ರಾತ್ರಿ ಸಮಾರಂಭವೊಂದರಲ್ಲಿ…
ಕೆಎಸ್ಆರ್ಟಿಸಿ ಬಸ್ ಡಿಕ್ಕಿಯಾಗಿ ಮಹಿಳೆಯೋರ್ವರು ಸ್ಥಳದಲ್ಲೇ ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ತೆಕ್ಕಟ್ಟೆ ಪ್ರೆಸಿಡೆಂಟ್ ಕನ್ವೆನ್ಷನ್ ಹಾಲ್ ಮುಂಭಾಗ…
ಕನ್ನಡ ಚಿತ್ರರಂಗದ ಖ್ಯಾತ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಕುಟುಂಬ ಸಮೇತರಾಗಿ ಆಗಮಿಸಿದ್ದಾರೆ. ರಿಷಬ್…
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು -ಸುಳ್ಯ ರಾಷ್ಟ್ರೀಯ ಹೆದ್ದಾರಿಯ ಕೌಡಿಚ್ಚಾರು ಎಂಬಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಪಿಕಪ್ ವಾಹನ ಮೋರಿಗೆ…
ಸರ್ಕಾರಿ ಬಸ್ ಮತ್ತು ಕಾರಿನ ಮಧ್ಯೆ ಡಿಕ್ಕಿ ಸಂಭವಿಸಿ ಕಾರಿನಲ್ಲಿದ್ದ ಮಹಿಳೆಯೊಬ್ಬರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಘಟನೆ ದಕ್ಷಿಣ…
ವಸತಿಗೃಹವೊಂದರ ಮುಂಭಾಗದಲ್ಲಿ ನಿಲ್ಲಿಸಲಾಗಿದ್ದ ಬೈಕ್ ಕಳವು ಮಾಡಿದ ಆರೋಪಿಗಳಿಬ್ಬರನ್ನು ಬಂಟ್ವಾಳ ನಗರ ಠಾಣಾ ಪೋಲೀಸರು ಬಂಧಿಸಿದ್ದಾರೆ. ಬಂಟ್ವಾಳ ಸಜೀಪ ಮುನ್ನೂರು…