ಕನ್ನಡ ಕಿರುತೆರೆಯ ಅಗ್ನಿ ಪರೀಕ್ಷೆಯ ದಿನ ಅಂದ್ರೆ, ಗುರುವಾರ. ಈ ವಾರ ಜನ ಯಾರ ಕೈ ಹಿಡಿದ್ರು?ಯಾರ ಕೈನ ಬಿಟರು? ಯಾರು ರೇಸ್ನಿಂದ ಆಚೆ ಉಳಿದಿದ್ದಾರೆ? ಯಾರು ರೇಸ್ನಲ್ಲಿದ್ದಾರೆ ಇದ್ದೆಲ್ಲದಕ್ಕೂ ಉತ್ತರ ಇಲ್ಲಿದೆ.
ಮೊದಲ ಸ್ಥಾನದಲ್ಲಿ ಪುಟ್ಟಕ್ಕನ ಮಕ್ಕಳು ಎಂದಿನಂತೆ ಡಬಲ್ ಡಿನಿಟ್ 11.3 ಟಿವಿಆರ್ ಪಡೆದುಕೊಂಡು ರಾರಾಜಿಸುತ್ತಾ ಇದೆ. ಇನ್ನೂ ಅಚ್ಚರಿಯಂತೆ ಹಾಗೂ ಅಂದುಕೊಂಡತೆ, ಸೀತಾ ರಾಮ ಗಟ್ಟಿಮೇಳವನ್ನ ಹಿಂದಿಕ್ಕಿ ಎರಡನೇ ಸ್ಥಾನಕ್ಕೆ ಏರಿ ಬೀಗಿದೆ. ಹೌದು ಇಷ್ಟು ದಿನ ಗಟ್ಟಿಮೇಳ ಎರಡನೇ ಸ್ಥಾನವನ್ನ ಯಾರಿಗೂ ಬಿಟ್ಟುಕೊಡದೆ ತನ್ನ ಪ್ರಬುದ್ಧತೆ ಮೆರೆದಿತ್ತು. ಆದ್ರೆ ಸೀತಾರಾಮ ಅದನ್ನ ಬಂದ ನಾಲ್ಕೇ ವಾರಕ್ಕೆ ಧೂಳಿಪಟ ಮಾಡಿದೆ. ಸೀತಾ ರಾಮನಿಗೆ ವೀಕ್ಷಕರು 8.9ಟಿವಿಆರ್ ನೀಡಿದ್ರೆ, ಗಟ್ಟಿಮೇಳಾಗೆ 8.8ಕೊಟ್ಟಿದ್ದಾರೆ.
ಇನ್ನೂ ಶ್ರೀರಸ್ತು ಶುಭಮಸ್ತು ಮದುವೆಯ ಎಪಿಸೋಡ್ಸ್ಗಳಿಗೆ ವೀಕ್ಷಕರು ಶರಣಾಗಿದ್ದಾರೆ. ಈ ಬಾರಿ ನಾಲ್ಕನೆ ಸ್ಥಾನದಲ್ಲಿ 7.9 ಟಿವಿಆರ್ ಪಡೆದು ಮಾಧವ-ತುಳಸಿ ನಂಟು ಬಿಗಿಯಾಗಿದೆ. ಇನ್ನೂ ಐದನೇ ಸ್ಥಾನದಲ್ಲಿ 7.6 ಟಿವಿಆರ್ ಪಡೆದು ಗೌತಮ್ -ಭೂಮಿಕ ಎಲ್ಲರನ್ನ ರಂಜಿಸ್ತಾ ಇದ್ದಾರೆ.ಈ ಬಾರಿ ಟಾಪ್ ಐದು ಸ್ಥಾನವನ್ನ ಅಲಂಕರಿಸಿದ್ದು ಜೀವಾಹಿನಿಯ ಕತೆಗಳೇ.
ಕಲರ್ಸ್ ವಾಹಿನಿಯಲ್ಲಿ ಸದ್ಯ ಲಕ್ಷ್ಮೀ ಬಾರಮ್ಮ ಕತೆಗೆ ಜನ ಒತ್ತು ಕೊಡ್ತಿದ್ದಾರೆ. 6.8 ಟಿವಿಆರ್ ಪಡೆದುಕೊಂಡು ಎಲ್ಲರನ್ನ ರಂಜಿಸ್ತಾ ಬಂದಿದೆ. ಇನ್ನೂ ರಾಮಾಚಾರಿ ವಾರದಿಂದ ವಾರಕ್ಕೆ ಅಗ್ನಿಪರೀಕ್ಷೆ ಎದುರಿಸ್ತಾ ಇದೆ. ಇತ್ತ ಸೈಕಲ್ ಗ್ಯಾಪ್ನಲ್ಲಿ ಗೀತಾ 5.9 ಟಿವಿಆರ್ ಪಡೆದು ಭಾಗ್ಯಲಕ್ಷ್ಮೀಯನ್ನೆ ಹಿಂದಿಕ್ಕಿದೆ. ಒಟ್ಟಿನಲ್ಲಿ ಟಿಆರ್ಪಿ ಲಿಸ್ಟ್ ಹೊರ ಬಿದ್ದಿದ್ದು, ಈ ವಾರದ ಸೀರಿಯಲ್ಗಳ ಲೆಕ್ಕಾಚಾರಕ್ಕೆ ತೆರೆ ಬಿದ್ದಿದೆ.
ಬಂಟ್ವಾಳ ತಾಲೂಕಿನ ತೆಂಕಬೆಳ್ಳೂರು ಗ್ರಾಮದ ಕಾಗುಡ್ಡೆ ಎಂಬಲ್ಲಿ ರಾತ್ರಿ ಸುರಿದ ಭಾರೀ ಮಳೆ ಹಾಗೂ ಬಿರುಗಾಳಿಯ ಅಬ್ಬರಕ್ಕೆ ಮನೆಯ ಚಾವಣಿ…
ಬಂಟ್ವಾಳ ತಾಲೂಕಿನ ಸಜೀಪಮೂಡ ಗ್ರಾಮದ ಕೊಳಕೆ ಎಂಬಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಸಂಭವಿಸಿದಂತಹ ಅವಘಡದಲ್ಲಿ ಮನೆಯ ಪೀಠೋಪಕರಣಗಳು ಹಾಗೂ ದಿನನಿತ್ಯ…
ವಾಷಿಂಗ್ಟನ್ ಕರ್ನಾಟಕದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಯು. ಟಿ. ಖಾದರ್ ಫರೀದ್ ಅವರ ಸಾರ್ವಜನಿಕ ಸೇವೆ…
ಫಿಫಾ ವಿಶ್ವಕಪ್ 2026ರ ಫೈನಲ್ ಹಾಗೂ ಸೆಮಿಫೈನಲ್ ಪಂದ್ಯಗಳ ವೇಳೆ ನಡೆದ ಗಲಾಟೆ ಮತ್ತು ನಿಯಮ ಉಲ್ಲಂಘನೆಗಳ ಹಿನ್ನೆಲೆಯಲ್ಲಿ, ಅರ್ಜೆಂಟೀನಾ…
'ನ್ಯೂಯಾರ್ಕ್ ಟೈಮ್ಸ್' ತನ್ನ ವರದಿಯಲ್ಲಿ 'ಪಾಕಿಸ್ತಾನಿ ಕಾಶ್ಮೀರ' ಎಂದು ಉಲ್ಲೇಖಿಸಿರುವುದಕ್ಕೆ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಅಮೆರಿಕದಲ್ಲಿರುವ ಭಾರತೀಯ ರಾಯಭಾರ…
ಚೀನಾ ಪಾಕಿಸ್ತಾನದ ಮೂಲಕ ಇರಾನ್ಗೆ 400 ರಾಕೆಟ್ ಲಾಂಚರ್ಗಳನ್ನು ಪೂರೈಸಿದೆ ಎಂಬ ವರದಿಗಳು ಜಾಗತಿಕ ಆತಂಕಕ್ಕೆ ಕಾರಣವಾಗಿವೆ. ಈ ಕುರಿತು…