ಮುಲ್ಕಿ: ” ಮೇರಾ ಮಿಟ್ಟಿ ಮೇರಾ ದೇಶ್ ” ಅಭಿಯಾನದ ಅಡಿಯಲ್ಲಿ ಜಿಲ್ಲಾ ಪ್ರಶಸ್ತಿ ಪುರಸ್ಕೃತ ಯುವತಿ ಮಂಡಲ (ರಿ) ಹಳೆಯಂಗಡಿ ಇವರ ವತಿಯಿಂದ ನೇಜಿ ನೆಡುವ ಕಾರ್ಯಕ್ರಮ ನಡೆಯಿತು.

ಜಿಲ್ಲಾ ಪ್ರಶಸ್ತಿ ವಿಜೇತ ಯುವತಿ ಮಂಡಲ ( ರಿ) ಹಳೆಯಂಗಡಿ ಇವರ ಆಶ್ರಯದಲ್ಲಿ ಶ್ರೀ ವಿದ್ಯಾ ವಿನಾಯಕ ಯುವಕ ಮಂಡಲ (ರಿ) ಹಳೆಯಂಗಡಿ ಇವರ ಸಹಕಾರದಲ್ಲಿ ಆದಿತ್ಯವಾರದಂದು ಅಪರಾಹ್ನ 3 ರಿಂದ ಕೋಡಿಹಿತ್ಲು ಗದ್ದೆ 10ನೇ ತೋಕೂರು ಇಲ್ಲಿ ಯುವತಿ ಮಂಡಲದ ಸದಸ್ಯರಿಂದ ‘ಮೇರಾ ಮಿಟ್ಟಿ ಮೇರಾ ದೇಶ್’ ಅಭಿಯಾನದ ಅಡಿಯಲ್ಲಿ ನೇಜಿ ನೆಡುವ ಕಾರ್ಯಕ್ರಮ ಜರಗಿತು.

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಲಕ್ಷ್ಮಣ್ ಕೋಟ್ಯಾನ್ ಇವರು ಇತ್ತೀಚೆಗೆ ಯುವಕ, ಯುವತಿಯರಲ್ಲಿ ಕೃಷಿ ಆಸಕ್ತಿ ಹೆಚ್ಚುತ್ತಿದ್ದು ಬಹಳ ಸಂತಸದ ವಿಷಯ. ಕೃಷಿಯನ್ನು ಉಳಿಸಿ ಬೆಳೆಸುವ ಮಹತ್ಕಾರ್ಯ ಮುಂದಿನ ದಿನಗಳಲ್ಲಿಯೂ ಕೂಡ ಹಿರಿಯರ ಮಾರ್ಗದರ್ಶನದಲ್ಲಿ ಯುವಕ ಯುವತಿಯರು ನಡೆಸಿಕೊಂಡು ಬರಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಯುವತಿ ಮಂಡಲ ಅಧ್ಯಕ್ಷರಾದ ರಶ್ವಿತಾ, ಪ್ರಧಾನ ಕಾರ್ಯದರ್ಶಿ ದಿವ್ಯಶ್ರೀ ಕೋಟ್ಯಾನ್ ಹಾಗೂ ಸದಸ್ಯರಾದ ಸುಶ್ಮಿತಾ, ಕಾತ್ಯಾಯಿನಿ, ನಿಶ್ಮಿತಾ, ಜಯಶ್ರೀ, ಪ್ರಣವಿ, ಧನ್ಯ, ಶ್ವೇತಾ, ಮೇಘನಾ ಮತ್ತು ನಿತ್ಯಾನಂದ, ಲೋಹಿತ್, ನೀಲೇಶ್ ಉಪಸ್ಥಿತರಿದ್ದರು.




