ಜನ ಮನದ ನಾಡಿ ಮಿಡಿತ

Advertisement

ಮಂಗಳೂರಿನಲ್ಲಿ ತಾರಕಕ್ಕೇರಿದ ಜೋಗಿ ಸಮುದಾಯ ಮತ್ತು ಜೋಗಿ ಮಠದ ಮಠಾಧೀಶರ ಸಮಸ್ಯೆ

ದಕ್ಷಿಣ ಕನ್ನಡ : ಮಂಗಳೂರಿನಲ್ಲಿ ಜೋಗಿ ಸಮುದಾಯ ಮತ್ತು ಜೋಗಿ ಮಠದ ಮಠಾಧೀಶರ ಸಮಸ್ಯೆ ತಾರಕಕ್ಕೇರುವ  ಎಲ್ಲ ಲಕ್ಷಣಗಳು ಇದೆ, ಇದಕ್ಕೆ ಪೂರಕ ಎಂಬಂತೆ ಜೋಗಿ ಮಠದ ಹಿತರಕ್ಷಣಾ ಸಮಿತಿ ಮುಖ್ಯಸ್ಥರು ಪತ್ರಿಕಾಗೋಷ್ಠಿ ನಡೆಸಿ ಮಠದ ಆವರಣದಲ್ಲಿ ಉಪವಾಸ ಸತ್ಯಾಗ್ರಹದ ಮುನ್ಸೂಚನೆಯನ್ನು ನೀಡಿದ್ದಾರೆ.


ಉತ್ತರ ಭಾರತದ ಯೋಗಿ ಪರಂಪರೆಗೆ  ಸಂಬಂಧವಿರುವ ಕದ್ರಿ ಜೋಗಿಮಠದ ಸಂಬಂಧ ಇಂದು ನಿನ್ನೆಯದಲ್ಲ, ಸಮಸ್ತ ಜೋಗಿ ಸಮುದಾಯದ ಶ್ರದ್ಧಾ ಕೇಂದ್ರವಾದ ಮಠದಲ್ಲಿ ಇತ್ತೀಚಿನ  ಬ್ರಹ್ಮಕಲಶೋತ್ಸವದ ಸಂದರ್ಭದಲ್ಲಿ ಮಠಾಧೀಶರು , ಶಿಷ್ಯರಿಗೆ ಮತ್ತು ಸಮಾಜಕ್ಕೆ ತಿಳಿಯದಂತೆ  ಜೋಗಿಮಠದ ಕಾಲಭೈರವ ದೇವರ ಮೂಲ ಮೂರ್ತಿಯನ್ನು ಹೊರಗಿಟ್ಟು ನೂತನ ಮೂರ್ತಿಯನ್ನು ಗರ್ಭಗುಡಿಯೊಳಗೆ ಪ್ರತಿಷ್ಠಾಪಿಸಿದ್ದಾರೆ ಎಂಬುದು ಸಮಾಜದ  ಆರೋಪ ಮತ್ತು ಪರಸ್ಪರ ಆರೋಪ ಪ್ರತ್ಯಾರೋಪಕ್ಕೆ ಕಾರಣ.


ಮಠದ ಆವರಣದಲ್ಲಿರುವ  ಕಾಲಭೈರವ ದೇವರ ಮೂರ್ತಿ ಬಹಳ ಕಾರಣಿಕವುಳ್ಳದ್ದು ಎಂಬುದು ಭಕ್ತರ ನಂಬಿಕೆ.  ಬ್ರಹ್ಮಕಲಶೋತ್ಸವದ ವೇಳೆ ಮಠಾಧೀಶ ರಾಜಯೋಗಿ ಶ್ರೀ ನಿರ್ಮಲನಾಥ ಮಹಾರಾಜರು ತಮ್ಮ ರಾಜಸ್ತಾನಿ ಭಕ್ತರೊಂದಿಗೆ ಸೇರಿಕೊಂಡು, ಜೋಗಿ ಸಮುದಾಯವನ್ನು ಕಡೆಗಣಿಸಿ ಸ್ವಇಚ್ಛೆಯಿಂದ ಹಳೆಯ ಮೂರ್ತಿಯನ್ನು ಬದಲಾಯಿಸಿ,  ರಾಜಸ್ತಾನಿ ಭಕ್ತರು ನೀಡಿರುವ ನೂತನ ಗ್ರಾನೈಟ್ ಕಾಲಭೈರವ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ.  ಇದು ಶಿಷ್ಯರಿಗೆ ತಿಳಿದು ಡಿಸಿ, ಪುರಾತತ್ವ ಇಲಾಖೆಗಳಿಗೆ ದೂರು ನೀಡಿ ಮೂಲ ಮೂರ್ತಿಯನ್ನು ಉಳಿಸುವ ಮತ್ತು ಪುನರ್ಪ್ರತಿಷ್ಠಾಪಿಸುವ ಪ್ರಯತ್ನ ಮಾಡಲಾಗಿದೆ.


 ಜೋಗಿಮಠದ ಹಿತರಕ್ಷಣಾ ಸಮಿತಿಯು ಪುರಾತತ್ವ ಇಲಾಖೆ ಮೂಲಕ ಕಾಲಭೈರವನ ಮೂಲ ಮೂರ್ತಿಯನ್ನು ಪುನರ್ ಪ್ರತಿಷ್ಠಾಪಿಸಲು ಜಿಲ್ಲಾಧಿಕಾರಿಯವರಿಗೆ ಮನವಿ ಮಾಡಿದೆ. ಅಲ್ಲದೆ ತನಿಖೆಗೆ ಆಗ್ರಹವನ್ನೂ ಮಾಡಲಾಗಿದೆ. ಆದರೆ ಮಠಾಧೀಶರು ನಮ್ಮ ಮನವಿಗೆ ಸೊಪ್ಪು ಹಾಕದೆ, ಡಿಸಿಯವರ ಆದೇಶಕ್ಕೂ ಕಿಮ್ಮತ್ತಿನ ಬೆಲೆ ನೀಡುತ್ತಿಲ್ಲ. ಇದೀಗ ಮಠದ ಶಿಷ್ಯ ಪರಂಪರೆ ಮಠಾಧೀಶರ ವಿರುದ್ಧವೇ ಸಿಡಿದೆದ್ದಿದ್ದು,  ಸಮಸ್ತ ಜೋಗಿಸಮುದಾಯು ಮಠದಲ್ಲಿ ಉಪವಾಸ ಸತ್ಯಾಗ್ರಹ ನಡೆಸಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Leave a Reply

Your email address will not be published. Required fields are marked *

ಉಡುಪಿ: ಜಾನಪದ ಕಲಾವಿದ ಡಾ. ಗಣೇಶ್ ಗಂಗೊಳ್ಳಿ ಇನ್ನಿಲ್ಲ….!

ಉಡುಪಿ: ಕೆಎಸ್‌ಆರ್‌ಟಿಸಿ ಬಸ್ ಡಿ*ಕ್ಕಿ ಹೊಡೆದು ಮಹಿಳೆ ಮೃ*ತ್ಯು….!

ಸುಬ್ರಹ್ಮಣ್ಯ: ಕನ್ನಡಚಿತ್ರ ನಟ ನಿರ್ದೇಶಕ ರಿಷಬ್ ಶೆಟ್ಟಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ..!

ಮಂಗಳೂರು: ಕೌಡಿಚ್ಚಾರಿನಲ್ಲಿ ಪಿಕಪ್ ವಾಹನ ಮೋರಿಗೆ ಢಿ*ಕ್ಕಿ…!

ಮಂಗಳೂರು: ಸರ್ಕಾರಿ ಬಸ್ ಮತ್ತು ಕಾರಿನ ಮಧ್ಯೆ ಡಿ*ಕ್ಕಿ; ಮಹಿಳೆಗೆ ಗಾಯ….!

ಬಂಟ್ವಾಳ: ವಸತಿಗೃಹದ ಮುಂಭಾಗದಲ್ಲಿದ್ದ ಸ್ಕೂಟರ್ ಕಳವು; ಇಬ್ಬರ ಬಂಧನ!

ಮುಂಡ್ಕೂರು ರವೀಂದ್ರ ಶೆಟ್ಟಿ ನಿಧನಕ್ಕೆ ಬಂಟರ ಸಂಘದ ಶ್ರದ್ದಾಂಜಲಿ..!

ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಸಂಪೂರ್ಣವಾಗಿ ಡಿಜಿಟಲ್ ಮಾದರಿಯಲ್ಲಿ ಜನಗಣತಿ…!

ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಇದರ ಮಂಗಳೂರು ನಗರ ಘಟಕದ ಅಷ್ಟಮ ಸಂಭ್ರಮ ಕಾರ್ಯಕ್ರಮವು ಮಂಗಳೂರು ನಗರ ಘಟಕದ ಅಧ್ಯಕ್ಷ ತಾರಾನಾಥ ಶೆಟ್ಟಿ ಬೋಳಾರ ಇವರ ಅಧ್ಯಕ್ಷತೆಯಲ್ಲಿ ಶ್ರೀ ಮಂಗಳಾದೇವಿ ದೇವಸ್ಥಾನದ ಪ್ರಾಂಗಣದಲ್ಲಿ ಜರಗಿತು.

error: Content is protected !!