ವಿಜಯನಗರದ ಹಂಪಿಯ ವಿಠ್ಠಲ ಸ್ಮಾರಕ ಬಳಿ ಅಪರೂಪದ ಹಾವು ಪತ್ತೆಯಾಗಿದೆ. ಬಿಳಿ ಬಣ್ಣದ ಮಣ್ಮುಕ್ ತಳಿಯ ಹಾವನ್ನು ನೋಡಿದ ಜನರು ಕೆಲ ಹೊತ್ತು ಆತಂಕಕ್ಕೆ ಒಳಗಾಗಿದ್ದರು.

ಕೂಡಲೇ ಅಲ್ಲಿನ ಸ್ಥಳೀಯರು ಉರಗ ರಕ್ಷಕ ಮಲ್ಲಿಕಾರ್ಜುನಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಆಗಮಿಸಿದ ಸ್ಥಳೀಯರು ಹಾವನ್ನು ರಕ್ಷಣೆ ಮಾಡಿದ್ದಾರೆ.

ಪಿಗ್ಮೇಂಟ್ ಕೊರತೆಯಿಂದ ಚರ್ಮಕ್ಕೆ ಬಣ್ಣ ಬಾರದೆ ಬಿಳಿ ಬಣಕ್ಕೆ ಹಾವು ತಿರುಗಿದೆ. ಹಂಪಿಯಲ್ಲಿ ಕಾಣಿಸಿಕೊಂಡ ಬಿಳಿ ಬಣ್ಣದ ಹಾವು ವಿಷಕಾರಿಯಲ್ಲ ಎಂಬ ಮಾಹಿತಿಯನ್ನು ಉರಗ ರಕ್ಷಕ ತಿಳಿಸಿದರು. ಬಳಿಕ ಅಲ್ಲಿದ್ದ ಸ್ಥಳೀಯರು ಮತ್ತು ಪ್ರವಾಸಿಗರು ನಿಟ್ಟುಸಿರು ಬಿಟ್ಟರು. ನಂತರ ರಕ್ಷಣೆ ಮಾಡಿದ ಹಾವನ್ನು ಸುರಕ್ಷಿತ ಪ್ರದೇಶದಲ್ಲಿ ಮಲ್ಲಿಕಾರ್ಜುನ ಬಿಟ್ಟು ಬಂದಿದ್ದಾರೆ.



