ದೇಶದಾದ್ಯಂತ ಭ್ರಾತೃತ್ವದ ಮಹತ್ವ ಸಾರುವ ರಕ್ಷಾಬಂಧನ ಹಬ್ಬ ಜೋರಾಗಿದೆ. ಸೋದರತ್ವದ ಸಂಕೇತವಾಗಿರುವ ಈ ರಕ್ಷಾ ಬಂಧನವನ್ನು ಆಚರಿಸಲು ಅಕ್ಕ-ತಂಗಿಯರು ಅಣಿಯಾಗುತ್ತಿದ್ದಾರೆ. ಈಗಾಗ್ಲೇ ಅಣ್ಣಂದರಿಗೆ ರಾಖಿ ಕಟ್ಟಿ ಉಡುಗೊರೆ ಕೇಳಲು ಎಷ್ಟೋ ತಂಗಿಯರು ಕಾಯುತ್ತಿದ್ದಾರೆ. ಆದರಂತೆಯೇ ಇಲ್ಲೋಬ್ಬಳು ತಂಗಿ ಏನು ಮಾಡಿದ್ದಾಳೆ ಗೊತ್ತಾ?

ತಂಗಿಯೊಬ್ಬಳು ರಾಖಿ ಕಟ್ಟಿ ಬಳಿಕ ಹಣ ಪಡೆಯಲು ಸಖತ್ ಐಡಿಯಾ ಮಾಡಿದ್ದಾಳೆ. ತನ್ನ ಕೈ ಮೇಲೆ ಮೆಹಂದಿಯಲ್ಲೇ ಕ್ಯೂಆರ್ ಸ್ಕ್ಯಾನರ್ ಬರೆದುಕೊಂಡು ಹಣ ವಸೂಲಿ ಮಾಡಿದ್ದಾಳೆ. ಸದ್ಯ ತಂಗಿಯ ಐಡಿಯಾಗೆ ಭಾರಿ ಮೆಚ್ಚುಗೆ ವ್ಯಕ್ತವಾಗ್ತಿದೆ.
ರಕ್ಷಾಬಂಧನ ಅಣ್ಣ- ತಂಗಿಯರ ನಡುವಿನ ಬಾಂಧವ್ಯವನ್ನು ವೃದ್ಧಿಸುವ ಹಬ್ಬ. ಪ್ರತಿಯೊಬ್ಬ ತಂಗಿ ತನ್ನ ಅಣ್ಣನಿಗೆ ರಾಖಿ ಕಟ್ಟುವ ಮೂಲಕ ಹಬ್ಬ ಆಚರಿಸುತ್ತಾರೆ. ಈ ಹಬ್ಬವನ್ನು ಭಾರತ ದೇಶದಾದ್ಯಂತ ಆಚರಿಸುತ್ತಾರೆ.



