ಬಂಟ್ವಾಳ : ಹಿಂದೂ ಸಮಾಜವನ್ನು ಕೆಣಕಿದರೆ ಸುಮ್ಮನಿರುವುದಿಲ್ಲ, ಹಿಂದೂ ಸಮಾಜದ ಮಹಾಪುರುಷರಿಗೆ ಅಪಮಾನ ಮಾಡಿದರೆ ಸಹಿಸಲು ಸಾಧ್ಯವಿಲ್ಲ ಎಂದು ಆರ್.ಎಸ್.ಎಸ್.ಪ್ರಮುಖರಾದ ಕಲ್ಲಡ್ಕ ಡಾ| ಪ್ರಭಾಕರ್ ಭಟ್ ಹೇಳಿದರು.
ಅವರು ಸ್ವಾತಂತ್ರ್ಯ ವೀರ ದಾಮೋದರ ಸಾವರ್ಕರ್ ಅವಮಾನವನ್ನು ಖಂಡಿಸಿ ವಿಶ್ವಹಿಂದೂಪರಿಷತ್ ಬಜರಂಗಳ ಮಂಚಿ ಘಟಕ ಮತ್ತು ಮಾತೃಶಕ್ತಿ,ದುರ್ಗವಾಹಿನಿ ಮಂಚಿ ಘಟಕದ ವತಿಯಿಂದ ಮಂಚಿ ಗೋಪಾಲಕೃಷ್ಣ ದೇವಸ್ಥಾನದ ವಠಾರದಲ್ಲಿ ನಡೆದ ಹಿಂದೂ ಜಾಗೃತಿ ಸಮಾವೇಶದಲ್ಲಿ ಮಾತನಾಡಿದರು.
ಹಿಂದೂ ಸಮಾಜ ಕ್ಷಣಕ್ಷಣವೂ ಎಚ್ಚರದಿಂದರಬೇಕು. ಲವ್ ಜಿಹಾದ್ ನಂತಹ ಮೋಸದ ಬಲೆಗೆ ಬೀಳಬಾರದು ಎಂದು ಅವರು ಎಚ್ಚರಿಸಿದರು.
ಮಹಿಳಾ ಪರ ಮಾತನಾಡುವ ರಾಜ್ಯದ ಕಾಂಗ್ರೆಸ್ ಸರಕಾರ ಮಂಚಿಯ ಶಾಲಾ ಶಿಕ್ಷಕಿಗೆ ಅನ್ಯಾಯವಾದಗ ಸೌಜನ್ಯಕ್ಕಾದರೂ ವಿಚಾರಿಸುವ ಕೆಲಸ ಯಾಕೆ ಮಾಡಿಲ್ಲ ಎಂದು ಪ್ರಶ್ನಿಸಿದರು. ಇಲ್ಲಿ ಸೌಜನ್ಯಕ್ಕೆ ಬೆಲೆಯಿಲ್ಲದಂತಾಗಿದೆ. ಹಾಗಾಗಿ ಹನ್ನೊಂದು ವರ್ಷಗಳ ಹಿಂದೆ ಅತ್ಯಾಚಾರ ಮಾಡಿ ಕೊಲೆಯಾದ ಅಮಾಯಕ ಶಾಲಾ ಬಾಲಕಿ ಸೌಜನ್ಯ ನಿಗೆ ನ್ಯಾಯಸಿಕ್ಕಿಲ್ಲ ಎಂದು ಹೇಳಿದರು.
ಪದ್ಮಾಲತನಿಂದ ಹಿಡಿದು ಸೌಜನ್ಯ ವರೆಗೆ ನಡೆದ ಸಾಲುಸಾಲು ಕೊಲೆಗಳಿಗೆ ನ್ಯಾಯಸಿಗಬೇಕಾಗಿದೆ ಎಂದು ಅವರು ಒತ್ತಿ ಹೇಳಿದರು. ದೇಶದ್ಯಾಂತ ನಡೆಯುವ ಹೋರಾಟದ ಕಿಚ್ಚು ನೋಡಿದರೆ ಸೌಜನ್ಯ ಎಂಬ ಬಾಲಕಿ ದೇವಿ ರೂಪದಿಂದ ಬಂದಿದ್ದಾಳೆ ಅಂತ ಕಾಣುತ್ತದೆ ಎಂದು ಹೇಳಿದರು. ರಾತ್ರಿಯಿಡಿ ಹುಡುಕಿದರು ಸಿಗದ ಸೌಜನ್ಯನ ಮೃತದೇಹ ಮರುದಿನ ಅದೇ ಸ್ಥಳಕ್ಕೆ ಹೇಗೆ ಬಂತು ಎಂದು ಪ್ರಶ್ನಿಸಿದರು. ಸೌಜನ್ಯ ನಿಗೆ ನ್ಯಾಯ ಸಿಕ್ಕರೆ ಇಡೀ ಮಹಿಳೆಯರಿಗೆ ನ್ಯಾಯ ಸಿಕ್ಕಂತೆ ಎಂದು ಹೇಳಿದರು.
ದೇಶದಲ್ಲಿರುವ ಲಕ್ಷ ಲಕ್ಷ ಮಸೀದಿಗಳು , ಚರ್ಚ್ ಗಳು ಹಿಂದೂಗಳ ಪವಿತ್ರ ನೆಲದಲ್ಲಿದರುವುದು ಎಂಬುದನ್ನು ನೆನಪು ಮಾಡಬೇಕಾಗಿದೆ ಎಂದು ಹೇಳಿದರು. ಸಭಾ ಕಾರ್ಯಕ್ರಮಕ್ಕೂ ಮುನ್ನ ಬೈಕ್ ಚಲೋ ನಡೆಯಿತು. ಜೊತೆಗೆ ಪ್ರತಿ ಮನೆಗೆ ಸಾವರ್ಕರ್ ಪೋಟೋ ಮತ್ತು ಚರಿತ್ರೆ ಪುಸ್ತಕ ವನ್ನು ನೀಡಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿವೃತ್ತ ಸೈನಿಕ ರಮೇಶ್ ರಾವ್ ನೂಜಿಪ್ಪಾಡಿ ವಹಿಸಿದ್ದರು.
ವೇದಿಕೆಯಲ್ಲಿ ವಿಶ್ವಹಿಂದೂ ಪರಿಷತ್ ಪ್ರಾಂತ ಸಹ ಸಂಚಾಲಕ ಶರಣ್ ಪಂಪ್ ವೆಲ್, ವಿಹಿಂಪ ಜಿಲ್ಲಾಧ್ಯಕ್ಷ ಡಾ.ಕೃಷ್ಣ ಪ್ರಸನ್ನ ಪುತ್ತೂರು,ಸಚಿನ್ ಮೆಲ್ಕಾರ್ ಉಪಸ್ಥಿತರಿದ್ದರು.
ಬಾವಿಗೆ ಬಿದ್ದ ಹೆಣ್ಣು ಮಗುವನ್ನು ಸ್ಥಳೀಯ ಯುವಕ ರಕ್ಷಿಸಿದ ಘಟನೆ ವರದಿಯಾಗಿದೆ. ಉಳ್ಳಾಲದಲ್ಲಿ ಆಟವಾಡುತ್ತಾ ಎರಡೂವರೆ ಹರೆಯದ ಮಗುವೊಂದು ದಂಡೆಯಿಲ್ಲದ…
ಸಮಾಜದಲ್ಲಿ ಒಡಕುಂಟು ಮಾಡಿ, ದ್ವೇಷವನ್ನು ಬಿತ್ತುವ ಹಾಗೂ ಶಾಂತಿಯನ್ನು ಕದಡಲು ಪ್ರಚೋದನಾತ್ಮಕ ಭಾಷಣವನ್ನು ಯಾರು ಮಾಡಿದರೂ, ಅವರ ಮೇಲೆ ಪ್ರಕರಣ…
ಕರಾವಳಿಯ ಗಂಡುಕಲೆ ಎಂದೇ ಪ್ರಸಿದ್ಧ ಪಡೆದಿರುವ ಯಕ್ಷಗಾನ ಉತ್ತರ ಪ್ರದೇಶದ ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ ಪ್ರಪ್ರಥಮ ಬಾರಿಗೆ ಪ್ರದರ್ಶನವಾಗಿದೆ.…
ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ' ಕೃತಿಯನ್ನು ಬಿಡುಗಡೆ ಮಾಡಲಾಯಿತು. ಅಮೃತ ಪ್ರಕಾಶನದ 45ನೇ ಸರಣಿ ಕೃತಿ ಕೊಡಗಿನ ಚಿತ್ರ…
ಕಳೆದ ವಾರಗಳಿಂದೀಚೆಗೆ ಸುರಿಯುತ್ತಿರುವ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿಯಾಗಿದೆ. ಇಡ್ಕಿದು ಗ್ರಾಮದ ಬಡಜ ಸುಧಾ ಎಂಬವರ…
ಕೇಂದ್ರ ಸರಕಾರದ ಪಿಎಂಇಜಿಪಿ ಯೋಜನೆ ಅಡಿಯಲ್ಲಿ ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಕೋಟ್ಯಂತರ ರೂ. ಹಣ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿ…