ಮಂಗಳೂರು: ಯಕ್ಷಗಾನ ವಿಶ್ವಮಾನ್ಯತೆಯನ್ನು ಪಡೆಯಬೇಕೆಂಬುದು ನಮ್ಮೆಲ್ಲ ಕರಾವಳಿಗರ ಆಶಯ. ಭಾರತದ ಸಂಸ್ಕೃತಿ ಸಂಸ್ಕಾರವನ್ನು ಬಿಂಬಿಸುವಂತಹ ಕೇಂದ್ರ ಘಟ್ಟ ಎಂದರೆ ಅದು ಲಂಡನ್ನಲ್ಲಿರುವ ನೆಹರೂ ಸೆಂಟರ್ ಎಂದು ಪಟ್ಲ ಫೌಂಡೇಶನ್ನ ಸ್ಥಾಪಕಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಹೇಳಿದ್ದಾರೆ.
ಇವರು ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತಾನಾಡಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನಿಂದ ಸೆಪ್ಟೆಂಬರ್ 9 ರಿಂದ 17ರವರೆಗೆ ಯುರೋಪ್ – ಯಕ್ಷಗಾನ ಅಭಿಯಾನ ನಡೆಯಲಿದೆ. ಈಗಾಗಲೇ ಬೇರೆ ಬೇರೆ ದೇಶಗಳಲ್ಲಿ ಯಕ್ಷಗಾನವನ್ನು ಪಸರಿಸುವ ಕಾರ್ಯ ಮಾಡಿದ್ದೇವೆ. ಯಕ್ಷಗಾನ ಅಭಿಯಾನದಲ್ಲಿ ತೆಂಕುತಿಟ್ಟಿನ ರಾಜ ವೇಷ, ಬಣ್ಣದ ವೇಷ, ಪಗಡಿ ವೇಷ, ಸ್ತ್ರೀ ವೇಷ, ಹಾಸ್ಯ ವೇಷಗಳು ರಾರಾಜಿಸಲಿದ್ದು, ಯುರೋಪ್ ದೇಶದ ಬೇರೆ ಬೇರೆ ಭಾಗಗಳಲ್ಲಿ ಯಕ್ಷಗಾನ ಪ್ರದರ್ಶನಗೊಳ್ಳಲಿದೆ. ಸೆಪ್ಟೆಂಬರ್ 9 ರಂದು ಜರ್ಮನಿಯ ಪ್ರಾಂಕ್ ಫುಟ್ 9, ಸೆ. 11 ರಂದು ಯುಕೆಯ ಮಿಲ್ಟನ್ ಕೇಯ್ನ್ಸ್, ಸೆ. 12 ರಂದು ಯುಕೆಯ ಬಾಸಿಲ್ಡನ್, ಸೆ.13 ರಂದು ಸೆಂಟ್ರಲ್ ಲಂಡನ್, ಯುಕೆ (ವಿಶ್ವ ಪ್ರಸಿದ್ಧ ನೆಹರೂ ಸೆಂಟರ್), 14 ರಂದು ಸ್ಲೋಗ್, ಸೆ.16 ರಂದು ಫ್ರಾನ್ಸ್ ನ ಪ್ಯಾರಿಸ್, ಸೆ.17 ರಂದು ಸ್ವಿಝರ್ ಲ್ಯಾಂಡ್ ನ ಝುರಿಚ್ ನಲ್ಲಿ ಯಕ್ಷಗಾನ ಭರ್ಜರಿ ಪದರ್ಶನಗೊಳ್ಳಲಿದೆ.
ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ' ಕೃತಿಯನ್ನು ಬಿಡುಗಡೆ ಮಾಡಲಾಯಿತು. ಅಮೃತ ಪ್ರಕಾಶನದ 45ನೇ ಸರಣಿ ಕೃತಿ ಕೊಡಗಿನ ಚಿತ್ರ…
ಕಳೆದ ವಾರಗಳಿಂದೀಚೆಗೆ ಸುರಿಯುತ್ತಿರುವ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿಯಾಗಿದೆ. ಇಡ್ಕಿದು ಗ್ರಾಮದ ಬಡಜ ಸುಧಾ ಎಂಬವರ…
ಕೇಂದ್ರ ಸರಕಾರದ ಪಿಎಂಇಜಿಪಿ ಯೋಜನೆ ಅಡಿಯಲ್ಲಿ ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಕೋಟ್ಯಂತರ ರೂ. ಹಣ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿ…
ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ (ರಿ) ದುಬೈ ಘಟಕದ ನಾಲ್ಕನೇ ವರ್ಷದ ದುಬೈ "ಗಡಿನಾಡ ಉತ್ಸವ -2025" ಕಾರ್ಯಕ್ರಮವು ನಗರದ…
ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಿದ ಕಾರ್ಯಕ್ರಮದಲ್ಲಿ ನೂಕು ನುಗ್ಗಲು ಉಂಟಾಗಿ 11ಕ್ಕೂ ಹೆಚ್ಚು ಜನ ಅಸ್ವಸ್ಥರಾದ ಘಟನೆ ಪುತ್ತೂರಿನಲ್ಲಿ ನಡೆದಿದೆ. ಪುತ್ತೂರು…
ಪ್ರತೀ ಕಲಾವಿದರ ಕುಟುಂಬದೊಂದಿಗೆ ಅವರ ಕಷ್ಟ ಸುಖದಲ್ಲಿ ಇರುವಂತಹ ವಾತಾವರಣ ನಿರ್ಮಿಸಬೇಕು. ಕಲಾವಿದರ ಸಂಘಟನಾತ್ಮಕ ಬಲವನ್ನು ಹೆಚ್ಚಿಸುವ ಕೆಲಸವಾಗಲು ಎಲ್ಲರ…