ಮಂಗಳೂರು; ಈಗಾಗಲೇ ಕ್ಯೂ ಆರ್ ಸ್ಕ್ಯಾನ್ ದೇಶದಾದ್ಯಂತ ಭಾರೀ ಪ್ರಚಲಿತದಲ್ಲಿದ್ದು, ಯುವ ಪಿಳಿಗೆಗಳು ಹೆಚ್ಚಾಗಿ ಕ್ಯೂಆರ್ ಸ್ಕ್ಯಾನ್ ನನ್ನೆ ಬಳಸುತ್ತಿದ್ದಾರೆ. ಡಿಜಿಟಲಿಕರಣಕ್ಕೆ ಮತ್ತಷ್ಟು ಪುಷ್ಠಿ ನೀಡಲು ʼಡ್ಯಾಡಿಸ್ ರೋಡ್ ʼ ಸಂಸ್ಥೆಯು ಮಹತ್ವದ ಯೋಜನೆಯನ್ನು ಜನರಿಗೆ ಪರಿಚರಿಸಿದೆ.
ಎಮ್ ಸ್ಕ್ಯಾರ್ ಎಂಟರ್ ಪ್ರೈಸಸ್ ನೂತನವಾಗಿ ʼಡ್ಯಾಡಿಸ್ ರೋಡ್ ʼ ಕ್ಯೂ ಆರ್ ಕೋಡ್ ನ್ನು ನಾರಾಯಣ ದಂಪತಿಗಳು ಲೋಕಾರ್ಪಣೆಗೊಳಿಸಿದ್ದಾರೆ. ಮಂಗಳೂರಿನ ಕೆ.ಎಸ್.ಆರ್ ರೋಡ್ ನಲ್ಲಿರುವ ಉತ್ಸವ ಹೋಟೇಲ್ ನಲ್ಲಿ ಕಾರ್ಯಕ್ರಮ ನಡೆದಿದ್ದು, ಬಳಿಕ
ಕರ್ನಾಟಕ ಸೂಪರ್ ಕೆಸ್ಟ್ ನ ಜಸ್ಟಿನ್ ಅವರು ಮಾತಾನಾಡಿ, ಎಲ್ಲಾ ಜನರಿಗೂ ಈ ಪ್ರೊಡೆಕ್ಟ್ ಬಹಳ ಉಪಯುಕ್ತವಾಗಿರುತ್ತದೆ ಎಂಬುವುದು ನಮಗೆ ಮೊದಲೇ ತಿಳಿದಿದೆ. ಆದ್ರೆ ಇದನ್ನ ಜನರ ಮುಂದೆ ಯಾವ ರೀತಿಯಾಗಿ ತೆಗೆದುಕೊಂಡು ಹೋಗುವುದು ಎಂಬುವುದು ನಮ್ಮ ಪ್ರಶ್ನೆಯಾಗಿತ್ತು. ಅದರೆ ಇದೀಗ ಈ ಸಂಸ್ಥೆ 26 ರಾಜ್ಯಗಳಲ್ಲಿ ಕಾರ್ಯಚರಿಸುತ್ತಿದ್ದು, 273 ಡಿಸ್ತ್ರಿಬ್ಯುಟರ್ ಗಳನ್ನು ಹೊಂದಿದೆ. ಇದರಿಂದ ವಾಹನ ಸವಾರರಿಗೆ ಹಲವು ಪ್ರಯೋಜನಗಳಿವೆ. ಹೌದು, ಒಂದು ವೇಳೆ ಅನಿವಾರ್ಯತೆ ಕಾರಣಗಳಿಂದ ನೋ ಪಾರ್ಕಿಂಗ್ ಸ್ಥಳದಲ್ಲಿ ವಾಹನ ನಿಲ್ಲಿಸಿದ್ರೂ, ವಾಹನಗಳ ಮಾಲಕರನ್ನ ಕ್ಯೂ ಆರ್ ಕೋಡ್ ಮೂಲಕ ಸುಲಭವಾಗಿ ಪತ್ತೆ ಹಚ್ಚಬಹುದಾಗಿದೆ. ಅಪಘಾತದಂತಹ ದುಸ್ಥಿತಿಯಲ್ಲಿಯೂ ಈ ಕ್ಯೂಆರ್ ಬಹಳ ಪ್ರಯೋಜಕಾರಿ ಎಂಬ ಮಾಹಿತಿಯನ್ನು ನೀಡಿದ್ರು. ಇನ್ನೂ ಈ ಸಂದರ್ಭದಲ್ಲಿ ಸಂಸ್ಥೆಯ ಹೆಡ್ ಮಣಿ, ಡಾ. ಗಣೇಶ್ ಕುಮಾರ್, ಮಂಗಳೂರಿನ ಉದ್ಯಮಿ ಅಬ್ದುಲ್ ಬಶೀರ್, ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಪೋಷಕ ಸದಸ್ಯರೂ, ಬಂಟ್ಸ್ ಅಸೋಸಿಯೇಷನ್ ನಾರ್ತ್ ಅಮೆರಿಕಾ (BANA) ಅಧ್ಯಕ್ಷರೂ ಆದ ಶ್ರೀ ಮಂಜುನಾಥ್…
ಉಡುಪಿ ತಾಲೂಕಿನಲ್ಲಿ ಕಡಲ್ಕೊರೆತದಿಂದ ಹಾನಿಗೊಳಗಾಗಿರುವ ಹೆಜಮಾಡಿ, ಪಡುಬಿದ್ರಿ, ಎರ್ಮಾಳು, ಕಾಪು, ಪೊಲಿಪು ಹಾಗೂ ಕಟಪಾಡಿ-ಮಟ್ಟು ಪ್ರದೇಶಗಳಿಗೆ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ.…
ಮಳೆ ಸುರಿದರೆ ಸಾಕು, ಬಂಟ್ವಾಳ ತಾಲೂಕಿನ ಮಾಣಿ ಸಮೀಪದ ಪೆರಾಜೆ ಗ್ರಾಮದ ಜೋಗಿಬೆಟ್ಟು ರಸ್ತೆಯಲ್ಲಿ ಸಂಚಾರ ದುಸ್ತರವಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿಗೆ…
ಭಾರತ ಮತ್ತು ಅಮೆರಿಕಾಗಳು ಅನೇಕ ಸಾಮಾನ್ಯ ಅಂಶಗಳನ್ನು ಹೊಂದಿವೆ. ಅಮೆರಿಕಾ ಅವಕಾಶಗಳ ನಗರ. ಇಲ್ಲಿಗೆ ವಲಸೆ ಬಂದು ವಾಸಿಸುತ್ತಿರುವ ಭಾರತೀಯರು…
ವಾಹನ ದಟ್ಟಣೆ ಹೆಚ್ಚುತ್ತಿರುವ ನಗರದಲ್ಲಿ ಸುಗಮ ಸಂಚಾರಕ್ಕೆ ಸ್ಮಾರ್ಟ್ ಸಿಟಿ ಯೋಜನೆಯಡಿ 181ಕ್ಕೂ ಅಧಿಕ ಎಐ ಸಿ.ಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ.…
ರಾಯಿ ಗ್ರಾಮದ ಪಾಂಚಕೋಡಿ ನಿವಾಸಿ ಜೋಸೆಫ್ ಪಿಂಟೋ ಎಂಬವರ ಪುತ್ರ ಜೀವನ್ ಪಿಂಟೊ ಅವರ ಚಪ್ಪಲಿ ಮತ್ತು ಟಾರ್ಚ್ ಶನಿವಾರ…