ಪಡುಬಿದ್ರಿ: ತೆಂಕ ಎರ್ಮಾಳಿನಲ್ಲಿ ಬ್ಯಾಂಕ್ ಮ್ಯಾನೇಜರ್ ಎಂದು ಕನ್ನಡ ಭಾಷೆಯಲ್ಲಿ ಮಾತಾನಾಡಿ, ಕೆವೈಸಿ ಲಿಂಕ್ ಆಗಿಲ್ಲ, ಒಟಿಪಿ ನೀಡಿ ಎಂದು ಕೇಳಿಕೆಯ ಮೇರೆಗೆ ಒಟಿಪಿ ನೀಡುತ್ತಿದಂತೆ ಖಾತೆಯಿಂದ ಮೂರು ಲಕ್ಷ ರೂಪಾಯಿ ಕಳೆದುಕೊಂಡ ಘಟನೆ ನಡೆದಿದೆ.

ಎರ್ಮಾಳು ತೆಂಕ ಕಿನಾರ ಶಾಲೆಯ ಬಳಿಯ ನಿವಾಸಿ ಶಂಕರ್ ಎಂಬವರು ಹಣ ಕಳೆದುಕೊಂಡವರಾಗಿದ್ದಾರೆ.
ಬಡಪಾಯಿ ಮೀನುಗಾರಿಕೆ ನಡೆಸಿ ಜೀವನ ನಡೆಸುತ್ತಿದ್ದ ಇವರು ರಾತ್ರಿ ಹಗಲೆನ್ನದೆ, ಬಿಸಿಲು ಮಳೆಗೆ ಮೀನುಗಾರಿಕೆ ನಡೆಸಿ ಕೂಡಿಟ್ಟ ಹಣ ವಂಚಕರ ವಂಚನೆಯಿಂದ ಕಳೆದುಕೊಳ್ಳುವಂತಾಗಿದೆ. ಎಲ್ಲಾ ಮಾದ್ಯಮಗಳಲ್ಲೂ ಈ ಆನ್ಲೈನ್ ವಂಚನೆಯ ಬಗ್ಗೆ ಮೋಸ ಹೋಗದಂತೆ ಎಚ್ಚರಿಕೆ ನೀಡಲಾಗುತ್ತಿದೆಯಾದರೂ ದಿನದಿಂದ ದಿನಕ್ಕೆ ವಂಚನೆಗೊಳಗಾಗುವವರ ಸಂಖ್ಯೆ ಅಧಿಕವಾಗುತ್ತಿದೆ. ಇನ್ನೂ ಘಟನೆ ಬಗ್ಗೆ ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



