ಮುಲ್ಕಿ: ಶ್ರೀ ಗಜಾನನ ಸ್ಪೋರ್ಟ್ಸ್ ಕ್ಲಬ್ (ರಿ) ತೋಕೂರು, ಹಳೆಯಂಗಡಿ ವತಿಯಿಂದ ಕರ್ನಾಟಕ ಗ್ರಹ ಮಂಡಳಿ, ಸುಖಾನಂದ ನಗರ ಹೋಗುವ ರಸ್ತೆಯ ಎರಡು ಬದಿಯ ಮರದ ಕೊಂಬೆಗಳನ್ನು ಕಡಿಯುವುದರ ಮೂಲಕ ಸ್ವಚ್ಛತಾ ಕಾರ್ಯಕ್ರಮವನ್ನು ನೆರವೇರಿಸಿತು.

ಈ ಒಂದು ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಪಡುಪನಂಬೂರ್ ಇದರ ಉಪಾಧ್ಯಕ್ಷರಾದ ಹೇಮನಾಥ್ ಅಮೀನ್, ಸಂಸ್ಥೆಯ ಗೌರವಾಧ್ಯಕ್ಷರಾದ ನವೀನ್ ಶೆಟ್ಟಿಗಾರ್, ಸಂಸ್ಥೆಯ ಅಧ್ಯಕ್ಷರಾದ ರಾಮಕೃಷ್ಣ, ಪ್ರಧಾನ ಕಾರ್ಯದರ್ಶಿಯಾದ ರಮೇಶ್, ಉಪಾಧ್ಯಕ್ಷರಾದ ನಾಗೇಶ್, ಕ್ರೀಡಾ ಕಾರ್ಯದರ್ಶಿ ಭವಿಷ್, ಮಹೇಶ್, ಚಂದ್ರಶೇಖರ್, ಸುನಿಲ್, ಜೈಸನ್ , ದಿನೇಶ್ ಉಪಸ್ಥಿತರಿದ್ದರು.



