ಬಜಪೆಯ ತ್ಯಾಜ್ಯ ವಸ್ತುಗಳನ್ನು ಮೆನ್ನಬೆಟ್ಟು ಗ್ರಾಮದಲ್ಲಿರುವ 17 ಎಕರೆ ಗೋಮಾಳ ಜಮೀನಿನಲ್ಲಿ ಘಟಕ ನಿರ್ಮಾಣ ಮಾಡುವುದನ್ನು ತಡೆಗಟ್ಟುವುದು ಮತ್ತು ಈ ಜಮೀನಿನಲ್ಲಿ ದಾಖಲೆಯಾಗಿರುವ ಮಂಜೂರಾತಿಯನ್ನು ರದ್ದು ಮಾಡುವಂತೆ ಮಾನ್ಯ ಜಿಲ್ಲಾಧಿಕಾರಿಗೆ ಮನವಿಯನ್ನು ನೀಡುವ ಹಾಗೂ ಘಟಕ ವಿರೋಧಿಸುವ ಪ್ರತಿಭಟನಾ ಸಭೆ ಕಿನ್ನಿಗೋಳಿ ಪಟ್ಟಣ ಪಂಚಾಯತ್ ನಲ್ಲಿ ನಡೆಯಿತು.

ಈ ಪ್ರತಿಭಟನೆಯಲ್ಲಿ ಸೋಂದಾ ಭಾಸ್ಕರ ಭಟ್, ಸಮಿತಿಯ ಸಂಚಾಲಕ ಸಂಜೀವ ಮಡಿವಾಳ ಕಟೀಲು, ನಿವ್ರತ ಶಿಕ್ಷಕರಾದ ಸೋಂದಾ ಭಾಸ್ಕರ ಭಟ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಈಶ್ವರ ಕಟೀಲು, ಭುವನಾಭಿರಾಮ ಉಡುಪ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಶೈಲಾ ಸಿಕ್ವೇರಾ, ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ಸುನೀಲ್ ಸಿಕ್ವೇರಾ, ಸ್ಟ್ಯಾನಿ ಪಿಂಟೋ, ಸಂತಾನ್ ಡಿಸೋಜ,ಕಿರಣ್ ಶೆಟ್ಟಿ,ಧನಂಜಯ ಶೆಟ್ಟಿಗಾರ್,ಅನೀತಾ,ರಾಜೀವಿ,ಸಾಮಾಜಿಕ ಕಾರ್ಯಕರ್ತರಾದ ಕುಶಲ ಬಲ್ಲಣ,ಬೀದಿ ಬದಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷರಾದ ಗೋವಿಂದ, ಸುಕುಮಾರ್ ಗಿಡಿಗೆರೆ ಕಟೀಲು,ಕೊಂಡೇಲ ಗಿಡಿಗೆರೆ ಪರಿಸರದ ಸಂಘಸಂಸ್ಥೆಗಳ ಜನಪ್ರತಿನಿಧಿಗಳು ಭಾಗವಹಿಸಿದ್ದರು.

ಇದೇ ಸಂದರ್ಭದಲ್ಲಿ ಕಿನ್ನಿಗೋಳಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ನಾಗರಾಜ್ ಅವರಿಗೆ ಘಟಕ ನಿರ್ಮಾಣ ಮಾಡುವುದನ್ನು ನಿಲ್ಲಿಸುವಂತೆ ಮನವಿ ಸಲ್ಲಿಸಲಾಯಿತು.




