ಜನ ಮನದ ನಾಡಿ ಮಿಡಿತ

Advertisement

ಅ. 26 ಭಯಂಕೇಶ್ವರ ದೇವಳದಲ್ಲಿ ಪ್ರಶ್ನಾ ಚಿಂತನೆ

ಬಂಟ್ವಾಳಃ ಪಾಣೆಮಂಗಳೂರು ಶ್ರೀ ಭಯಂಕೇಶ್ವರ ದೇವಳದಲ್ಲಿ ಅ. 26ರಂದು ನಡೆಸಲು ಉದ್ದೇಶಿಸಿರುವ ಪ್ರಶ್ನಾ ಚಿಂತನೆ ಪೂರ್ವಭಾವಿ ಸಭೆಯು ಶ್ರೀ ಕ್ಷೇತ್ರದಲ್ಲಿ ಅ.1 ರಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಘು ಸೋಮಯಾಜಿ ನೇತೃತ್ವದಲ್ಲಿ ನಡೆಯಿತು.
ಅವರು ಮಾತಾಡಿ ಕ್ಷೇತ್ರದ ತಂತ್ರಿ ಗಳಾದ ನಿಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ,
ಪ್ರಸಿದ್ದ ದೈವಜ್ಞರಾದ ಬೇಲ ಪದ್ಮನಾಭ ಶರ್ಮ ಅವರು ಪ್ರಶ್ನಾ ಚಿಂತನೆ ನಡೆಸಿ ಸೂಕ್ತ ಮಾರ್ಗದರ್ಶನ ನೀಡುವರು ಎಂದು ತಿಳಿಸಿದರು.


ಪ್ರಶ್ನಾ ಚಿಂತನೆಗೆ ಧನಾತ್ಮಕವಾಗಿ ಸ್ಪಂದನೆ ನೀಡಿ ಅದರ ಸದುಪಯೋಗವನ್ನು
ಕ್ಷೇತ್ರದ ಸಾನಿಧ್ಯ ಅಭಿವೃದ್ದಿಗಾಗಿ ಬಳಸಿಕೊಳ್ಳಬೇಕು ಎಂದರು. ಕ್ಷೇತ್ರಕ್ಕೆ ನಿತ್ಯವು ಭಕ್ತಾಧಿಗಳ ಸಂಪರ್ಕ ಹೆಚ್ಚಾಗಬೇಕು ಅದಕ್ಕಾಗಿ ಸೌಕರ್ಯ ಅಳವಡಿಸುವುದು. ನಿತ್ಯ ಭಜನಾ ಸಂಕೀರ್ತನೆ ನಡೆಸುವ ಬಗ್ಗೆ ತಿಳಿಸಿದರು.

ವೇದಿಕೆಯಿಂದ ವೈದಿಕರಾದ ವೆಂಕಟರಮಣ ಮುಚ್ಚಿನ್ನಾಯ, ಕೇಶವ ಶಾಂತಿ, ಪ್ರಮುಖರಾದ ರಾಜಾ ಬಂಟ್ವಾಳ್, ಜಗನ್ನಾಥ ಬಂಗೇರ ನಿರ್ಮಾಲ್, ಸಮಿತಿ ಸದಸ್ಯರಾದ ಲೊಕೇಶ್ ನರಹರಿನಗರ ಮಾತನಾಡಿದರು.
ಗುತ್ತು ಮನೆಯ ಕೇಶವ ಶೆಣೈ, ರವಿ ಶೆಣೈ, ಐದು ಮನೆ ಮುಖ್ಯಸ್ಥರಾದ ಹೊಸಲಚ್ಚಿಲು ಯತೀಶ್ ಶೆಟ್ಟಿ, ಕೆದ್ದೇಲು ರಂಜಿತ್, ಕೋಡಿ ಕೇಶವ ಪೂಜಾರಿ, ಪಲ್ಲತಿಲ ಜಯರಾಜ್,
ನಿರ್ಮಾಲ್ ರಾಜೇಶ್ , ಗಣ್ಯರಾದ ರಘು ಸಪಲ್ಯ, ಪ್ರೇಮನಾಥ ಶೆಟ್ಟಿ , ವೇದವ ಗಾಣಿಗ, ಉಲ್ಲಾಸ್ ರೈ ಸೂರಿಕುಮೇರ್, ಪುರುಷೋತ್ತಮ ಬಂಗೇರ ನಾಟಿ ಮತ್ತು ಇತರ ನೇತಾರರು ಉಪಸ್ಥಿತರಿದ್ದರು.


ವ್ಯವಸ್ಥಾಪನಾ ಸಮಿತಿಯ ಕೃಷ್ಣಪ್ಪ ಗಾಣಿಗ ಸ್ವಾಗತಿಸಿ ವಂದಿಸಿದರು. ಮೆನೇಜರ್ ನಾಗೇಂದ್ರ ರಾವ್ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

ಮಂಗಳೂರು: ಆಟವಾಡುತ್ತಾ 15 ಅಡಿ ಆಳದ ನೀರಿದ್ದ ಬಾವಿಗೆ ಬಿದ್ದ ಹೆಣ್ಣು ಮಗು….!

ಮಂಗಳೂರು: ಕಲ್ಲಡ್ಕ ಪ್ರಭಾಕರ್ ಭಟ್ ಅವರ ಭಾಷಣದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ..!

ಬಂಟ್ವಾಳ: ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ “ಶ್ರೀರಾಮನ ಚರಿತ್ರೆಯ” ಯಕ್ಷಗಾನ….!

ಮಂಗಳೂರು: ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ’ ಕೃತಿ ಬಿಡುಗಡೆ..!

ಬಂಟ್ವಾಳ: ಜೋರಾದ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿ..!

ಉಡುಪಿ: ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಮೋಸ ಮಾಡಿದ ಮಹಿಳೆ..!

ದುಬೈ: ಅಕ್ಟೋಬರ್ 25 ರಂದು ದುಬೈನಲ್ಲಿ ದುಬೈ ಗಡಿನಾಡ ಉತ್ಸವ

ಮಂಗಳೂರು: ಅಶೋಕ ಜನಮನ ಕಾರ್ಯಕ್ರಮ ಆಯೋಜನೆ; ನೂಕು ನುಗ್ಗಲು ಉಂಟಾಗಿ ಅಸ್ವಸ್ಥರಾದ 11ಕ್ಕೂ ಹೆಚ್ಚು ಜನ…!

ಬಂಟ್ವಾಳ: ದ.ಕ.ಜಿಲ್ಲಾ ತುಳು ನಾಟಕ ಕಲಾವಿದರ ಒಕ್ಕೂಟ ವಾರ್ಷಿಕ ಮಹಾಸಭೆ; ನೂತನ ಅಧ್ಯಕ್ಷರಾಗಿ ಕಿಶೋರ್ ಡಿ.ಶೆಟ್ಟಿ ಪುನರಾಯ್ಕೆ….!

error: Content is protected !!