ಮುಲ್ಕಿ: ಶ್ರೀ ರಾಧಾ ಸುರಭಿ ಗೋ ಮಂದಿರ, ರಾಷ್ಟ್ರೀಯ ಗೋ ಸೇವಾ ಸಂಸ್ಥಾನ ಬಂಟ್ವಾಳ ಮತ್ತು ಗೋಸೇವಾ ಗತಿ ವಿಧಿ ಕರ್ನಾಟಕದ ಸಂಯುಕ್ತ ಆಶ್ರಯದಲ್ಲಿ ಗೋ ನವರಾತ್ರಿ ಉತ್ಸವದ ಸಂದೇಶ ಮತ್ತು ಉದ್ದೇಶವನ್ನು ಸಾರುವ ಗೋ ರಥಯಾತ್ರೆ ಮುಲ್ಕಿ ಸೀಮೆಯ ಒಂಬತ್ತು ಮಾಗಣೆಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಆಗಮಿಸಿತು.

ದೇವಸ್ಥಾನದ ಆಡಳಿತ ಮೊಕ್ತೇಸರ ಮನೋಹರ ಶೆಟ್ಟಿ, ಸಹಿತ ಭಕ್ತಾದಿಗಳು ಸ್ವಾಗತಿಸಿದರು.
ಬಳಿಕ ದೇವಸ್ಥಾನದ ಅರ್ಚಕ ಶ್ರೀಪತಿ ಉಪಾಧ್ಯಾಯ ನೇತೃತ್ವದಲ್ಲಿ ಗೋಪೂಜೆ ನಡೆಯಿತು.
ಈ ಸಂದರ್ಭ ಸುನಿಲ್ ಆಳ್ವ, ಮಹೀಮ್ ಹೆಗ್ಡೆ, ವೈ ಎನ್ ಸಾಲ್ಯಾನ್, ಗಂಗಾಧರ ಶೆಟ್ಟಿ ಬರ್ಕೆ ತೋಟ ಮತ್ತಿತರರು ಉಪಸ್ಥಿತರಿದ್ದರು.
ರಾಧಾ ಸುರಭಿ ಗೋ ಮಂದಿರ, ರಾಷ್ಟ್ರೀಯ ಗೋ ಸೇವಾ ಸಂಸ್ಥಾನ ಬಂಟ್ವಾಳ ಮತ್ತು ಗೋಸೇವಾ ಗತಿ ವಿಧಿ ಕರ್ನಾಟಕದ ಸಂಯುಕ್ತ ಆಶ್ರಯದಲ್ಲಿ ಗೋ ನವರಾತ್ರಿ ಉತ್ಸವದ ಸಂದೇಶ ಮತ್ತು ಉದ್ದೇಶವನ್ನು ಸಾರುವ ಗೋ ರಥಯಾತ್ರೆ ಮುಲ್ಕಿ ಸೀಮೆ ಅರಮನೆ ಪ್ರವೇಶಿಸಿತು.

ಸೀಮೆಯ ಅರಸರಾದ ದುಗ್ಗಣ್ಣ ಸಾವಂತರು ಗೋವಿಗೆ ವಿಶೇಷ ಪೂಜೆ ಸಲ್ಲಿಸಿದರು.
ಈ ಸಂದರ್ಭ ಪಡುಪಣಂಬೂರು ಗ್ರಾಪಂ ಮಾಜೀ ಅಧ್ಯಕ್ಷ ವಿನೋದ್ ಸಾಲ್ಯಾನ್,ಪಿಸಿಎ ಬ್ಯಾಂಕ್ ನಿರ್ದೇಶಕ ಶ್ಯಾಮ್ ಪ್ರಸಾದ್ , ಗೌತಮ್ ಜೈನ್ ಮುಲ್ಕಿ ಅರಮನೆ ಮತ್ತಿತರರು ಉಪಸ್ಥಿತರಿದ್ದರು.
ಬಳಿಕ ಗೋಯಾತ್ರೆ ಯು ಚಿತ್ರಾಪು ಮೂಲಕ ಮುಲ್ಕಿಗೆ ಸಂಚರಿಸಿತು.







