ಪಿರಿಯಾಪಟ್ಟಣ; ರೋಟರಿ ಭವನದಲ್ಲಿ ಆಯೋಜಿಸಿದ್ದ ಗಾಂಧಿ ಜಯಂತಿ ಕಾರ್ಯಕ್ರಮ ಹಾಗೂ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮವು ಅರ್ಥಪೂರ್ಣವಾಗಿ ವರ್ಣ ರಂಜಿತವಾಗಿ ನಡೆಯಿತು.

ಜೊತೆಗೆ ಧರ್ಮಸ್ಥಳದ ಗ್ರಾಮೀಣಾಭಿವೃದ್ಧಿ ಪದಾಧಿಕಾರಿಗಳು ಕಾರ್ಯಕ್ರಮದ ಮೆರಗನ್ನು ಮತ್ತಷ್ಟು ಹೆಚ್ಚಿಸಿದರು. ಹಿರಿಯ ವಕೀಲ ಬಿ.ವಿ ದೇವೇಗೌಡ ಮಾತಾನಾಡಿ ಜವರೇಗೌಡರು ಗಾಂಧೀಜಿ ಬಗ್ಗೆ ಸವಿವರವಾಗಿ ಮಾತನಾಡಿ ಪ್ರಸ್ತುತ ಸನ್ನಿವೇಷದಲ್ಲಿ ಜಗತ್ತಿನಲ್ಲಿ. ಶಾಂತಿ ನೆಲೆಸಬೇಕಾದರೆ ಗಾಂಧೀಜಿಯ ಅಹಿಂಸಾ ತತ್ವದಿಂದ ಮಾತ್ರ ಸಾಧ್ಯ ಎಂದರು. ಅಧ್ಯಕ್ಷರಾದ ರಾಜೇಗೌಡ ಅವರು ಗಾಂಧಿ ಜಯಂತಿಯ ಮಹತ್ವದ ಬಗ್ಗೆ ಅರಿವು ಮೂಡಿಸಿದರು.
ಹಿರಿಯ ನಾಗರಿಕರಾದ ಮಹಮದ್ ಹಾಗೂ ಸಾವಿತ್ರಮ್ಮ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಅವರಿಗೆ ಹಣ್ಣು ಹಂಪಲದ ಜೊತೆಗೆ ಅಗತ್ಯ ಔಷದೋಪಚಾರಕ್ಕೆ ಸ್ವಲ್ಪ ಹಣ ನೀಡಿ , ಅವರಿಗೆ ಮನೋಸ್ಥೈರ್ಯ ಹೆಚ್ಚಿಸಿ ವೃದ್ಧಾಪ್ಯದ ಸಹಜತೆಯ ಬಗ್ಗೆ ಅರಿವು ಮೂಡಿಸಲಾಯಿತು. ಕಾರ್ಯದರ್ಶಿ ಹೆಗ್ಗಡೆ ವಂದನಾರ್ಪಣೆ ಮಾಡಿದರು. ಈ ಕಾರ್ಯ ಕ್ರಮಕ್ಕೆ Dr ಪ್ರಕಾಶ್ ಬಾಬು ಸಾರ್ ಸಹಕಾರ ನೀಡಿದರು.
ಪಿರಿಯಾಪಟ್ಟಣದ ಸದಸ್ಯರ ಗೈರು ಎದ್ದು ಕಾಣುತ್ತಿತ್ತು.



