ಸಸಿಹಿತ್ಲು ಶ್ರೀ ಭಗವತೀ ತೀಯಾ ಸಂಘದ 15ನೇ ವಾರ್ಷಿಕೋತ್ಸವ ಸಂದರ್ಭದಲ್ಲಿ ಹಿರಿಯರ ಸಮ್ಮುಖದಲ್ಲಿ ಸಂಘದ ಹೊಸ ಪದಾಧಿಕಾರಿಗಳ ಆಯ್ಕೆ ನಡೆಯಿತು.

ಸಂಘದ ಗೌರವ ಅಧ್ಯಕ್ಷರಾಗಿ ಗೀತಾ ಪಿ ಕುಮಾರ್ ಇವರನ್ನು ಆಯ್ಕೆ ಮಾಡಲಾಯಿತು. ಸಂಘದ ಅಧ್ಯಕ್ಷರಾಗಿ ಸುರೇಶ್ ಕೆ ಬಂಗೇರಾ ಇವರನ್ನು ಒಂಬತ್ತನೇ ಬಾರಿಗೆ ಅವಿರೋಧ ಆಯ್ಕೆ ಮಾಡಲಾಯಿತು.
ಪ್ರಧಾನ ಕಾರ್ಯದರ್ಶಿಯಾಗಿ ಶ್ರೀ ರಮೇಶ್ ಬಂಗೇರ ಜೊತೆ ಕಾರ್ಯದರ್ಶಿಯಾಗಿ ನಿತಿನ್ ಕದಿಕೆ ಮತ್ತು ಶ್ರೀಮತಿ ಶ್ವೇತಾ ಸುರೇಶ್ ಆಯ್ಕೆಯಾದರು.
ಕೋಶಾಧಿಕಾರಿಯಾಗಿ ನಲಿನಿ ಬಂಗೇರ ಜೊತೆ ಕೋಶಾಧಿಕಾರಿಯಾಗಿ ವಿದ್ಯಾ,ಶ್ರೀಮತಿ ಸುಮಿತ್ರ, ಆಶಿಶ್ ಬಂಗೇರ,ಆಂತರಿಕ ಲೆಕ್ಕಪರಿಶೋಧಕರಾಗಿ ಮಿಥುನ್ ಬಂಗೇರ ಮತ್ತು ಸಂಧ್ಯಾರಾಜೇಶ್, ಸಾಂಸ್ಕೃತಿಕ ಕಾರ್ಯದರ್ಶಿ ಸಂದೀಪ್ ಕೆರೆಕಾಡು, ಮಾಲತಿ ಬೊಳ್ಳೂರು, ಅಕ್ಷಯ ಸೌಮ್ಯ, ಶ್ರಾವ್ಯ ನಿತಿನ್ ಮತ್ತು ಕ್ರೀಡಾ ಕಾರ್ಯದರ್ಶಿಯಾಗಿ ದೀಪಕ್ ಬಂಗೇರ ಕದಿಕೆ . ದಿನೇಶ್ ಗುಜರಾನ್, ಜಯಂತಿ,ಹರ್ಷ ಇವರ ಆಯ್ಕೆ ಮಾಡಲಾಯಿತು.



