ಉಡುಪಿ: ಅಮ್ಮಣಿ ರಾಮಣ್ಣ ಶೆಟ್ಟಿ ಸಭಾಂಗಣದಲ್ಲಿ ಉಡುಪಿಯಲ್ಲಿ ನಡೆಯಲಿರುವ ವಿಶ್ವ ಬಂಟರ ಕ್ರೀಡಾ ಸಂಗಮ ಮತ್ತು ಸಾಂಸ್ಕೃತಿಕ ವೈಭವದ ಪೂರ್ವಭಾವಿ ಸಭೆ ಜಯಕರ ಶೆಟ್ಟಿ ಇಂದ್ರಾಳಿಯವರ ನೇತ್ರತ್ವದಲ್ಲಿ ಇಂದು ಜರಗಿತು.

ಸಭೆಯ ಅಧ್ಯಕ್ಷತೆಯನ್ನು ಡಾ| ಬಿ.ಬಿ ಶೆಟ್ಟಿ ವಹಿಸಿದ್ದರು.ವಿವಿಧ ಸಮಿತಿಯ ಮುಖ್ಯಸ್ಥರುಗಳು ಕಾರ್ಯಕ್ರಮದ ಪೂರ್ವ ತಯಾರಿ ಬಗ್ಗೆ ಮಾಹಿತಿ ನೀಡಿದರು. ಅಕ್ಟೋಬರ್ 28 ಮತ್ತು 29 ರಂದು ಅಜ್ಜರಕಾಡು ಮೈದಾನ ಮತ್ತು ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮದ ಪ್ರಚಾರದ ವಾಹನದ ಬಿತ್ತಿ ಪತ್ರವನ್ನು ಬಿಡುಗಡೆ ಗೊಳಿಸಲಾಯಿತು.

ಈ ಸಂದರ್ಭದಲ್ಲಿ ಡಾ|ರೋಶನ್ ಶೆಟ್ಡಿ, ಮನೋಹರ್ ಶೆಟ್ಟಿ , ಸಾಯಿ ರಾಧ ಡೆವಲಪರ್ಸ್, ತೋನ್ಸೆ ತ್ಯಾಗರಾಜ ಶೆಟ್ಟಿ ಕೊಲ್ಹಾಪುರ, ಉದಯ್ ಕುಮಾರ್ ಶೆಟ್ಟಿ ಮುನಿಯಲ್, ನಾಗೇಶ್ ಹೆಗ್ಡೆ, ಸಂತೋಷ ಶೆಟ್ಟಿ ಪಡುಬಿದ್ರೆ, ನವೀನ್ ಶೆಟ್ಟಿ ಪಡುಬಿದ್ರೆ, ಶ್ರೀಧರ ಶೆಟ್ಟಿ ಅರೂರು, ಮನೋಹರ ಶೆಟ್ಟಿ ತೋನ್ಸೆ, ಬಂಟರ ಯಾನೆ ನಾಡವರ ಮಾತೃ ಸಂಘ ರಿ ಮಂಗಳೂರು ಇದರ ಉಡುಪಿ ತಾಲ್ಲೂಕು ಕಾರ್ಯಕಾರಿ ಸಮಿತಿಯ ಸದಸ್ಯರಾದ ಭುಜಂಗ ಶೆಟ್ಟಿ ಬ್ರಹ್ಮಾವರ, ಹರೀಶ್ ಶೆಟ್ಟಿ ಚೆರ್ಕಾಡಿ , ನಿತೀಶ್ ಶೆಟ್ಟಿ ಹಿರಿಯಡ್ಕ, ಉಪಸ್ಥಿತರಿದ್ದರು. ಈಶ್ವರ ಚಿಟ್ಪಾಡಿ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.








