ಮುಲ್ಕಿ: ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಕಾರ್ನಾಡ್ ಬೈಪಾಸ್ ಬಳಿ ಮಹಿಳೆಯೊಬ್ಬರು ಪಕ್ಕದ ಮನೆಯ ಬಾವಿಗೆ ಹಾರಿ ಗುರುವಾರ ಬೆಳಿಗ್ಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೃತ ಮಹಿಳೆಯನ್ನು ಕಾರ್ನಾಡ್ ಬೈಪಾಸ್ ಬಳಿಯ ನಿವಾಸಿ ಲಿನೆಟ್ ರಂಜಿತಾ ಸೋನ್ಸ್(34) ಎಂದು ಗುರುತಿಸಲಾಗಿದೆ.
ಮೃತ ಮಹಿಳೆ ಲಿನೆಟ್ ರಂಜಿತಾ ಸೋನ್ಸ್ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು ಕೆ.ಎಂ.ಸಿ ಆಸ್ಪತ್ರೆಯಲ್ಲಿ ನರ್ಸ್ ಆಗಿದ್ದ ರಂಜಿತಾರವರು ಕೊರೊನಾ ಬಳಿಕ ಕೆಲಸದಿಂದ ನಿವೃತ್ತಿ ಪಡೆದಿದ್ದರು.
ಗುರುವಾರ ಬೆಳಿಗ್ಗೆ ಪಕ್ಕದ ಸಂಬಂಧಿಕರ ಮನೆಗೆ ತೆರಳಿದ್ದ ಅವರು ಕ್ಷುಲ್ಲಕ ಕಾರಣಕ್ಕೆ ಜಗಳ ತೆಗೆದು ಮನೆಗೆ ವಾಪಸಾಗಿದ್ದರು. ವಿದೇಶದಲ್ಲಿ ಉದ್ಯೋಗದಲ್ಲಿದ್ದ ಪತಿ ಜೀವನ್ ರವರು ಅಕ್ಟೋಬರ್ ಒಂದರಂದು ವಾಪಸಾಗಿದ್ದು ಘಟನೆ ಸಂದರ್ಭ ಮನೆಯಲ್ಲಿದ್ದರು. ಮನೆಯವರು ರಂಜಿತಾರನ್ನು ಸಮಾಧಾನ ಪಡಿಸುತ್ತಿದ್ದಾಗಲೇ ಏಕಾಏಕಿ ಮನೆ ಹೊರಗಡೆ ಓಡಿಹೋಗಿ ಬೆಳಿಗ್ಗೆ 9 ಗಂಟೆ ಸುಮಾರಿಗೆ ಬಾವಿಗೆ ಹಾರಿದ್ದರು. ಹಿಂದೆಯೇ ಓಡಿಹೋದ ಪತಿ ಜೀವನ್ ಕೊನೇ ಕ್ಷಣದಲ್ಲಿ ರಕ್ಷಿಸುವ ಪ್ರಯತ್ನ ನಡೆಸಿದರೂ ಫಲಕಾರಿಯಾಗಲಿಲ್ಲ.
ತಕ್ಷಣ ಕದ್ರಿ ಅಗ್ನಿಶಾಮಕ ದಳಕ್ಕೆ ಕರೆಸಿ ಪರಿಶಿಲಿಸಿದಾಗ ಫಲಕಾರಿಯಾಗದೆ ಮೃತಪಟ್ಟಿದ್ದರು. 65 ಅಡಿ ಆಳದ ಬಾವಿಯಲ್ಲಿ ಸುಮಾರು 23 ಅಡಿ ನೀರಿತ್ತು. ವಿವಿಧ ಪ್ರಯತ್ನ ನಡೆಸಿದರೂ ಆಕೆಯ ಶವ ಮೇಲೆತ್ತಲು ಅಸಾಧ್ಯವಾಗಿ ಅಗ್ನಿಶಾಮಕ ದಳದ ಸುರೇಶ್ ಶೆಟ್ಟ ಎಂಬವರು ಬಾವಿಗಿಳಿದು ನೀರಿನಲ್ಲಿ ಮುಳುಗಿ ಸುಮಾರು ಒಂದು ಗಂಟೆ ಹುಡುಕಾಡಿದ ಬಳಿಕ ಬಾವಿ ಅಡಿಭಾಗದಲ್ಲಿ ರಂಜಿತಾ ಶವ ಪತ್ತೆಯಾಗಿತ್ತು. ಈತನ್ಮಧ್ಯೆ ಮುಳುಗು ತಜ್ಞ ಈಶ್ವರ್ ಮಲ್ಪೆಯವರಿಗೆ ಕರೆ ಮಾಡಿ ಕರೆಸಲಾಗಿತ್ತು. ಅವರು ಉಚ್ಚಿಲ ತಲುಪುವಷ್ಟರಲ್ಲಿ ಸುರೇಶ್ ಶೆಟ್ಟಿಯವರು ಶವವನ್ನು ಮೇಲಕ್ಕೆತ್ತಿದ್ದರು.
ಕಾಪು ಪಾಂಗಾಳ ಉಳಿಯಾರಗೋಳಿ ಡೇವಿಡ್ ಸೋನ್ಸ್ರವರ ಪುತ್ರಿಯಾಗಿರುವ ರಂಜಿತಾರವರು ಪತಿಯ ಮನೆಯಲ್ಲಿ ಅತ್ತೆ ಮಾವನ ಜತೆ ವಾಸವಿದ್ದರು. ಸದಾ ಏಕಾಂತ ಬಯಸುವ ಅವರು ಯಾರೊಂದಿಗೂ ಹೆಚ್ಚಾಗಿ ಬೆರೆಯುತ್ತಿರಲಿಲ್ಲ. ಮುಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಂಟ್ವಾಳ ತಾಲೂಕಿನ ತೆಂಕಬೆಳ್ಳೂರು ಗ್ರಾಮದ ಕಾಗುಡ್ಡೆ ಎಂಬಲ್ಲಿ ರಾತ್ರಿ ಸುರಿದ ಭಾರೀ ಮಳೆ ಹಾಗೂ ಬಿರುಗಾಳಿಯ ಅಬ್ಬರಕ್ಕೆ ಮನೆಯ ಚಾವಣಿ…
ಬಂಟ್ವಾಳ ತಾಲೂಕಿನ ಸಜೀಪಮೂಡ ಗ್ರಾಮದ ಕೊಳಕೆ ಎಂಬಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಸಂಭವಿಸಿದಂತಹ ಅವಘಡದಲ್ಲಿ ಮನೆಯ ಪೀಠೋಪಕರಣಗಳು ಹಾಗೂ ದಿನನಿತ್ಯ…
ವಾಷಿಂಗ್ಟನ್ ಕರ್ನಾಟಕದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಯು. ಟಿ. ಖಾದರ್ ಫರೀದ್ ಅವರ ಸಾರ್ವಜನಿಕ ಸೇವೆ…
ಫಿಫಾ ವಿಶ್ವಕಪ್ 2026ರ ಫೈನಲ್ ಹಾಗೂ ಸೆಮಿಫೈನಲ್ ಪಂದ್ಯಗಳ ವೇಳೆ ನಡೆದ ಗಲಾಟೆ ಮತ್ತು ನಿಯಮ ಉಲ್ಲಂಘನೆಗಳ ಹಿನ್ನೆಲೆಯಲ್ಲಿ, ಅರ್ಜೆಂಟೀನಾ…
'ನ್ಯೂಯಾರ್ಕ್ ಟೈಮ್ಸ್' ತನ್ನ ವರದಿಯಲ್ಲಿ 'ಪಾಕಿಸ್ತಾನಿ ಕಾಶ್ಮೀರ' ಎಂದು ಉಲ್ಲೇಖಿಸಿರುವುದಕ್ಕೆ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಅಮೆರಿಕದಲ್ಲಿರುವ ಭಾರತೀಯ ರಾಯಭಾರ…
ಚೀನಾ ಪಾಕಿಸ್ತಾನದ ಮೂಲಕ ಇರಾನ್ಗೆ 400 ರಾಕೆಟ್ ಲಾಂಚರ್ಗಳನ್ನು ಪೂರೈಸಿದೆ ಎಂಬ ವರದಿಗಳು ಜಾಗತಿಕ ಆತಂಕಕ್ಕೆ ಕಾರಣವಾಗಿವೆ. ಈ ಕುರಿತು…