ಕಿನ್ನಿಗೋಳಿ : ಶ್ರೀ ಮೂಕಾಂಬಿಕಾ ದೇವಸ್ಥಾನ ಶಾಂತಿನಗರ ತಾಳಿಪಾಡಿ ಗುತ್ತಕಾಡು ಕಿನ್ನಿಗೋಳಿ ಇಲ್ಲಿ ನಡೆಯಲಿರುವ ದೇವಸ್ಥಾನದ ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವದ ಪ್ರಯುಕ್ತ ಸಮಾಲೋಚನೆ ಸಭೆಯು ದೇವಸ್ಥಾನದ ಆವರಣದಲ್ಲಿ ನಡೆಯಿತು.ಮಾರ್ಚ್, 2024 ರ 10,11,12 ರಂದು ಬ್ರಹ್ಮಕಲಶೋತ್ಸವ ನಡೆಯಲಿದೆ.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಚಂದ್ರಶೇಖರ, ಅಧ್ಯಕ್ಷರು ಶ್ರೀ ಮೂಕಾಂಬಿಕಾ ದೇವಸ್ಥಾನದ ಶಾಂತಿನಗರ ವಹಿಸಿದ್ದರು.ಸಭೆಯಲ್ಲಿ ದಿನೇಶ್ ಬಂಡ್ರಿಯಾಲ್ ತಾಳಿಪಾಡಿ ಗುತ್ತು, ಧರ್ಮದರ್ಶಿ ಶ್ರೀ ವಿವೇಕಾನಂದ, ಶ್ರೀ ಮೂಕಾಂಬಿಕಾ ದೇವಸ್ಥಾನದ ಶಾಂತಿನಗರ,ಸುರೇಶ್ ಶೆಟ್ಟಿ ನಡಿಯಾಲ್ ಗುತ್ತು, ಅಧ್ಯಕ್ಷರು, ಮಾರಿಗುಡಿ ದೇವಸ್ಥಾನ ಪಡ್ಯಾಕ್ಯಾರ್, ಭುವನಾಭಿರಾಮ ಉಡುಪ, ಯುಗಪುರುಷ ಕಿನ್ನಿಗೋಳಿ,ದಯಾನಂದ ಭಟ್, ಅಧ್ಯಕ್ಷರು ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನ ತಾಳಿಪಾಡಿ ಮಠ,ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಶ್ರೀ ಸಂತೋಷ್ ಕುಮಾರ್ ಹೆಗ್ಡೆ, ಆಡಳಿತ ಮೊಕ್ತೇಸರರು, ಎಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ.



ಕುಶಲ ಪೂಜಾರಿ ಅಧ್ಯಕ್ಷರು ಬ್ರಹ್ಮ ಶ್ರೀ ನಾರಾಯಣ ಗುರು ಸಂಘ ತಾಳಿಪಾಡಿ, ರೋಕಿ ಪಿಂಟೋ, ಉದ್ಯಮಿ ಕಿನ್ನಿಗೋಳಿ, ದಿನೇಶ್ ಆಚಾರ್, ರಘುರಾಮ ಪುನರೂರು, ಡೋಲ್ಪಿ ಸಂತುಮಯಾರ್, ಶಾಂಭವಿ ಶೆಟ್ಟಿ,ಧನಂಜಯ ಶೆಟ್ಟಿಗಾರ್,ಸಾಗರಿಕ ಪಕ್ಷಿಕೆರೆ,ಮಾಧವ, ಚಿತ್ರಾಕ್ಷಿ ಶೆಟ್ಟಿ, ಮೂಕಾಂಬಿಕಾ ಮಹಿಳಾ ಸೇವಾ ಸಮಿತಿ, ಎಳತ್ತೂರು ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾದ ಮೀರಾ ಶೆಟ್ಟಿ, ಸುಕುಮಾರ್ ಶೆಟ್ಟಿ,ವಿಠಲ ಪೂಜಾರಿ ಬೆದ್ರಡಿ, ದಿವಾಕರ ಕರ್ಕೇರಾ, ಯೋಗೀಶ್ ಕೋಟ್ಯಾನ್, ಕೇಶವ, ಶಶಿಕಾಂತ್, ಹಾಗೂ ಸಮಿತಿಯ ವಿವಿಧ ಪದಾಧಿಕಾರಿಗಳು ಹಾಗೂ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ದಿವಾಕರ ಕರ್ಕೇರಾ ಕಾರ್ಯಕ್ರಮ ನಿರೂಪಿಸಿ, ಶಶಿಕಾಂತ್ ಸ್ವಾಗತಿಸಿ ಧನ್ಯವಾದ ಮಾಡಿದರು.



