ಸಾಲೆತ್ತೂರು; ಸಾಲೆತ್ತೂರು ಗ್ರಾಮದ ಕೊಲ್ಲಾಡಿ ಶ್ರೀ ಧರ್ಮ ದೈವಗಳ ಪುನರುತ್ಥಾನದ ಬಗ್ಗೆ ಕೊಲ್ಲಾಡಿ ಶಾರದಾ ನಾರಾಯಣ ನಿಲಯದಲ್ಲಿ ಸಭೆ ನಡೆದಿದೆ.
ಸುಮಾರು 500ವರ್ಷಗಳಿಂದಲೂ ಪುರಾತನವಾಗಿ ಉತ್ತರದ ಕೊಡಿಯಲ್ ಗುತ್ತಿನಿಂದ ವಲಸೆ ಬಂದು ಸಾಲೆತ್ತೂರು ಗ್ರಾಮದ ಕೊಲ್ಲಾಡಿ ಎಂಬಲ್ಲಿ ನೆಲೆನಿಂತು ವಿಟ್ಲ ಅರಸರ ತುಂಡರಸರಾಗಿ ಊರಿನಲ್ಲಿ ಗೌರವದ ಸ್ಥಾನ ಹೊಂದಿದ ಕುಟುಂಬವಾಗಿತ್ತು ಎಂದು ಅಷ್ಟಮಂಗಲ ಪ್ರಶ್ನೆಯಲ್ಲಿ ತಿಳಿದು ಬಂದಿದೆ.
ಇದೀಗ ದೈವಾಗಳಾದ ನಾಗದೇವರು ರಕ್ತೇಶ್ವರಿ, ಜುಮಾದಿ ಬಂಟ, ಪಂಜುರ್ಲಿ ಕಲ್ಲುರ್ಟಿ ರಾಜನ್ ಗುಳಿಗವನ್ನೂ ಆರಾಧನೆ ಮಾಡಲು ದೈವಜ್ಞರು ಸೂಚಿಸಿದ ಹಿನ್ನೆಲೆಯಲ್ಲಿ ಸಮಿತಿ ರಚನೆ ಮತ್ತು ಇತರ ಕೆಲಸಗಳಿಗೆ ಸಭೆ ಕರೆಯಲಾಗಿದೆ. ಈ ಸಭೆಯ ಅಧ್ಯಕ್ಷತೆ ಕೊಲ್ಲಾಡಿ ರಾಮಯ್ಯ ಶೆಟ್ಟಿ ವಹಿಸಿದ್ದರು. ಶ್ರೀ ಸದಾಶಿವ ದೇವಸ್ಥಾನದ ಅರ್ಚಕರು ಮಾರ್ಗದರ್ಶಕರು ಆದ ವೇದಮೂರ್ತಿ ಶ್ರೀ ಭಾರ್ಗವ ಉಡುಪರು ಸಲಹೆ ಸೂಚನೆ ನೀಡಿದ್ದಾರೆ.
ಪ್ರಥಮ ಹಂತದ ಕಾಮಗಾರಿಗೆ ಚಾಲನೆ ನೀಡಲಾಯಿತು ಹಿರಿಯರಾದ ಕೊರಗಪ್ಪ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು ನೂತನ ಆಡಳಿತ ಟ್ರಸ್ಟ್ ರಚಿಸಲಾಯಿತು
ಈ ಸಂದರ್ಭದಲ್ಲಿ ಶೀನಪ್ಪ ಆಳ್ವಾ ಸದಾಶಿವ ದೇವಸ್ಥಾನದ ಟ್ರಸ್ಟಿ ಪಾಳ್ತಾಜೆ ದೇವಿದಾಸ ಶೆಟ್ಟಿ, ಬಾಲಕೃಷ್ಣ ರೈ ಕೃಷ್ಣಾ ಕಾಂಪ್ಲೆಕ್ಸ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಕೊಲ್ಲಾಡಿ ಬಾಲಕೃಷ್ಣ ರೈ ಅವರು ನಿರೂಪಿಸಿದರು
ಪಾಣೆಮಂಗಳೂರು ಹಳೆಯ ಸೇತುವೆ ಮೇಲೆ ರಿಕ್ಷಾ ನಿಲ್ಲಿಸಿ ಚಾಲನೋರ್ವ ಕಾಣೆಯಾದ ಘಟನೆ ನಡೆದಿದ್ದು, ನೇತ್ರಾವತಿ ನದಿಗೆ ಹಾರಿರುವ ಶಂಕೆ ವ್ಯಕ್ತವಾಗಿದೆ.…
ಬಂಟ್ವಾಳ ತಾಲೂಕಿನ ತುಂಬೆ ಗ್ರಾಮದ ವ್ಯಕ್ತಿಯೋರ್ವರು ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಾಗಿದೆ. ಬೊಳ್ಳಾರಿ ನಿವಾಸಿ ಚೆನ್ನಕೇಶವ ಕಾಣೆಯಾದವರಾಗಿದ್ದು, ದೂರುದಾರರ ಪ್ರಕಾರ,…
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ತಮ್ಮ ಕಚೇರಿಯಲ್ಲಿ ಬಂಟ್ವಾಳ ಪುರಸಭೆಯ ಸಮಗ್ರ ಕುಡಿಯುವ ನೀರಿನ ಯೋಜನೆಯ 2ನೇ…
ಬಂಟ್ವಾಳ ತಾಲೂಕಿನ ಕೇಪು ಗ್ರಾಮ ಪಂಚಾಯತಿಗೆ ಎಮ್.ಎಲ್.ಸಿ ಕಿಶೋರ್ ಕುಮಾರ್ ಪುತ್ತೂರು ಭೇಟಿ ನೀಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ…
ಐವರು ಸ್ನೇಹಿತರು ಪ್ರಯಾಣಿಸುತ್ತಿದ್ದ ಕಾರೊಂದು ನಿಯಂತ್ರಣ ಕಳೆದುಕೊಂಡು ಮೇಲ್ಸೇತುವೆಯ ರಸ್ತೆ ವಿಭಾಜಕಕ್ಕೆ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದ ಚಾಲಕ ಆಸ್ಪತ್ರೆಯಲ್ಲಿ…
ಬಾವಿಗೆ ಬಿದ್ದ ಹೆಣ್ಣು ಮಗುವನ್ನು ಸ್ಥಳೀಯ ಯುವಕ ರಕ್ಷಿಸಿದ ಘಟನೆ ವರದಿಯಾಗಿದೆ. ಉಳ್ಳಾಲದಲ್ಲಿ ಆಟವಾಡುತ್ತಾ ಎರಡೂವರೆ ಹರೆಯದ ಮಗುವೊಂದು ದಂಡೆಯಿಲ್ಲದ…