ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ದಿನೇಶ್ ಗುಂಡೂರಾವ್ ಅನುಮೋದನೆ ಮೇರೆಗೆ ಹಳೆಯಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ನೂತನ ಕಾಲೇಜು ಅಭಿವೃದ್ಧಿ ಸಮಿತಿ ರಚನೆಯಾಗಿದ್ದು, ಈ ಸಮಿತಿಯ ಸದಸ್ಯರನ್ನಾಗಿ ಶ್ರೀ ಮಿಥುನ್ ಎಂ ರೈ, ಎಚ್ ವಸಂತ ಬೆರ್ನಾಡ್, ಪ್ರಮೋದ್ ಕುಮಾರ್, ಗಣೇಶ್ ದೇವಾಡಿಗ ಮುಲ್ಕಿ, ಅಬ್ದುಲ್ ಖಾದರ್, ಅಬ್ದುಲ್ ಅಜೀಜ್, ನವನೀತ್ ಸಾಲಿಯಾನ್, ಜೈ ಕೃಷ್ಣ ಕೋಟ್ಯಾನ್, ಸುದರ್ಶನ್ , ನವೀನ್ ಪಂಜ, ರಜಿಯಾ ಬಾನು, ಅನಿಲ್ ಪೂಜಾರಿ ಸಸಿಹಿತ್ಲು, ಸಂತೋಷ್ ಕುಮಾರ್ ಕೊಪ್ಪಲ, ರವರನ್ನು ನೇಮಕ ಮಾಡಿ ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತರು ಆದೇಶ ಹೊರಡಿಸಿರುತ್ತಾರೆ.

ಮುಂದಿನ ದಿನದಲ್ಲಿ ಈ ಸಮಿತಿಯು ಕಾಲೇಜಿನ ಅಭಿವೃದ್ಧಿಯಲ್ಲಿ ಹಾಗೂ ಕಾಲೇಜಿನ ಆಗುಹೋಗುಗಳಲ್ಲಿ ಕಾರ್ಯನಿರ್ವಹಿಸಲಿದೆ.



