ದಕ್ಷಿಣ ಕನ್ನಡ : ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಮುಂಚೂಣಿಯಲ್ಲಿ ಇರುವ ಮೂಡುಬಿದರೆ ಜೈನ ಮಠ ಮತ್ತು ಸ್ವಾಮೀಜಿ ಇಂದು ಇತಿಹಾಸ ಪ್ರಸಿದ್ಧ ಮೂಡುಬಿದಿರೆಯ ಸಾವಿರ ಕಂಬದ ಬಸದಿಯಲ್ಲಿ” ನಮ್ಮ ದೇಶ, ನಮ್ಮ ಮಣ್ಣು” ಅಭಿಯಾನ ಅಂಗವಾಗಿ ಬುಧವಾರ ಜೈನಮಠದ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಮೃತ್ತಿಕೆ ಸಂಗ್ರಹ ಮಾಡಲಾಯಿತು.

ಭಟ್ಟಾರಕ ಸ್ವಾಮೀಜಿ ಸಂದೇಶ ನೀಡಿ, ದೇಶದ ಪವಿತ್ರ ಕೇಂದ್ರ, ಇತಿಹಾಸ ಪ್ರಸಿದ್ದ ಕೇಂದ್ರಗಳ ಮೃತ್ತಿಕೆ ಸಂಗ್ರಹ ಶುಭ ಸಂಕೇತ. ದೇಶದ ಐಕ್ಯತೆ, ಸಮಗ್ರತೆ, ರಾಷ್ಟ್ರಾಭಿಮಾನ ಹೆಚ್ಚಿಸುವ ಕಾರ್ಯಕ್ರಮ ಅತ್ಯಂತ ಔಚಿತ್ಯಪೂರ್ಣ ಕಾರ್ಯ. ಮೂಡುಬಿದಿರೆ ಅಂಚೆ ಇಲಾಖೆ ಜಾಗೃತಿ ಮೂಡಿಸಿರುವುದು ಉತ್ತಮ ನಡೆ ಎಂದು ಅಭಿನಂದಿಸಿದರು. ಅಂಚೆ ಇಲಾಖೆಯ ಸಹಾಯಕ ಸುಪೇರಿಡೆಂಟ್ ಪ್ರಹ್ಲಾದ್, ಅಂಚೆಪಾಲಕಿ ಉಷಾ, ಪೋಸ್ಟ್ಮ್ಯಾನ್ ಗಣೇಶ್ ಗೌಡ, ಪ್ರಮುಖರಾದ ವಾಣಿಶ್ರೀ, ಅರುಣಾ ಕ್ಷಿ ಜಯರಾಮ ಶೆಟ್ಟಿ ಉಪಸ್ಥಿತರಿದ್ದರು.



