ಜನ ಮನದ ನಾಡಿ ಮಿಡಿತ

Advertisement

ಶಿಕ್ಷಣದ ಆಯಾಮ ಬಹಳ ದೊಡ್ಡದು; ಡಾ.ನಾ ಸೋಮೇಶ್ವರ

ಮೂಡುಬಿದಿರೆ: ಶಿಕ್ಷಣ ಅಂದ್ರೆ ಜ್ಞಾನ , ಕೌಶಲ್ಯ , ಸೃಜನಶೀಲತೆ ಸಮಸ್ಯೆ ನಿವಾರಣೆ, ಮೌಲ್ಯಗಳು ಎಂದು ಹೇಳಬಹುದು. ಪ್ರತಿಯೊಂದು ಮಗುವಿಗೂ ನಿಜವಾದ ಪಾಠ ಶಾಲೆ ಮನೆಯೇ ಆಗಿರುತ್ತದೆ. ಅಲ್ಲಿ ತಾಯಿಯೇ ಮೊದಲು ಗುರುವಾಗುತ್ತಾಳೆ.

ಇನ್ನು ಶಾಲೆಗಳಲ್ಲಿ ಕಲಿಯಬೇಕು ಎಂಬ ಹಂಬಲ ವಿದ್ಯಾರ್ಥಿಗಳಲ್ಲಿ ಬರುವಂತಹ ಪರಿಸರವನ್ನು ಅಧ್ಯಾಪಕನಾದವನು ಒದಗಿಸಬೇಕು. ಶಿಕ್ಷಣ ಪರಿಪೂರ್ಣವಾಗಬೇಕಾದರೆ ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು ಪ್ರಯತ್ನಿಸಬೇಕು. ಈ ನಿಟ್ತಿನಲ್ಲಿ ಮಕ್ಕಳಲ್ಲಿ ಒಂಭತ್ತು ವಿಧದ ಜನ್ಮದತ್ತ ಪ್ರತಿಭೆಗಳಿರುತ್ತವೆ. ಅದನ್ನು ಗುರುತಿಸಿ ಉತ್ತಮ ಮಾರ್ಗದರ್ಶನ ನೀಡುವುದು ಅಧ್ಯಾಪಕನ ಕರ್ತವ್ಯವಾಗಬೇಕು. ಮಕ್ಕಳ ಆಸಕ್ತಿ ಕ್ಷೇತ್ರವನ್ನು ಗಮನಿಸುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು. ಶಿಕ್ಷಣವನ್ನು ನೀಡುವವರು ಯಾವುದೇ ಪ್ರತಿಫಲವನ್ನು ನಿರೀಕ್ಷಿಸಬಾರದು ಹಣಕ್ಕಾಗಿ ಯಾವತ್ತೂ ಪಾಠವನ್ನು ಹೇಳಬಾರದು ಅದು ಸೇವೆಯಾಗಬೇಕು.


ಎಲ್ಲಿ ವೃತ್ತಿಗೆ ಹಣ ಆಮೀಷವಾಗುತ್ತದೆಯೋ ಅಲ್ಲಿ ವ್ಯಾಪಾರೀಕರಣವಾಗುತ್ತದೆ. ಸಮಚಿತ್ತ, ಅದಮ್ಯಾ ಒಲವು, ಅನ್ವೇಷಣಾ ಮನೋಭಾವ , ಸಮರ್ಪಕ ಸಂವಹನ ಸಾಮರ್ಥ್ಯ, ನಿರಂತರ ಕಲಿಕೆ , ಸೃಜನಶೀಲತೆ, ತಾಳ್ಮೆಯಿಂದ ಆಲಿಸುವಿಕೆ, ನಿತ್ಯ ಪೂರ್ವ ಸಿದ್ಧತೆ , ಸಹಾನುಭೂತಿಯ ನಾಯಕತ್ವ, ವಿಜ್ಞಾನ ವಿಶೇಷಗಳ ಪ್ರಾಥಮಿಕ ತಿಳುವಳಿಕೆಯನ್ನು ಅಧ್ಯಾಪಕನಾದವನು ಹೊಂದಿರಬೇಕೆಂದು ಚಂದನ ವಾಹಿನಿಯ “ಥಟ್ ಅಂತ ಹೇಳಿ” ಖ್ಯಾತಿಯ ಡಾ.ನಾ. ಸೋಮೇಶ್ವರ ಅವರು ಮೂಡುಬಿದಿರೆಯ ಕಲ್ಲಬೆಟ್ಟುವಿನಲ್ಲಿರುವ, ಎಕ್ಸಲೆಂಟ್ ವಿದ್ಯಾಸಂಸ್ಥೆಯಲ್ಲಿ ಆಯೋಜಿಸಿದ್ದ ವಿದ್ಯಾರ್ಥಿ -ಉಪನ್ಯಾಸಕರ ಕಾರ್ಯಾಗಾರದಲ್ಲಿ ಉತ್ತಮ ಅಧ್ಯಾಪಕರಿಗೆ ಇರಬೇಕಾದ ಲಕ್ಷಣಗಳ ಕುರಿತು ಮಾತನಾಡಿದರು. ಕಾರ್ಯಕ್ರಮದಲ್ಲಿ ಎಕ್ಸಲೆಂಟ್ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಯುವರಾಜ್ ಜೈನ್, ಪ್ರಾಂಶುಪಾಲರಾದ ಪ್ರದೀಪ್ ಕುಮಾರ್ ಶೆಟ್ಟಿ, ಮುಖ್ಯೋಪಾಧ್ಯಾಯರಾದ ಶಿವಕುಮಾರ್ ಭಟ್ , ಸೆಂಟ್ರಲ್ ಶಾಲೆಯ ಪ್ರಾಂಶುಪಾಲೆ ದಿವ್ಯಾ ಬಾಳಿಗ ಹಾಗೂ ಸಂಸ್ಥೆಯ ಅಧ್ಯಾಪಕ ವೃಂದದವರು ಉಪಸ್ಥಿತರಿದ್ದರು. ಉಪನ್ಯಾಸಕ ರಂಜಿತ್ ಜೈನ್ ಕಾರ್ಯಕ್ರಮವನ್ನು ನಿರೂಪಿಸಿದರು.

Leave a Reply

Your email address will not be published. Required fields are marked *

ಮಂಗಳೂರು: ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ’ ಕೃತಿ ಬಿಡುಗಡೆ..!

ಬಂಟ್ವಾಳ: ಜೋರಾದ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿ..!

ಉಡುಪಿ: ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಮೋಸ ಮಾಡಿದ ಮಹಿಳೆ..!

ದುಬೈ: ಅಕ್ಟೋಬರ್ 25 ರಂದು ದುಬೈನಲ್ಲಿ ದುಬೈ ಗಡಿನಾಡ ಉತ್ಸವ

ಮಂಗಳೂರು: ಅಶೋಕ ಜನಮನ ಕಾರ್ಯಕ್ರಮ ಆಯೋಜನೆ; ನೂಕು ನುಗ್ಗಲು ಉಂಟಾಗಿ ಅಸ್ವಸ್ಥರಾದ 11ಕ್ಕೂ ಹೆಚ್ಚು ಜನ…!

ಬಂಟ್ವಾಳ: ದ.ಕ.ಜಿಲ್ಲಾ ತುಳು ನಾಟಕ ಕಲಾವಿದರ ಒಕ್ಕೂಟ ವಾರ್ಷಿಕ ಮಹಾಸಭೆ; ನೂತನ ಅಧ್ಯಕ್ಷರಾಗಿ ಕಿಶೋರ್ ಡಿ.ಶೆಟ್ಟಿ ಪುನರಾಯ್ಕೆ….!

ಬಂಟ್ವಾಳ: ಮೊಡಂಕಾಪು ಆಯ್ಯಪ್ಪ ಮಂದಿರದಲ್ಲಿ ನಡೆದ ಸಭೆಯಲ್ಲಿ ಮೂರನೇ ಅವಧಿಯ ಅಧ್ಯಕ್ಷರಾಗಿ ಆಯ್ಕೆಯಾದ ಸುನಿಲ್ ಎನ್

ಬಂಟ್ವಾಳ: ಸುರಿದ ಮಳೆಗೆ ಅವರಣಗೋಡೆ ಕುಸಿದು ಬಿದ್ದು ಹಾನಿ…!

ಪುತ್ತೂರಿನ ಪ್ರಕರಣ, ಕಾರ್ಕಳದ ಅಭಿಷೇಕ್ ಆತ್ಮಹತ್ಯೆಗೆ ಸಂಬಂಧಿಸಿ ಗ್ರಹಸಚಿವರಿಗೆ ಐವನ್ ಡಿಸೋಜಾ ಅವರಿಂದ ಮನವಿ

error: Content is protected !!