ದಕ್ಷಿಣ ಕನ್ನಡ : ಮೂಡಬಿದ್ರೆ ತಾಲೂಕು, ಮೂಡು ಕೋಣಾಜೆ ಗ್ರಾಮದ ಆನಂದ ಪೂಜಾರಿ ಎಂಬವರ ಜಮೀನಿಗೆ ನೀರು ಉಣಿಸುತ್ತಿದ್ದ ಕೃಷಿ ಪಂಪನ್ನು ದುಷ್ಕರ್ಮಿಗಳು ರಾತ್ರಿ ಹಾಳು ಮಾಡಿದ ಘಟನೆ ವರದಿಯಾಗಿದ್ದು, ಮೂಡಬಿದಿರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ತಿಳಿದು ಬಂದಿದೆ.
ಪಂಪು ಸೆಟ್ಟಿನ ಬೋರಿಗೆ ಸಂಪರ್ಕಿಸುವ ಪೈಪನ್ನು ಕಿಡಿಗೇರಿಗಳು ತುಂಡರಿಸಿದ್ದು ಪಂಪು ಹಾಗೂ ಪೈಪು ಎರಡು ಬೋರ್ ವೆಲ್ ಒಳಗೆ ಸಿಲುಕಿಕೊಂಡು ಜೊತೆಗೆ ವಿದ್ಯುತ್ ಸಂಪರ್ಕಗೊಳಿಸುವ ವೈರನ್ನು ತುಂಡು ಮಾಡಿ ಬೋರ್ ನ ಒಳಗೆ ತಳ್ಳಲಾಗಿದ್ದು, ಮುಂದಿನ ದಿನಗಳಲ್ಲಿ ಆನಂದ ಪೂಜಾರಿಯವರ ಗದ್ದೆ ಹಾಗೂ ತೋಟಕ್ಕೆ ನೀರುಣಿಸಲು ಕಷ್ಟ ಸಾಧ್ಯವಾಗುವ ಸಾಧ್ಯತೆ ಇದೆ.



ಪರಸ್ಪರ ಭೂಮಿಗೆ ಸಂಬಂಧಿಸಿದ ವ್ಯಾಜ್ಯದಿಂದ ಈ ಘಟನೆ ಸಂಭವಿಸಿದೆ ಎಂದು ಮೇಲ್ನೋಟಕ್ಕೆ ವರದಿಯಾಗಿದ್ದು, ಪೊಲೀಸರ ತನಿಕೆಯಿಂದಷ್ಟೇ ಸತ್ಯ ಹೊರ ಬರಬೇಕಿದೆ,
ಸದ್ಯ ಮೂಡಬಿದ್ರೆ ತಾಲೂಕಿನಲ್ಲಿ, ಕೆಲವು ಕೃಷಿಕರು ವ್ಯಾಪ್ತಿಮೀರಿ ಅಕ್ರಮ ಸಕ್ರಮ ಭೂಮಿಯನ್ನ ಕಬಳಿಸುವ ಪ್ರಯತ್ನದಲ್ಲಿದ್ದು, ತಾಲೂಕಿನ ಹಲವು ಕಡೆ ಘರ್ಷಣೆಗೆ ಕಾರಣವಾಗುತ್ತಿದ್ದು, ತಹಶೀಲ್ದಾರರು ಮತ್ತು ಕಂದಾಯ ಇಲಾಖೆ ಸಿಬ್ಬಂದಿಗಳು ಸೂಕ್ತ ಕ್ರಮ ಕೈಗೊಂಡು, ಮಿತಿ ಮೀರಿದ ಅಕ್ರಮ ಸಕ್ರಮ ಜಮೀನನ್ನು ವಶಪಡಿಸಿಕೊಂಡಲ್ಲಿ ಮಾತ್ರವೇ ಸರಕಾರಿ ಭೂಮಿ ರಕ್ಷಿಸುವುದರ ಜೊತೆಗೆ, ಕೃಷಿ ಜನರ ಒಳಗಿನ ವೈಶಮ್ಯಗಳನ್ನ ಕಡಿಮೆ ಮಾಡಬಹುದಾಗಿದೆ ಎಂಬುದು ನಾಗರೀಕರ ಅಭಿಪ್ರಾಯ.




