

ತುಳುನಾಡಿನ ಕಂಬಳ ಹಿರಿಯರು ಹಿಂದಿನಿAದ ಮಾಡಿಕೊಂಡು ಬಂದಿರುವ ಒಂದು ಪದ್ದತಿ. ಕಂಬಳ ಶಿಸ್ತು ಬದ್ಧವಾಗಿ ನಡೆಯಬೇಕು. ಈ ನಿಟ್ಟಿನಲ್ಲಿ ಪ್ರಾಯೋಗಿಕವಾಗಿ ಕಂಬಳ ನಡೆಸಿದ್ದೇವೆ ಎಂದು ಜಿಲ್ಲಾ ಕಂಬಳ ಸಮಿತಿಯ ಅಧ್ಯಕ್ಷರಾದ ಬೆಳಪು ದೇವಿಪ್ರಸಾದ್ ಶೆಟ್ಟಿಯವರು ಹೇಳಿದ್ದಾರೆ. ಇವರು ಕಾರ್ಕಳದ ಮಿಯಾರು ಲವಕುಶ ಜೋಡುಕೆರೆಯಲ್ಲಿ ನಡೆದ ಪ್ರಾಯೋಗಿಕ ಕಂಬಳದಲ್ಲಿ ಮಾತಾನಾಡಿದ್ರು. ಇದೇ ವೇಳೆ ಲೋಕೇಶ್ ಶೆಟ್ಟಿಯವರು ಮಾತಾನಾಡಿ, ಸೂರ್ಯ ಚಂದ್ರರು ಇರುವವರಿಗೆ ಈ ಕಂಬಳ ಶಾಶ್ವತವಾಗಿರಲಿ. ಅರ್ಹ ವ್ಯಕ್ತಿಗಳನ್ನು ಆಯ್ಕೆ ಮಾಡುವ ಮೂಲಕ ಒಂದು ಉತ್ತಮ ಸಮಿತಿ ನಿರ್ಮಾಣವಾಗಿದೆ ಅಂತ ಮಾಹಿತಿಯನ್ನು ನೀಡಿದ್ದಾರೆ. ಇನ್ನೂ ಈ ಸಂದರ್ಭದಲ್ಲಿ ಜಿಲ್ಲಾ ಸಮಿತಿ ಕಾರ್ಯಧ್ಯಕ್ಷರಾದ ಗುಣಪಾಲ ಕಡಂಬ, ಪ್ರಸಿದ್ಧ ಓಟದ ಕೋಣದ ಮಾಲಕರಾದ ರಾಯಿ ಶಿತಲ ಅಗರಿ ರಾಜೇಶ್, ಜಿಲ್ಲಾ ಸಮಿತಿ ಗೌರವ ಸಲಹೆಗಾರರಾದ ಬಿ ಆರ್ ಶೆಟ್ಟಿ ಕೂಳೂರು ಪೊಯ್ಯೆಲು, ಜಿಲ್ಲಾ ಸಮಿತಿ ತೀರ್ಪುಗಾರರ ಸಂಚಾಲಕರಾದ ವಿಜಯ್ಕುಮಾರ್ ಕಂಗಿನಮನೆ, ಖ್ಯಾತ ಕೋಣದ ಮಾಲಕರಾದ ದಿನೇಶ್ ಶೆಟ್ಟಿ ಉಪಸ್ಥಿತರಿದ್ದರು.



